ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ 25, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ

ಮೈಸೂರಿನ ಹಿನಕಲ್ ಹೋಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಪೆರ್ನಮಕ್ಕಿ ಗ್ರಾಮದ ಚರ್ಚ್ ಮೇಲೆ ದಾಳಿ ನಡೆದಿದೆ. ದೇಶದ ಗಣರಾಜ್ಯೋತ್ಸವಕ್ಕೆ 60 ವರ್ಷಗಳೇ ಸಂದಿವೆ. ಗಣರಾಜ್ಯೋತ್ಸವವನ್ನು ಸ್ವಾತಂತ್ರ್ಯೋತ್ಸವಕ್ಕಿಂತ ಸಂಭ್ರಮದಿಂದ ಮತ್ತು ತುಂಬ ಹೆಮ್ಮೆಯಿಂದ ಆಚರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಹಕ್ಕುಗಳ ಬಗ್ಗೆ ಹೇಳುವ ಆಚರಣೆ. ಆಗಸ್ಟ್ 15  ಸಾಧನೆ. ಗಣರಾಜ್ಯೋತ್ಸವ ನಿತ್ಯದ ಬದುಕಿನ ಸಂಭ್ರಮಕ್ಕೆ ಭದ್ರ ಅಡಿಪಾಯ. ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ. ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್ತಿರುವ ಚರ್