ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ 5, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಈ ಕವಿ ಜತೆ ಅದೆಷ್ಟು ಕಾವ್ಯ-ನೋವು ಮಣ್ಣಾಯಿತೋ!

ಈ ಇರುವೆಯ ಮೇಲೆ ನನ್ನ ಭಾರದ ಹೆಜ್ಜೆಯನಿಟ್ಟೆ ತುಸು ಕಾಲದ ನಂತರ ತೆಗೆದೆ ಇರುವೆ ಮತ್ತೆ ಚಲಿಸುತ್ತಿದೆ ಏ ಸೂಜಿಯ ಗಾತ್ರದ ಜೀವವೇ ನನ್ನ ಭಾರ ಹೊರುವ ನಿನ್ನ ಬೆನ್ನಿಗೆ ಶರಣು... ... ಆ ಬೇಲಿಯ ದಡದಿ ನಿಧಾನಕ್ಕೆ ತೆವಳುತ್ತಿರುವ ಬಸವನ ಹುಳುವೇ ನನ್ನ ಭಾರ ಹೊರಲಾರದ ನಿನ್ನ ಮೃದುತ್ವಕ್ಕೂ ಶರಣು... ನಾಗತಿಹಳ್ಳಿ ರಮೇಶ್ ಒಂದೆರಡು ಪೆಗ್ ಏರಿಸಿ ಹೀಗೆ ಹಾಡುತ್ತಿದ್ದುದನ್ನು ಕೇಳಿದಾಗ, ಎನ್ಕೆ ಕಾವ್ಯದ ಈ ಪರಿಯ ಕಸುವಿಗೆ, ಮುಗ್ಧತೆಗೆ ಮನಸೋತಿದ್ದೆ. ರಮೇಶ್ ಭೇಟಿ ಮಾಡಿದಾಗೆಲ್ಲ ಮತ್ತೆ ಮತ್ತೆ ಈ ಹಾಡನ್ನು ಹೇಳುತ್ತಿದ್ದ. ತಾನೇ ಬರೆದಷ್ಟು ಖುಷಿಯಿಂದ ಅದನ್ನು ರಮೇಶ್ ಹಾಡುತ್ತಿದ್ದ.  ಹೀಗೆ ಕಾವ್ಯದ ಮೂಲಕವೇ ಎನ್. ಕೆ. ಹನುಮಂತಯ್ಯ ಪರಿಚಯವಾಯಿತು.  ಆ ನಂತರದ ಕೆಲ ಭೇಟಿಗಳಲ್ಲಿ ಕೆಲ ವಿಷಯಗಳ ಮೇಲೆ ಹರಟಿದ್ದೆವು.   ಎಸ್.ವಿಷ್ಣುಕುಮಾರ್ ಮೂಲಕವೇ ಹನುಮಂತಯ್ಯ ಹೆಚ್ಚು ಆಪ್ತವಾಗಿ ಪರಿಚಯವಾಗಿದ್ದು. ಎಂಜಿ ರಸ್ತೆಗೆ ಒಂದೆರಡು ಬಾರಿ ಹನುಮಂತಯ್ಯ ಬಂದಿದ್ದರು. ಟೆಂಪ್ಟೇಷನ್ ಬಾರ್ ನಲ್ಲಿ (ವಿಷ್ಣೂವಿನ ಕಾಯಂ ಶೆಡ್ ಆಗಿತ್ತು) ಹನುಮಂತಯ್ಯ ಜತೆ ಕೆಲ ವಿಚಾರಗಳ ಬಗ್ಗೆ ಉತ್ತಮ ಚರ್ಚೆ ಕೂಡ ನಡೀತು. ಎಂಜಿ ರಸ್ತೆಯ ಹುಡುಗಿಯರು ಮತ್ತು ಅವರ ಬಿಂದಾಸ್ ಅಟಿಟ್ಯೂಡ್ ಅನ್ನು ನೋಡಿ ಹನುಮಂತಯ್ಯ ದಂಗಾಗುತ್ತಿದ್ದರು. ಪದೇ ಪದೇ  'ಇವರೆಲ್ಲ ಅದೆಷ್ಟು ಖುಷಿ ಖುಷಿಯಾಗಿ, ಸಲೀಸಾಗಿ ಪ್ರೀತಿ, ಪ್ರೇಮ, ಪ್ರಣಯ ಮಾಡ್ತಾರೆ! ಇವರ ಮಿಥುನವೂ ಇಷ್ಟೇ ಬಿಂದ