ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಹ್ಯಾಪಿ ಮೇರಿ ಕ್ರಿಸ್ಮಸ್..

ಕ್ರಿಸ್ ಮಸ್ ಅಂದರೆ ಪಶ್ಚಿಮದ ದೇಶಗಳಲ್ಲಿ ಕ್ರೈಸ್ತ ಜಗತ್ತು. ಇಂಡಿಯಾದಲ್ಲಿ ಅದೊಂದು ಧಾರ್ಮಿಕ ಆಚರಣೆ ಅಲ್ಲ. ಪ್ರೀತಿ, ಸ್ನೇಹ, ಸೌಹಾರ್ದತೆಯ ಸಂಭ್ರಮ. ಡಿಸೆಂಬರ್ 24ರಿಂದಲೇ ಕೇಕ್ ಸುಗ್ಗಿ ಶುರುವಾಗಿಬಿಡುತ್ತದೆ. ಬೆಂಗಳೂರಿನ ನೀಲಗಿರಿಸ್ ಕೇಕ್, ಕೇಕ್ ಶೋ.. ಕ್ರೈಸ್ತೇತರರೇ ಜಾಸ್ತಿ ಇರುವ ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ, ಬ್ರಿಗೇಡ್ ರೋಡ್, ಪ್ರತಿ ಶಾಪಿಂಗ್ ಮಾಲುಗಳಲ್ಲಿ ಕ್ರಿಸ್ ಮಸ್ ಕಳೆಕಟ್ಟುತ್ತದೆ. ಬೆಳಕಿನ ಭವ್ಯತೆ, ಬಣ್ಣ ಬಣ್ಣದ ಸ್ಟಾರ್, ಅಬ್ಬರದ ಸಂಗೀತ... ಥೇಟು ಗಣಪನ ಹಬ್ಬದಂಥ ವಾತಾವರಣ ಸೃಷ್ಟಿಯಾಗಿರುತ್ತದೆ. ಹೌದು ಅಷ್ಟಕ್ಕೂ ಇಂಡಿಯಾ ತುಂಬ ಕ್ರೈಸ್ತರೇ ತುಂಬಿಕೊಂಡಿದ್ದಾರಾ! ಎಂದು ಪಶ್ಚಿಮದ ಕ್ರೈಸ್ತರೂ ನಾಚುವಂಥ ಕ್ರಿಸ್ ಮಸ್ ಇಲ್ಲಿ ವಿಜೃಂಭಿಸುತ್ತದೆ. ಧಾರವಾಡದ ಕಿಟೆಲ್ ಸೈನ್ಸ್ ಕಾಲೇಜಿನಲ್ಲಿ ನಾನು ಪದವಿ ಓದುತ್ತಿದ್ದಾಗ ಕ್ರಿಸ್ ಮಸ್ ಬಂತೆಂದರೆ ನಮಗೆಲ್ಲ ಈವೆಂಟು, ರಜಾಕಾಲ. ನಾನೂ ಕಾಲೇಜಿನ ಗ್ರೂಪ್ ಸಾಂಗ್ ಟೀಂನಲ್ಲಿ ಹಾಡುಗಾರನಾಗುತ್ತಿದ್ದೆ. ಎಲ್ಲ ಚರ್ಚ್ ಸಂಗೀತದ ಧುನ್ ಗಳೇ. ಕೆಲ ಕ್ರೈಸ್ತ ಹುಡುಗರು ನನ್ನನ್ನು ಅದೆಷ್ಟು ಬಾರಿ ಪಿಯಾನೊ, ವಯೊಲಿನ್, ಗಿಟಾರ್ ಕಲಿಸ್ತೀನಿ ಬಾ ಎಂದು ಗೋಗರೆಯುತ್ತಿದ್ದರು. ಅದರಲ್ಲಿನ ಕೆಲ ಗೆಳೆಯರು ಈಗ ರಾಜ್ಯದ ವಿವಿಧ ಭಾಗಗಳಲ್ಲಿ ಪಾದ್ರಿಗಳಾಗಿದ್ದಾರೆ. ಮ್ಯಾಡ್ಸ್ MADS ಎನ್ನುವ ನಮ್ಮ ಗೆಳೆಯರ ಗುಂಪಿನ ಮೊದಲ  ಅಕ್ಷರ M ಅಂದರೆ ಮ್ಯಾಥ್ಯು ನಮ್ಮ ಅಕ್ಕರೆಯ ಮಿತ್ರ. ಆತ ಬಹುಶಃ ಎಲ್ಲಾ ಇನ

ವೈಯಕ್ತಿಕವಾದದ ರಾಜಕೀಯ ಇನ್ನೂ ಅನಿವಾರ್ಯವೇ?

ಲೋಕಸಭೆ, ವಿಧಾನಸಭೆಗೆ ನಡೆವ ಚುನಾವಣೆಗಳಲ್ಲಿ ವೈಯಕ್ತಿಕವಾದವೇ ವಿಜೃಂಭಿಸುತ್ತಿದೆ. ಇಡೀ ದೇಶ ಸೋನಿಯಾ, ರಾಹುಲ್, ಅಡ್ವಾಣಿ... ಎನ್ನುವ ಹೆಸರುಗಳ ಆಧಾರದಲ್ಲಿ ಒಂದು ವ್ಯವಸ್ಥೆಯನ್ನು ರೂಪಿಸಿಕೊಳ್ಳುತ್ತಿದೆ. ಕಾಶ್ಮೀರದಲ್ಲಿ ಫಾರೂಕ್, ಓಮರ್ ಅಬ್ದುಲಾ. ಉತ್ತರ ಪ್ರದೇಶದಲ್ಲಿ ಮಾಯಾವತಿ, ಮುಲಾಯಂ. ಗುಜರಾತಿನಲ್ಲಿ ನರೇಂದ್ರ ಮೋದಿ. ಬಿಹಾರದಲ್ಲಿ ಲಾಲೂ ಯಾದವ್, ನಿತೀಶ್ ಕುಮಾರ್. ದಕ್ಷಿಣದ ತಮಿಳುನಾಡಿನಲ್ಲಿ ಕರುಣಾನಿಧಿ, ಜಯಲಲಿತಾ. ಆಂಧ್ರದಲ್ಲಿ ನಾಯ್ಡು, ಚಿರಂಜೀವಿ, ಜಗನ್ ಮತ್ತು ಕರ್ನಾಟಕದಲ್ಲಿ ಯಡಿಯೂರಪ್ಪ, ದೇವೇಗೌಡ, ಕುಮಾರಸ್ವಾಮಿ... ಮತ್ತಿತರರ ವೈಯಕ್ತಿಕ ಮಹತ್ವಾಕಾಂಕ್ಷೆ, ರಾಜಕೀಯ ಹಿತಾಸಕ್ತಿಗಳೇ ಈಗ ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿರುವುದನ್ನು ಪ್ರಾದೇಶಿಕ ಮಟ್ಟದಲ್ಲೂ ಕಾಣುತ್ತಿದ್ದೇವೆ. ವೈಯಕ್ತಿಕವಾದದ ಹಿತಾಸಕ್ತಿ ಕಾಪಾಡಲು ತಮ್ಮದೇ ಸಿದ್ಧಾಂತಗಳು, ಪಕ್ಷ ಮತ್ತು ಸಮೀಕರಣಗಳನ್ನು ಇವರು ರೂಪಿಸಿಕೊಳ್ಳುತ್ತಾರೆ. ಜಾತಿ, ಹಣ, ತೋಳ್ಬಲಗಳ ಬಳಕೆಯೂ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಇದೆಲ್ಲ ಪ್ರಜಾಪ್ರಭುತ್ವ ಹೆಸರಲ್ಲಿ ತತ್ವರಹಿತ ರಾಜಕೀಯ. ಅರಸೊತ್ತಿಗೆಯ ಮತ್ತೊಂದು ರೂಪದಂತಿದೆ. * * * ಗುಜರಾತಿನಲ್ಲಿ ಮೋದಿಯಿಂದಾಗಿ ಬಿಜೆಪಿ ಉಳಿದುಕೊಂಡಿದೆ. ಬಿಹಾರದಲ್ಲಿ ನಿತೀಶ್ ಕುಮಾರನಿಂದಾಗಿ ಎನ್ ಡಿ ಎ ಬದುಕುಳಿಯುತ್ತಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯಿಂದಾಗೇ ಬಿಎಸ್ಪಿ ಉಸಿರಾಡುತ್ತಿದೆ. ತಮಿಳುನಾಡಿನಲ್ಲಿ ಡಿಎಂಕೆ ಉಸಿರಾಡುತ್ತಿ

ಸೀಜರ್- ಕ್ಲಿಯೊಪಾತ್ರಾ ಹುಟ್ಟಿ ಬಂದಿದ್ದಾರಾ?

ರೋಮನ್ ಸಾಮ್ರಾಜ್ಯ ಸ್ಥಾಪನೆಗೆ ಕಾರಣನಾದ ಪರಾಕ್ರಮಿ ಸೀಜರ್, ಮಹತ್ವಾಕಾಂಕ್ಷೆಯ ಹದಿಹರೆಯದ ಸುಂದರ ತರುಣಿ ಕ್ಲಿಯೊಪಾತ್ರಾಳಿಗಾಗಿ ಏನೆಲ್ಲ ಮಾಡುತ್ತಾನೆ. ಅವಳ ಗುಂಗಲ್ಲಿ ಯಾರ ಮಾತೂ ಕೇಳದೇ ಅಪಾಯಗಳನ್ನು ತಂದುಕೊಳ್ಳುತ್ತಾನೆ. ಕ್ಲಿಯೊಪಾತ್ರ ತನ್ನ ಮಹಾತ್ವಾಕಾಂಕ್ಷೆ ಈಡೇರಿಕೆಗೆ ಸೀಜರನನ್ನೇ ಬಳಸಿಕೊಳ್ಳುವಷ್ಟರಮಟ್ಟಿಗೆ ಬೆಳೆಯುತ್ತಾಳೆ!... ಬರ್ನಾರ್ಡ್ ಷಾ ನಾಟಕದ "ಸೀಜರ್ ಮತ್ತು ಕ್ಲಿಯೊಪಾತ್ರ" ನಮ್ಮ ನಾಡಿನಲ್ಲಿ ಮತ್ತೆ ಹುಟ್ಟಿ ಬಂದಿದ್ದಾರಾ? ಹೀಗೊಂದು ಯೋಚನೆ ನನಗೆ ಡಾ. ನಿಂಬರಗಿ ಅವರ ಅನುವಾದಿತ ಕೃತಿ "ಸೀಜರ್ ಮತ್ತು ಕ್ಲಿಯೊಪಾತ್ರ" ಓದಿದಾಗ ಅನಿಸಿತು. ಮುಂದಿನ ಪೋಸ್ಟ್ ನಲ್ಲಿ ಸುಂದರಿ ಕ್ಲಿಯೊಪಾತ್ರ ತೋರಿಸುತ್ತೇನೆ.
ಅಯ್ಯೋಧ್ಯಾಯಣ ಇನ್ನೇನು ತೀರ್ಪು ಹೊರಬೀಳತಾ ಇದೆ. ಇಡೀ ಬೆಂಗಳೂರಿನ ಅಂಗಡಿಗಳೆಲ್ಲ ಶೆಟರ್ ಎಳಕೊಂಡು ಮಲಗುತ್ತಿವೆ. ಜನಾ ಭರ್ರ ಅಂತ ಮನೆ ಕಡೆ ಧಾವಿಸುತ್ತಿದ್ದಾರೆ. ಕಳ್ಳರು, ಭಂಡರು, ಕಿರಾತಕರು ಕತ್ತಿ, ಲಾಂಗು ಮಸಿದಿಟ್ಟುಕೊಳ್ಳತೊಡಗಿದ್ದಾರೇನೊ. ಬಾಯಿಯಲ್ಲಿ ರಾಮ-ರಹೀಮ ಬಗಲಿನಲ್ಲಿ ಬಾಂಬು, ಬಂದೂಕು, ಚೂರಿ ಹಿಡಿದು ತಿರುಗುವವರೂ ಇರ್ತಾರೆ. ದೇವ, ದೈವದ ಹೆಸರಲ್ಲಿ ಇಂಥದೊಂದು ಭಯ ಉತ್ಪಾದನೆ (ಭಯೋತ್ಪಾದನೆ) ಸಾಧ್ಯವಾಗಿದ್ದು ಏನು ಸೂಚಿಸುತ್ತದೆ? ಶಾಂತಿ ಮಂತ್ರ ಹೇಳಿದ ಬುದ್ಧನ ನೆಲದಲ್ಲಿ ಎರಡೂ ಕೋಮುಗಳ ನಡುವೆ ಇದೇ ಮೊದಲ ಸಲ ಸೌಹಾರ್ದದ ಮಾತುಗಳು ಕೇಳಿಸುತ್ತಿವೆ. ಎಲ್ಲೆಡೆ ಶಾಂತಿ ಮನವಿಗಳ ಮಹಾಪೂರ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಏನೆಲ್ಲ ಕಟ್ಟೆಚ್ಚರ ವಹಿಸುತ್ತಿದೆ. ಅದರದೂ ಅಳಿವು-ಉಳಿವಿನ ಪ್ರಶ್ನೆಯೇ. ತೀರ್ಪು ಹೊರಕ್ಕೆ ಬೀಳುವ ಮುನ್ನವೇ ಅದೆಷ್ಟು ಮುನ್ನೆಚ್ಚರಿಕೆಗಳು! ತೀರ್ಪು ಏನೇ ಬರಲಿ. ಅಯ್ಯೋಧ್ಯಾ ಬಗ್ಗೆ ಈಗಲೇ ನೆಟ್ ಚತುರರು ಏನೆಲ್ಲ ಜೋಕುಗಳನ್ನು ಕಟ್ಟತೊಡಗಿದ್ದಾರೆ. ಕಾರ್ಟೂನ್ ಬಿಡಿಸತೊಡಗಿದ್ದಾರೆ ನೋಡೋಣ. ಒಂದು ಸ್ಯಾಂಪಲ್ ಇಲ್ಲಿದೆ ನೋಡಿ. ಇದು ಸೆನ್ಸ್ ಆಫ್ ಹ್ಯೂಮರ್ ದೃಷ್ಟಿಯಿಂದ. ಟವಿ ಸಂವಾದ ಕಾರ್ಯಕ್ರಮವೊಂದರಲ್ಲಿ ಉಭಯ ಕೋಮುಗಳ ನಾಯಕರನ್ನು ಸಂವಾದಕ್ಕೆಳೆಯುತ್ತ ಟಿವಿ ನಿರೂಪಕ ಕೇಳುತ್ತಾನೆ. ನಿರೂಪಕ: ಅಯ್ಯೋಧ್ಯಾ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ನಮ್ಮ ಉಡುಪಿಯ ಕಲ್ಮಾಡಿಯವರಿಗೆ ವಹಿಸಿಕೊಡುವ ನಿ

ತಪಸ್ಸು! ಹೀಗೂ ಒಂದು ಬಂಡಾಯ

ಅಂಗೀ ತೆಗೆದು ಅಂಗಾತಾಗಿ ಮಲಗಿದ್ದ ಸಂಗಾತಿಯನ್ನು ಕಂಡು ಸಂಗೀತವಾದಳು ಅವಳು ಕಾಮ್ರೇಡ್, ಕಾಮ್ರೇಡ್ ಅನ್ನುತ್ತ... ಕಾಮಾಗಿ ರೇಡ್ ಮಾಡಿದಳು ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ,  ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ  ಇದೀನಿ' ಅಂದ್ರು.  ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ. ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು. -ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು. ಸ್ವಾಮೀಜಿ

ಪಾವಿತ್ರ್ಯ ಮತ್ತು ನಿಷೇಧ

ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು. ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು  ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು. ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು. ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು! ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್

DILSE: ಕೀ.ರಂ ನೆನಪಿನ ತೇರು...

DILSE: ಕೀ.ರಂ ನೆನಪಿನ ತೇರು... : "ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010) ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮ..."

ಕೀ.ರಂ ನೆನಪಿನ ತೇರು...

ಅದನಾ ಹೋ ಯಾ ಆಲಾ ಹೋ ಸಬ್ ಕೋ ಲೌಟ್ ಜಾನಾ ಹೈ ಮುಫಲಿಸೋ ತವಂಗರಕಾ ಕಬ್ರ್ ಹೀ ಠಿಕಾನಾ ಹೈ... ರಾತ್ರಿ 11ರ (ಆಗಸ್ಟ್ 7, 2010)  ಸುಮಾರಿಗೆ ಗೆಳೆಯ ವಿಷ್ಣುಕುಮಾರ್ ಫೋನ್ ಮಾಡಿ ಕಿ.ರಂ ಹೋಗಿಬಿಟ್ರು ಎಂದ. ನಂಬೋಕಾಗಲಿಲ್ಲ. ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದ ಕಟ್ಟೆ ಮೇಲೆ 'ನೀಗಿಕೊಂಡ ಸಂಸ' ಬರೆದ ನಾಟಕಕಾರ, ವಿಮರ್ಶಕ ಸುಮ್ಮನೇ ಮಲಗಿದಂತೆ ಕಾಣಿಸಿದ. ಒಂದಷ್ಟು ಕ್ಷಣ ಮುಂದೆ ನಿಂತು ಮನದಲ್ಲೇ ಆಖರೀ ಸಲಾಂ ಹೇಳಿ ಅಲ್ಲೇ ಇದ್ದ ಗೆಳೆಯರ ಗುಂಪಿಗೆ ಸೇರಿದೆ. ನಾಗತಿಹಳ್ಳಿ ರಮೇಶ್ ವ್ಯಾನ್ ನಲ್ಲಿ ಕ್ರಮೇಷನ್ ಗೆ ಹೋಗೋಣ ನಡೆಯಿರಿ ಎಂದು ತಮ್ಮ ಪಟಾಲಂ ಸೇರಿಸಿದ. ನನ್ನನ್ನೂ ಕರೆದೊಯ್ದರು. 'ಎಂದೂ ಎಲ್ಲೂ ನಿಲ್ಲದ, ಮಾತೇ ಮಾಣಿಕ್ಯ ಎಂದು ನಂಬಿದಂಥ, ದಾರಿಯುದ್ದಕ್ಕೂ ಆಶಯಗಳ ಸಾರುತ್ತ ಹೊರಟ ಸಾರೋ ಐನಾರನ ಹಾಗೆ, ಮೆಚ್ಚಿದ್ದನ್ನು, ಮೆಚ್ಚದೇ ಇದ್ದದ್ದನ್ನು ಏಕತಾರಿ ನಾದದಲ್ಲಿ ಹಾಡುತ್ತ ಹೊರಟ ಫಕೀರ, ದರವೇಶಿಯಂಥ.. ತನ್ನದೇ ಜ್ಞಾನದ ಧುನ್ ನಲ್ಲಿ ಮುಳುಗಿಹೋದ ಸೂಫಿಯಂಥ ಮನುಷ್ಯ ಹೊರಟು ಹೋದನಲ್ಲ...' ಎಂದೆಲ್ಲ ವ್ಯಾಖ್ಯಾನಿಸಲೆತ್ನಿಸಿದೆ. ಹುಟ್ಟು-ಸಾವಿನ ನಿರಂತರ ಪ್ರಕ್ರಿಯೆಯ ಸತ್ಯದೆದುರು, ಒಬ್ಬ ಮನುಷ್ಯ ಇನ್ನಿಲ್ಲ ಎನ್ನುವ ಹೊತ್ತಲ್ಲಿ ಏನು ಹೇಳಿದರೂ ಏನು ಬಂತು!?  ಆ ಎಲೆಕ್ಟ್ರಿಕ್ ಶವಾಗಾರಕ್ಕೆ ನಾನು ಹೋಗಿದ್ದು ಮೊದಲ ಸಲ. ಕಿ.ರಂ ಶರೀರದ ಮುಂದೆ ಬ್ರಾಹ್ಮಣ ಜೋರು ದನಿಯಲ್ಲಿ ಮಂತ್ರಗಳನ್ನೋದಿದ. ತನ್ನ ಲ

ಯಾವುದು ಮುಖ್ಯ?

ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು? 'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ  ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು. ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ  ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗ

ಹೀಗೊಂದು ಸೌಹಾರ್ದತೆ!

ಅಡಿಗಡಿಗೆ ಭಾಷೆ-ಗಡಿ ಸಮಸ್ಯೆ ಭುಗಿಲೇಳಲೇಬೇಕು! ಮಹಾರಾಷ್ಟ್ರ ಗಡಿ ಸಮಸ್ಯೆಗಂತೂ ಚಾಲನೆ ದಕ್ಕುತ್ತಲೇ ಇರುತ್ತದೆ. ರಾಜಕೀಯದ ಜತೆ ಸಾಹಿತ್ಯಿಕ-ಸಾಂಸ್ಕೃತಿಕ ಲಾಭಕ್ಕೂ! ವಿಪರ್ಯಾಸವಲ್ಲವೇ? ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು.   ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ  ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು) ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅವ

ಬಳ್ಳಾರಿ ಕೆ ಶೋಲೆ!

ರೆಡ್ಡಿ/ಶ್ರೀರಾಮುಲು ಫೈಲ್: ಖಾಸಗಿ ಫೈನಾನ್ಸ್ (Ennoble Savings and Investment India Pvt. Ltd) ಕಂಪೆನಿ ತೆಗೆದು ಬಳ್ಳಾರಿ ತುಂಬ ರೆಡ್ಡಿ (ಗಾಲಿ ಜನಾರ್ಧನ ರೆಡ್ಡಿ, ಕರುಣಾಕರ ರೆಡ್ಡಿ) ಶ್ರೀಮಂತಿಕೆಯ ಧೂಳು ಎಬ್ಬಿಸಿದ್ದರು. 200 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪೆನಿ ಇಕ್ಕಟ್ಟಿಗೂ ಸಿಕ್ಕಿತ್ತು. ಈಗದು ಇತಿಹಾಸ. ಯಾವಾಗ ಚೀನಾಗೆ ಬಳ್ಳಾರಿಯ ಅದಿರು ಸಾಗತೊಡಗಿತೋ ಇವರ ನಸೀಬೇ ಚೇಂಜ್ ಆಯ್ತು. ಬಿಸಿಲು ನಾಡಿನ ರಸ್ತೆಯ ಮೇಲೇಳುತ್ತಿದ್ದ ಧೂಳು ಆಕಾಶಕ್ಕೆ ಟ್ರಾನ್ಸಫರ್ ಆಯ್ತು. ಅಕ್ರಮ ಅದಿರು ಸಾಗಾಣಿಕೆಯ ಆರೋಪದ ಹಿನ್ನೆಲೆಯಲ್ಲಿ ಇವರನ್ನು 'ಅದಿರುಗಳ್ಳರು' ಎಂದು ಟೀಕಿಸಲಾಗುತ್ತಿದೆ. * * * ಶ್ರೀರಾಮುಲು: ಬಳ್ಳಾರಿ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರನ್ನು ಪೊಲೀಸರು ಎರಡು ಬಾರಿ ಬಂಧಿಸಿದ್ದರು. ಪ್ರಕರಣಗಳು: 1 ಕಾಂಗ್ರೆಸ್ ಅಭ್ಯರ್ಥಿ ಲಾಡ್ ಕಾರುಗಳನ್ನು ಸುಟ್ಟು ಹಾಕಿದ್ದು. 2 ಕಾಂಗ್ರೆಸ್ ಕಾರ್ಯಕರ್ತನನ್ನು ಪ್ರಜ್ಞೆತಪ್ಪುವಂಥ ಸ್ಥಿತಿಗೆ ಬರುವ ಹಾಗೆ ಥಳಿಸಿದ್ದು. ಇವೆರಡೂ ಪ್ರಕರಣಗಳಲ್ಲಿ ಗಾಲಿ ಜನಾರ್ಧನ ರೆಡ್ಡಿ , ಶ್ರೀರಾಮುಲು ಬೆನ್ನಿಗೆ ನಿಂತುಕೊಂಡರು. ಗಣಿ ವ್ಯವಹಾರದಲ್ಲೂ ಇಬ್ಬರೂ ಸಾಥಿ. ಶ್ರೀರಾಮುಲು ಹಿಂದುಳಿದ ವರ್ಗಕ್ಕೆ ಸೇರಿದವರು. ರೆಡ್ಡಿ ಪ್ರಬಲ ಕೋಮಿನವರು. ಒಂದೇ ಪರಿವಾರದ ಸದಸ್ಯರಂತಿದ್ದಾರೆ. "ಶೋಲೆ" ಸಿನಿಮಾದ ಧರ್ಮೆಂದ್ರ ಮತ್ತು ಅಮಿತಾಬ್ ಜೋಡಿಯಂ

DILSE: ಸೋರುತಿಹುದು ಮನೆಯ ಮಾಳಿಗಿ...

DILSE: ಸೋರುತಿಹುದು ಮನೆಯ ಮಾಳಿಗಿ... : "HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's problem..."

ಸೋರುತಿಹುದು ಮನೆಯ ಮಾಳಿಗಿ...

HOME Directed By: Yann Arthus-Bertrand Plot: With aerial footage from 54 countries, Home is a depiction of how the Earth's          problems are all interlinked. Genre(s): Documentary Released: June, 2009 Running Time: 1 Hour, 35 Minutes HOME has been made for you : share it! And act for the planet." ಸೋರುತಿಹುದು ಮನೆಯ ಮಾಳಿಗಿ... ಅಜ್ಞಾನದಿಂದ ಸೋರುತಿಹುದು ಮನೆಯ ಮಾಳಿಗಿ... ಷರೀಫರು ಶತಮಾನದ ಹಿಂದೆಯೇ  ಈ ದೇಹವೆನ್ನುವ ಮತ್ತು ಒಟ್ಟಾರೆ ವಿಶ್ವವೆನ್ನುವ ಮನೆಯ ಬಗ್ಗೆ  ತುಂಬ ಸ್ಪಷ್ಟವಾಗಿ ಗ್ರಹಿಸಿದರು! ಕಲ್ಲಿಂದ, ಮಣ್ಣಿಂದ ಕಟ್ಟಿಕೊಂಡ ನಾವಿರುವ ಮನೆಯೇ ಎಷ್ಟೊಂದು ತೂತುಗಳಿಂದ ತುಂಬಿಕೊಂಡಿರುತ್ತದೆ ಅಲ್ವಾ? (ತೂತು ತುಂಬಿಕೊಳ್ಳಲು ಸಾಮಾನ್ಯರಿಗೆ ಅವಕಾಶವಿದೆಯೇ? ಕಲ್ಲು, ಮಣ್ಣಿಗೆ ಕೈ ಹಚ್ಚುವ ಸ್ಥಿತಿಯಲ್ಲೂ ಅವರಿಲ್ಲ! ಅದೆಲ್ಲದರ ಮೇಲೆ ಪಾಟೀಲರು, ಶೆಟ್ಟರು, ಗೌಡರು, ರೆಡ್ಡಿ, ಲಾಡ್, ಘೋರ್ಪಡೆ, ಜೆ.ಕೆ. ಸಿಂಘಾನಿಯಾ... ಅಂಥವರದಷ್ಟೇ ಲೈಸನ್ಸ್ ಇದೆ, ಅಧಿಕಾರವಿದೆ! ಆ ಮಾತು ಬೇರೆ.) ಮನೆಯಲ್ಲಿ ಆಹಾರಕ್ಕಾಗಿ ಒಲೆ ಹೊತ್ತಿ ಉರಿಯುತ್ತದೆ. ಹೊಗೆ ಜಾಸ್ತಿಯಾದಾಗ, ಉಸಿರುಗಟ್ಟುವ ಸ್ಥಿತಿ ಬಂದಾಗ ಒಲೆಯನ್ನು ಆರಿಸುವ ಬದಲು ಕಿಟಕಿ, ಬಾಗಿಲು, ಹೊಗೆ ಮಾಳಿಗೆ ಮಾತ್ರ ತೆರೆದಿಟ್ಟುಬಿಡುತ್ತೇವೆ. ಒಲೆ ಆರಬಾರದು. ಯಾಕೆಂದರೆ ಊಟ ರೆಡಿಯಾಗಬೇಕು

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

ತಮಸ್ಸು: ಕಗ್ಗತ್ತಲಲ್ಲೊಂದು ಆಶಾಕಿರಣ...

 ಆಲ್ಟರನೇಟ್ ಪವರ್ ಸೊಲ್ಯುಷನ್ ಎನ್ನುವ ಮಾರುಕಟ್ಟೆಯ ಲಾಬಿಗೆ ಆಡಳಿತ ಶರಣಾಗಿದ್ದರಿಂದ ಇಡೀ ರಾಜ್ಯವೀಗ ಕಗ್ಗತ್ತಲಲ್ಲೇ ಇದೆ. ಕತ್ತಲು ಕವಿದಾಗೆಲ್ಲ ಟ್ಯೂಬ್ ಲೈಟ್ ಹಚ್ಚುವ ಹಿಂದೂ-ಹಿಂದೂತ್ವದ ಪೌರೋಹಿತ್ಯ ನಡೆಸುವವರಿಗೆ ಅದರ ಜನಕ ಥಾಮಸ್ ಆಲ್ವಾ ಎಡಿಸನ್ ಕ್ರೈಸ್ತ ಅನ್ನೋದು ಗಮನಕ್ಕೆ ಬರೋದಿಲ್ಲ!?  ಮತಾಂತರ ವಿರೋಧದ ಹೆಸರಲ್ಲಿ ಕ್ರೈಸ್ತ ಮಷಿನರಿಗಳ ಕನಿಷ್ಠ ಧಾರ್ಮಿಕ ಆಶಯಗಳ ಮೇಲೆ ಹರಿಹಾಯುವುದು ಇಲ್ಲಿ ನಡೆಯುತ್ತಲೇ ಇದೆ. ಇದೊಂದು ಥರದ ತಮಸ್ಸು!  ಅಮೀರ್ ಖಾನ್, ರಷೀದ್ ಖಾನ್, ಅಮ್ಜದ್ ಅಲಿ ಖಾನ್, ಝಾಕೀರ್ ಹುಸೇನ್, ಅಲಿ ಅಕ್ಬರ್ ಖಾನ್ ಅವರಂಥವರ ಕೈಯಲ್ಲಿ ಅಸಂಖ್ಯ ಮುಸ್ಲಿಮೇತರರು ಹಿಂದೂಸ್ತಾನಿ ಸಂಗೀತದ ದೀಕ್ಷೆ ಪಡೆಯುವಾಗ ಈ ಉಸ್ತಾದ್ ಗಳೆಲ್ಲ ಮುಸಲ್ಮಾನರು ಎನ್ನುವುದು ಮುಖ್ಯವಾಗೋದೇ ಇಲ್ಲ. "ಕಭೀ ಕಭೀ ಮೇರೆ ದಿಲ್ ಮೇ ಖಯಾಲ್ ಆತಾ ಹೈ, ಕೆ ಜೈಸೆ ತುಝಕೋ ಬನಾಯಾ ಗಯಾ ಹೈ ಮೇರೆ ಲಿಯೆ, ತೂ ಅಬ್ ಸೇ ಪೆಹಲೇ ಸಿತಾರೋಂ ಮೆ ಬಸರಹೀ ಥಿ ಕಹ್ಞೀ, ತುಝೇ ಜಮೀನ್ ಪೆ ಬುಲಾಯಾ ಗಯಾ ಹೈ ಮೇರೆ ಲಿಯೆ..." ಎನ್ನುವ ಸಾಹಿರ್ ಸಾಲುಗಳು ಕನ್ನಡದಲ್ಲಿ "ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು, ಮಾಯದ ಲೋಕದಿಂದ ನನಗಾಗಿ ಬಂದವಳೆಂದು" ಎಂದು ಹಾಡಾಗಿ ವರ್ಲ್ಡ್ ಫೇಮಸ್ ಆಗುತ್ತದೆ! ಸಾಹಿರ್ ಕೂಡ ಒಬ್ಬ ಮುಸಲ್ಮಾನ.  ಇದೆಲ್ಲ ನಾವು ಮುಸಲ್ಮಾನರಿಂದ ಸಾಂಸ್ಕೃತಿಕವಾಗಿ  ಪಡಕೊಂಡದ್ದು ಎಂದೆನಿಸೋದೇ ಇಲ್ಲ.!!  ಸಿತಾರ್ ನಂಥ ವಾದ್

ಮೈಕಲ್ ಜಾಕಸನ್: ಕರಿಯ ಕುಣಿದ ದಮನಿತರ ಕಾವ್ಯ

ಶನಿವಾರದ ಸೂರ್ಯ ಮುಳುಗುತ್ತಿದ್ದ ಹೊತ್ತು ನನ್ನ ಮಗುವಿನೊಂದಿಗೆ ಹೊರಟು ನಿಂತಿರುವೆ ಹೊಸ ಸೂರ್ಯ ಮೂಡುವ ದಿಕ್ಕಿನೆಡೆಗೆ. ಮಗು ಗಂಡೊ ಹೆಣ್ಣೊ? ಯಾವುದಾದರೇನು ಸ್ವಾಮಿ, ಎಲ್ಲ ಒಂದೇ.. ಎರಡೂ ಅಂದುಕೊಳ್ಳಿ.. ನಾನು ಪವಾಡಗಳ ನಂಬುವೆ. ಈ ರಾತ್ರಿಯೇ ಆ ಪವಾಡ ನಡೆದುಹೋಗಿದೆ. ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ, ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ. ನನ್ನ ಮಕ್ಕಳು ಶನಿವಾರದ ಸೂರ್ಯನ ಕುಂಡೆ ಮೇಲೆ ಬರೆ ಎಳೆದು ನಾಳಿನ ಸೂರ್ಯನ ಹಣೆಯ ಮೇಲೆ ನನ್ನ ಸಂದೇಶ ಬರೀತಾರೆ. ನಾನ್ಯಾರಿಗೂ ಕಮ್ಮಿ ಅಲ್ಲ ಎಂದು. ಮತ್ತು ನಾನವರಿಗೆ ಹೇಳಿದ್ದೇನೆ, ಸಮಾನತೆಯ ಬಗ್ಗೆ. ನೀವು ಒಪ್ಪುತ್ತೀರೊ, ಬಿಡುತ್ತೀರೋ ಸಮಾನತೆಯೊಂದೇ ಸತ್ಯ. ನೀವು ನನ್ನ ಕಂದನ ಬಗ್ಗೆ ಯೋಚಿಸುತ್ತೀರಿ ಎಂದಾದರೆ, ನೀವು ಕರಿಯರೊ ಬಿಳಿಯರೊ ಎನ್ನುವುದು ನನಗೆ ಮುಖ್ಯವೇ ಅಲ್ಲ. ನಾನೀ ರಕ್ಕಸನ (ರೇಸಿಸಂ) ಜತೆ ಸೆಣಸಿ ಹೈರಾಣಾಗಿರುವೆ. ಗುದಮುರಗಿ ಹಾಕುತ್ತ ದಣಿದಿರುವೆ, ಈ ಉಸಾಬರಿಯಿಂದ ಸುಸ್ತಾಗಿರುವೆ ಉಪಟಳ ಹೆಚ್ಚಾದಾಗೆಲ್ಲ ಅದರ ಕುಂಡೆ ಮೇಲೆ ಒದ್ದಿರುವೆ ಹೋರಾಟಕೆ ನಾನ್ಯಾರಿಗೂ ಅಂಜೆನು, ನಿಮ್ಮ ಶೈತಾನನ ಸಂತಾನಕೂ.. ಗುಂಪುಗಾರಿಕೆ, ಕ್ಲಬ್, ರಾಷ್ಟ್ರಗಳಿಗೇ ಎಲ್ಲಾ ರಕ್ಷಣೆ... ಇಲ್ಲಿ ಕೇಳುವವರೇ ಇಲ್ಲ ಮನುಷ್ಯ ಕುಲದ ಬವಣೆ? ಇದೆಲ್ಲ ಬೊಗಳೆ ವ್ಯವಹಾರ ಜಗದ ತುಂಬ. ಇದೆಲ್ಲ ಸುಮ್ಮನೇ ಯುದ್ಧ! ಪರ ವಿರೋಧದ ಕಥೆ ಕೇಳಿ ಏನಾಗಬೇಕು?