ಜಾತಿ ಆಧಾರಿತ ತಾರತಮ್ಯವನ್ನು ಮಾನವ ಹಕ್ಕು ಉಲ್ಲಂಘನೆ ಎಂದು ಪರಿಗಣಿಸುವ ಮಹತ್ವದ ಚಿಂತನೆ ಈಗ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವುದು ಮಹತ್ವದ ಬೆಳವಣಿಗೆ. ಮಾನವೀಯ ಮೌಲ್ಯಗಳ ದೃಷ್ಟಿಯಿಂದ ಇದೊಂದು ಅತ್ಯಂತ ಶ್ರೇಷ್ಠ ಹೆಜ್ಜೆ. ಜಿನೆವಾದಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಸಮ್ಮೇಳನ ಇಂಥದೊಂದು ದಿಟ್ಟ ಕ್ರಮಕ್ಕೆ ಯೋಚಿಸುತ್ತಿರುವುದು ಇಡೀ ವಿಶ್ವವನ್ನು ಆರೋಗ್ಯಕರ ಬದುಕಿನತ್ತ ಕೊಂಡೊಯ್ಯುವಂಥದು.
ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆಗೆ ತೆರಕೊಳ್ಳುವ ಇಂಗಿತ ಹೊಂದಿದ್ದನ್ನು ಸೂಚ್ಯವಾಗಿ ಹೇಳಿದಂತಾಗಿದೆ. ವರ್ಗ ಸಂಘರ್ಷದಿಂದ ನಲುಗಿ ಹೋಗಿರುವ ಯುರೋಪ್ ನಾಗರಿಕತೆಯಲ್ಲಿ ಮಾಸ್ಟರ್-ಸ್ಲೇವರ್ ಒಂದು ದೊಡ್ಡ ಪಿಡುಗೇ ಆಗಿದೆ. ಭಾರತದ ಚತುರ್ವರ್ಣ ವ್ಯವಸ್ಥೆ ಇದಕ್ಕೂ ಹೀನವಾಗಿರುವಂಥದು. ಯುರೋಪ್ ಇದರಿಂದ ಹೊರಬರಲು ಹವಣಿಸುವುದು ಗಮನಸೆಳೆಯುತ್ತದೆ.
ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಹೀನಾಯ ಸ್ಥಿತಿಗೆ ಮನುಷ್ಯ ಬದುಕನ್ನು ಎಳೆದೊಯ್ದ ಉದಾಹರಣೆಗಳಿವೆ. ಭಾರತದ ಗಾಂಧಿ, ಅಂಬೇಡ್ಕರ್ ಮತ್ತು ಆಫ್ರಿಕಾದ ನೆಲ್ಸನ್ ಮಂಡೆಲಾ ಇದರ ರಾಕ್ಷಸಿ ರೂಪವನ್ನು ಕಂಡವರು. ಇದಕ್ಕೆ ದೊಡ್ಡ ಪ್ರತಿಭಟನೆ ವ್ಯಕ್ತಪಡಿಸಿದವರು. ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡವರು. ಮತ್ತೆ ಇಂಥ ಹೋರಾಟಗಳು ನಡೆಯಲೇಬೇಕಾದ ತುರ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಈ ಕ್ರಮ ಚಳವಳಿಯ ಸ್ವರೂಪ ಪಡಕೊಳ್ಳಬೇಕಿದೆ.
ಭಾರತದಲ್ಲಿನ ಸಾಮಾಜಿಕ ಸ್ಥಿತಿಯಲ್ಲಿ ಜಾತಿ ತಾರತಮ್ಯ ಮೇಲ್ವರ್ಗದ ಮತ್ತು ಅದರಲ್ಲೂ ಬ್ರಾಹ್ಮಣರ ಬಹುದೊಡ್ಡ ಅಸ್ತ್ರವಾಗಿದೆ. ಹುಟ್ಟಿನ ಕಾರಣಕ್ಕೆ ಶ್ರೇಷ್ಠ ಎನ್ನುವ ಬಿಟ್ಟಿ ಪಟ್ಟ ಅಲಂಕರಿಸುವ ಭಾರತದ ಬ್ರಾಹ್ಮಣರು ಇಡೀ ದೇಶವನ್ನು ದಟ್ಟ ದಾರಿದ್ರ್ಯಕ್ಕೆ ನೂಕಿದ್ದಾರೆ. ಈ ಚಾಳಿ ಇತರ ಮೇಲ್ವರ್ಗಕ್ಕೂ ವ್ಯಾಪಿಸಿದ್ದು ನಾಚಿಕೆ ಪಡುವಂಥ ಬೆಳವಣಿಗೆ. ಕೆಳಗಿನವರನ್ನು ಆದಷ್ಟು ಅದುಮುತ್ತಲೇ ಮೇಲಾಟವನ್ನು ಕಾಪಾಡಿಕೊಂಡು ಬಂದ ಮೇಲ್ವರ್ಗದ ದರ್ಪ ಕೊಂಚವಾದರೂ ಸಡಿಲಗೊಂಡಿದ್ದು ಅಂಬೇಡ್ಕರ್ ನಡೆಸಿದ ಹೋರಾಟದಿಂದ. ಆದರೆ, ಅದರ ಫಲಾನುಭವಿಗಳು (ಎಲ್ಲರೂ ಅಲ್ಲ ) ಮಾತ್ರ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಂತೆ ನವಬ್ರಾಹ್ಮಣರಾಗುತ್ತಿರುವುದು ವಿಷಾದಕರ.
ವೀರಶೈವ, ಲಿಂಗಾಯತರ ವಿಷಯದಲ್ಲೂ ಇದೇ ಸ್ಥಿತಿ. ಜಾತಿ ವಿನಾಶದ ಮೂಲ ಅಜೆಂಡಾ ಇಟ್ಟುಕೊಂಡು ಸಾಮಾಜಿಕ ಕ್ರಾಂತಿಯೊಂದನ್ನು ರೂಪಿಸಿದ ಬಸವಣ್ಣ ದೇವರ ಸ್ಥಾನಕ್ಕೆ ಏರಿದರು. ಅನುಯಾಯಿಗಳು ಜಾತಿ ವಿನಾಶದ ಬದಲು ಅವರೇ ಒಂದು ಜಾತಿಯಾಗಿ ಪ್ರಭುತ್ವ, ಅಧಿಕಾರಕ್ಕಾಗಿ ಮತ್ತದೇ ಶೋಷಣೆಯ ಮಾರ್ಗ ಹಿಡಿಯುತ್ತಿರುವುದು ಎಂಥ ವಿಪರ್ಯಾಸ!
ಇಂದು ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಢಾಳಾಗಿ ಕಾಣಿಸುವ ಸತ್ಯ. ಮೈಸೂರಿನ ಸುತ್ತೂರು ಮಠದಲ್ಲಿ, ಆರ್ ಎಸ್ ಎಸ್ ಪೌರೋಹಿತ್ಯದಲ್ಲಿ ಗೋಧ್ರಾ ನರಹತ್ಯೆಯ ರೂವಾರಿ ಎಂದೇ ಟೀಕೆಗೆ ಒಳಗಾದ ಮತ್ತು ಅಮೆರಿಕದಂಥ ರಾಷ್ಟ್ರಗಳ ವೀಸಾ ಪಡೆಯುವುದಕ್ಕೂ ಅನರ್ಹತೆ ಗಳಿಸಿಕೊಂಡ ನರೇಂದ್ರ ಮೋದಿಯಿಂದ ಇಡೀ ಕರ್ನಾಟಕ ಸರ್ಕಾರದ ಸಚಿವರು ಪ್ರವಚನ ಕೇಳುವ ಪರಿಸ್ಥಿತಿ! ಭಾರತದ ಪ್ರಜಾಪ್ರಭುತ್ವಕ್ಕೆ ಬಂದ ಇಂಥ ಗಂಡಾಂತರಕ್ಕೆ ಏನು ಹೇಳಬೇಕು?
ವಿಶ್ವದ ೨೦ ಕೋಟಿಗೂ ಹೆಚ್ಚು ಜನ ಜಾತೀಯ ತಾರತಮ್ಯದಿಂದ ನಲುಗುತ್ತಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಕರಡು ಸಿದ್ದಾಂತ ಮತ್ತು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನಿನ ಕಸುವು ತುಂಬಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿಗೆ ಯತ್ನಿಸುತ್ತಿದೆ.
ಜಾತಿ, ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯ ಮಾನವೀಯ ಮೌಲ್ಯ ಅಲ್ಲ ಎನ್ನುವುದು ಈ ಮೂಲಕ ವಿಶ್ವಕ್ಕೆ ಮನದಟ್ಟು ಮಾಡುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದ ಇತರ ರಾಷ್ಟ್ರಗಳು ಸಂಕಲ್ಪ ಮಾಡಿಕೊಂಡಲ್ಲಿ ಮಹತ್ತರ ಬದಲಾವಣೆಗೆ ದಾರಿಯಾಗುತ್ತದೆ.
ವಿಪರ್ಯಾಸವೆಂದರೆ ಭಾರತ ವಿಶ್ವದ ಈ ನಡೆಯನ್ನೇ ವಿರೋಧಿಸಿದೆ!
ಹಿಂದೂ ರಾಷ್ಟ್ರವೆಂದು ಗುರುತಿಸಲಾಗುತ್ತಿರುವ ನೇಪಾಳ ಇದನ್ನು ಸ್ವಾಗತಿಸಿದೆ. ಸೆಪ್ಟೆಂಬರ್ 16ರಂದು ನಡೆದ ಸಮ್ಮೇಳನದ ಕಲಾಪದಲ್ಲಿ ನೇಪಾಳದ ಸಚಿವ ಜೀತ್ ಬಹಾದ್ದೂರ್ ದಾರ್ಜಿ ಗೌತಂ ಅವರು 'ಜಾತಿ ತಾರತಮ್ಯದ ವಿರುದ್ಧ ಹೋರಾಡಲು ವಿಶ್ವಸಂಸ್ಥೆ ಹಾಗೂ ಅಂಗ ಸಂಸ್ಥೆಗಳು ಮುಂದಿಟ್ಟಿರುವ ಇಂಥದೊಂದು ಮಹತ್ವದ ಕ್ರಮಕ್ಕೆ ನೇಪಾಳ ಸ್ವಾಗತಿಸುತ್ತದೆ' ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದ ತಮಿಳು ಮೂಲದ ನವನೀತಾ ಪಿಳ್ಳೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ರಾಯಭಾರಿಯಾಗಿ ನೇಪಾಳದ ಕ್ರಮವನ್ನು ಸ್ವಾಗತಿಸಿದ್ದಾರೆ. ಜಾತೀಯತೆಯಿಂದ ಜರ್ಜರಿತಗೊಂಡ ದೇಶವೊಂದರ ದಿಟ್ಟ ಹೆಜ್ಜೆ ಇದಾಗಿದೆ, ಉಳಿದ ದೇಶಗಳೂ ಇದನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮತ್ತಷ್ಟು ಬಲ ಬಂದಿದ್ದು ಸ್ವಿಡನ್ ವ್ಯಕ್ತಪಡಿಸಿದ ಬೆಂಬಲದಿಂದ. ಐರೋಪ್ಯ ರಾಷ್ಟ್ರಗಳು ಇದನ್ನು ಆದ್ಯತೆ ನೆಲೆಯಲ್ಲಿ ಪರಿಗಣಿಸಲಿವೆ ಎನ್ನುವ ಮೂಲಕ ಅದು ಯುರೋಪ್ ಬದಲಾವಣೆಗೆ ತೆರಕೊಳ್ಳುವ ಇಂಗಿತ ಹೊಂದಿದ್ದನ್ನು ಸೂಚ್ಯವಾಗಿ ಹೇಳಿದಂತಾಗಿದೆ. ವರ್ಗ ಸಂಘರ್ಷದಿಂದ ನಲುಗಿ ಹೋಗಿರುವ ಯುರೋಪ್ ನಾಗರಿಕತೆಯಲ್ಲಿ ಮಾಸ್ಟರ್-ಸ್ಲೇವರ್ ಒಂದು ದೊಡ್ಡ ಪಿಡುಗೇ ಆಗಿದೆ. ಭಾರತದ ಚತುರ್ವರ್ಣ ವ್ಯವಸ್ಥೆ ಇದಕ್ಕೂ ಹೀನವಾಗಿರುವಂಥದು. ಯುರೋಪ್ ಇದರಿಂದ ಹೊರಬರಲು ಹವಣಿಸುವುದು ಗಮನಸೆಳೆಯುತ್ತದೆ.
ದಕ್ಷಿಣ ಆಫ್ರಿಕಾ ಮತ್ತಿತರ ರಾಷ್ಟ್ರಗಳಲ್ಲಿ ವರ್ಣ ಮತ್ತು ವರ್ಗ ಸಂಘರ್ಷಗಳು ಅತ್ಯಂತ ಹೀನಾಯ ಸ್ಥಿತಿಗೆ ಮನುಷ್ಯ ಬದುಕನ್ನು ಎಳೆದೊಯ್ದ ಉದಾಹರಣೆಗಳಿವೆ. ಭಾರತದ ಗಾಂಧಿ, ಅಂಬೇಡ್ಕರ್ ಮತ್ತು ಆಫ್ರಿಕಾದ ನೆಲ್ಸನ್ ಮಂಡೆಲಾ ಇದರ ರಾಕ್ಷಸಿ ರೂಪವನ್ನು ಕಂಡವರು. ಇದಕ್ಕೆ ದೊಡ್ಡ ಪ್ರತಿಭಟನೆ ವ್ಯಕ್ತಪಡಿಸಿದವರು. ಅದರ ವಿರುದ್ಧ ಹೋರಾಡಿ ತಕ್ಕಮಟ್ಟಿನ ಯಶಸ್ಸು ಕಂಡವರು. ಮತ್ತೆ ಇಂಥ ಹೋರಾಟಗಳು ನಡೆಯಲೇಬೇಕಾದ ತುರ್ತಿದೆ. ಈ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯ ಈ ಕ್ರಮ ಚಳವಳಿಯ ಸ್ವರೂಪ ಪಡಕೊಳ್ಳಬೇಕಿದೆ.
ಭಾರತದಲ್ಲಿನ ಸಾಮಾಜಿಕ ಸ್ಥಿತಿಯಲ್ಲಿ ಜಾತಿ ತಾರತಮ್ಯ ಮೇಲ್ವರ್ಗದ ಮತ್ತು ಅದರಲ್ಲೂ ಬ್ರಾಹ್ಮಣರ ಬಹುದೊಡ್ಡ ಅಸ್ತ್ರವಾಗಿದೆ. ಹುಟ್ಟಿನ ಕಾರಣಕ್ಕೆ ಶ್ರೇಷ್ಠ ಎನ್ನುವ ಬಿಟ್ಟಿ ಪಟ್ಟ ಅಲಂಕರಿಸುವ ಭಾರತದ ಬ್ರಾಹ್ಮಣರು ಇಡೀ ದೇಶವನ್ನು ದಟ್ಟ ದಾರಿದ್ರ್ಯಕ್ಕೆ ನೂಕಿದ್ದಾರೆ. ಈ ಚಾಳಿ ಇತರ ಮೇಲ್ವರ್ಗಕ್ಕೂ ವ್ಯಾಪಿಸಿದ್ದು ನಾಚಿಕೆ ಪಡುವಂಥ ಬೆಳವಣಿಗೆ. ಕೆಳಗಿನವರನ್ನು ಆದಷ್ಟು ಅದುಮುತ್ತಲೇ ಮೇಲಾಟವನ್ನು ಕಾಪಾಡಿಕೊಂಡು ಬಂದ ಮೇಲ್ವರ್ಗದ ದರ್ಪ ಕೊಂಚವಾದರೂ ಸಡಿಲಗೊಂಡಿದ್ದು ಅಂಬೇಡ್ಕರ್ ನಡೆಸಿದ ಹೋರಾಟದಿಂದ. ಆದರೆ, ಅದರ ಫಲಾನುಭವಿಗಳು (ಎಲ್ಲರೂ ಅಲ್ಲ ) ಮಾತ್ರ ಆರ್ಥಿಕವಾಗಿ ಸಬಲಗೊಳ್ಳುತ್ತಿದ್ದಂತೆ ನವಬ್ರಾಹ್ಮಣರಾಗುತ್ತಿರುವುದು ವಿಷಾದಕರ.
ವೀರಶೈವ, ಲಿಂಗಾಯತರ ವಿಷಯದಲ್ಲೂ ಇದೇ ಸ್ಥಿತಿ. ಜಾತಿ ವಿನಾಶದ ಮೂಲ ಅಜೆಂಡಾ ಇಟ್ಟುಕೊಂಡು ಸಾಮಾಜಿಕ ಕ್ರಾಂತಿಯೊಂದನ್ನು ರೂಪಿಸಿದ ಬಸವಣ್ಣ ದೇವರ ಸ್ಥಾನಕ್ಕೆ ಏರಿದರು. ಅನುಯಾಯಿಗಳು ಜಾತಿ ವಿನಾಶದ ಬದಲು ಅವರೇ ಒಂದು ಜಾತಿಯಾಗಿ ಪ್ರಭುತ್ವ, ಅಧಿಕಾರಕ್ಕಾಗಿ ಮತ್ತದೇ ಶೋಷಣೆಯ ಮಾರ್ಗ ಹಿಡಿಯುತ್ತಿರುವುದು ಎಂಥ ವಿಪರ್ಯಾಸ!
ಇಂದು ಕರ್ನಾಟಕದ ರಾಜಕಾರಣದಲ್ಲಿ ನಡೆಯುತ್ತಿರುವುದನ್ನು ಗಮನಿಸಿದರೆ ಇದು ಢಾಳಾಗಿ ಕಾಣಿಸುವ ಸತ್ಯ. ಮೈಸೂರಿನ ಸುತ್ತೂರು ಮಠದಲ್ಲಿ, ಆರ್ ಎಸ್ ಎಸ್ ಪೌರೋಹಿತ್ಯದಲ್ಲಿ ಗೋಧ್ರಾ ನರಹತ್ಯೆಯ ರೂವಾರಿ ಎಂದೇ ಟೀಕೆಗೆ ಒಳಗಾದ ಮತ್ತು ಅಮೆರಿಕದಂಥ ರಾಷ್ಟ್ರಗಳ ವೀಸಾ ಪಡೆಯುವುದಕ್ಕೂ ಅನರ್ಹತೆ ಗಳಿಸಿಕೊಂಡ ನರೇಂದ್ರ ಮೋದಿಯಿಂದ ಇಡೀ ಕರ್ನಾಟಕ ಸರ್ಕಾರದ ಸಚಿವರು ಪ್ರವಚನ ಕೇಳುವ ಪರಿಸ್ಥಿತಿ! ಭಾರತದ ಪ್ರಜಾಪ್ರಭುತ್ವಕ್ಕೆ ಬಂದ ಇಂಥ ಗಂಡಾಂತರಕ್ಕೆ ಏನು ಹೇಳಬೇಕು?
ವಿಶ್ವದ ೨೦ ಕೋಟಿಗೂ ಹೆಚ್ಚು ಜನ ಜಾತೀಯ ತಾರತಮ್ಯದಿಂದ ನಲುಗುತ್ತಿದ್ದಾರೆ. ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದಾರೆ. ಈ ಸಂಬಂಧ ವಿಶ್ವಸಂಸ್ಥೆ ಮಾನವ ಹಕ್ಕು ಸಮಿತಿ ಕರಡು ಸಿದ್ದಾಂತ ಮತ್ತು ಮಾರ್ಗಸೂಚಿ ಸಿದ್ಧಪಡಿಸುತ್ತಿದೆ. ಇದಕ್ಕೆ ಕಾನೂನಿನ ಕಸುವು ತುಂಬಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಂಜೂರಾತಿಗೆ ಯತ್ನಿಸುತ್ತಿದೆ.
ಜಾತಿ, ವೃತ್ತಿ ಮತ್ತು ಜನಾಂಗ ಆಧಾರಿತ ತಾರತಮ್ಯ ಮಾನವೀಯ ಮೌಲ್ಯ ಅಲ್ಲ ಎನ್ನುವುದು ಈ ಮೂಲಕ ವಿಶ್ವಕ್ಕೆ ಮನದಟ್ಟು ಮಾಡುವುದು ಸಾಧ್ಯವಿದೆ. ಈ ನಿಟ್ಟಿನಲ್ಲಿ ವಿಶ್ವದ ಇತರ ರಾಷ್ಟ್ರಗಳು ಸಂಕಲ್ಪ ಮಾಡಿಕೊಂಡಲ್ಲಿ ಮಹತ್ತರ ಬದಲಾವಣೆಗೆ ದಾರಿಯಾಗುತ್ತದೆ.
ವಿಪರ್ಯಾಸವೆಂದರೆ ಭಾರತ ವಿಶ್ವದ ಈ ನಡೆಯನ್ನೇ ವಿರೋಧಿಸಿದೆ!
ಕಾಮೆಂಟ್ಗಳು