ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜ್ಞಾನಪೀಠದ ಮೇಲೆ ಸಿರಿಸಂಪಿಗೆ!

ಸಿರಿಸಂಪಿಗೆ ನನ್ನ ಮೆಚ್ಚಿನ ನಾಟಕ. ಅದರ ದೀಪದಮೊಲ್ಲೆ ನನ್ನ ಮನಸಿನ ತುಂಬ ಕಾಡುವ ನಲ್ಲೆ! ನಾಟಕದ ಕರ್ತೃ ಮತ್ತು ಮಹಾಕವಿ ಕಂಬಾರರ ಜತೆ ಒಂದು ವಿಶೇಷ ಸಂದರ್ಭದಲ್ಲಿ ಅವರ ಹುಟ್ಟೂರಿಗೆ ಭೇಟಿ ಕೊಡುವ ಅವಕಾಶ ಒದಗಿಬಂದಿತ್ತು. ಅವರೊಂದಿಗೆ ಒಂದಿಡೀ ದಿನ ನಡೆಸಿದ ಮಾತುಕತೆ, ಅವರನ್ನು ಹತ್ತಿರದಿಂದ ಕಂಡ ರೀತಿ ಮತ್ತು ಅವರ ದೈವ ಪ್ರೀತಿಯ ಬಗ್ಗೆ ತುಂಬ ದಿನಗಳ ಹಿಂದೆ ಬರೆಯಬೇಕೆಂದುಕೊಂಡಿದ್ದೆ. ಆಗಲಿಲ್ಲ. ಅವರ ಹತ್ತಾರು ಚಿತ್ರಗಳನ್ನು ಸೆರೆಹಿಡಿದ ಮೊಬೈಲ್ ಕಳಕೊಂಡೆ ಹೀಗಾಗಿ ಅದನ್ನು ಇಲ್ಲಿ ದಾಖಲಿಸಲಾಗಲಿಲ್ಲ. ಅವರೊಂದಿಗಿನ ಸ್ವಾರಸ್ಯಕರ ಚರ್ಚೆಯೂ ಅದರಲ್ಲಿ ರೆಕಾರ್ಡ್ ಮಾಡಿದ್ದೆ. ತುಂಬ ಮುಖ್ಯವಾದ ದಾಖಲೆಯೇ ಕಾಣೆಯಾಗಿದ್ದು ನನ್ನಲ್ಲಿ ಮರೆಯದ ನೋವು. ಆ ಎರಡು ದಿನದಲ್ಲಿ ಅವರನ್ನು ಕಂಡ ಪರಿಯ ಬಗ್ಗೆ ಇಷ್ಟರಲ್ಲೇ ಇಲ್ಲಿ ಹಂಚಿಕೊಳ್ಳುತ್ತೇನೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದು ಖುಷಿಯ ಸಂಗತಿ. ಕಂಬಾರರಿಗೆ ಅಭಿನಂದನೆಗಳು.