ವಿಷಯಕ್ಕೆ ಹೋಗಿ

ಇಡ್ಡಿ, ವಡೆ, ಕಾಫಿ ನುಂಗಲು ಬರ್ತಿದೆ ಅಮೆರಿಕನ್ ದರ್ಶಿನಿ!


ಅಮೆರಿಕದ ಬೂಟು, ಬಂದೂಕು ಬಂದ ಹಾಗೆ ಬ್ರೆಡ್, ಬಿಸ್ಕತ್ ಕೂಡ ಇಲ್ಲಿ ಬಂದಾಗಿದೆ. ಶ್ರೀಮಂತ ರಾಷ್ಟ್ರ, ಸೂಪರ್ ಪಾವರ್ ಧಿಮಾಕಿನಿಂದ ಕೊಂಚ ಕೆಳಕ್ಕಿಳಿಯುವಂಥ ಆರ್ಥಿಕ ಹೊಡೆತವನ್ನೂ ಅದು ಎದುರಿಸುತ್ತಿದೆ. ಇನ್ನದು ರಸ್ತೆ ವ್ಯಾಪಾರಕ್ಕೂ ಇಳಿಯುವ ದಿನಗಳು ದೂರವಿಲ್ಲ. ಆದರೂ ವ್ಯಾಪಾರದಲ್ಲಿ ನಮ್ಮ ಮಾರ್ವಾಡಿಗಳ ಮಾವನಂತಿರುವ ಅಮೆರಿಕನ್ನರು ಕಷ್ಟ ಬಂದಾಗ ಕತ್ತೆ ಕಾಲೂ ಹಿಡಿಯುವುದಕ್ಕೆ ಹೇಸುವುದಿಲ್ಲ. ಆ ಮಾತು ಹಾಗಿರಲಿ.
 ನಮ್ಮ ಬೆಂಗಳೂರಿನ ಎಂ ಜಿ ರಸ್ತೆಯಲ್ಲಿರುವ ಸ್ಪೆನ್ಸರ್ ಸೂಪರ್ ಮಾರ್ಕೆಟ್ ನಲ್ಲಿ ಅಮೆರಿಕ ಕಂಪೆನಿಯೊಂದು ಹೊಟೆಲ್ ಆರಂಭಿಸಿದೆ. ಔ ಬಾನ್ ಪೇನ್ ಎನ್ನುವುದು ಹೊಟೇಲ್ ಹೆಸರು. ಇದೊಂದು ಥರ 'ಅಮ್ಯಾರಿಕನ್ ದರ್ಶಿನಿ'!  ಕಾಫಿ, ಟೀ, ಬ್ರೆಡ್ ಜತೆ ಒಂದು ಸಿಂಪಲ್ ಊಟ ಕೂಡ ಅದರ ಮೆನುವಿನಲ್ಲಿದೆ. ಪಾಶ್  ಎನಿಸುವ ಗಾಜಿನ  ಮನೆಯಲ್ಲಿ  ನಮ್ಮ ನ್ನು  ಕೂರಿಸುವ  ನೈಸ್  ಆಗಿ ಬೆಣ್ಣೆ ಹಚ್ಚಿದ ಬ್ರೆಡ್ ಟೇಬಲ್ಲಿಗಿಟ್ಟು ಅಷ್ಟೇ ನೈಸ್ ಆಗಿ ಜೇಬಿಗೆ ಕೈ ಹಾಕುವ ಈ ಹೊಟೇಲು ಅಷ್ಟು ದುಬಾರಿ ಏನಲ್ಲ.  ಆದರೆ,  ಇದರ ಡೌನ್ ಟು ಅರ್ತ್ ಮನೋಧರ್ಮ ನೋಡಿದರೆ ಇನ್ನಿದು ಬೆಂಗಳೂರಿನ ಎಲ್ಲೆಡೆ ದರ್ಶಿನಿಗಳಂತೆ ತನ್ನ ಬ್ರಾಂಚ್ ತೆರೆಯುವುದರಲ್ಲಿ ಸಂದೇಹವೇ ಇಲ್ಲ. ಪಕ್ಕಾ ಅಮೆರಿಕ, ಇಟ್ಯಾಲಿಯನ್, ಫ್ರೆಂಚ್ ಕುವರಿಯಂತೆ ಕಂಗೊಳಿಸುವ ಇದರ ವಿನ್ಯಾಸ, ಟೇಬಲ್ಲಿಗಿಡುವ ಕಾಫಿ ಕಪ್ ಗೆ  ಟೀನೇಜ್ ಹುಡುಗಿಯ ವೈಯ್ಯಾರವಿದೆ. ಇದೆಲ್ಲ  ನೋಡಿದರೆ ನಮ್ಮೂರ  ಹೊಟೇಲುಗಳಿಗೆ  ಗತಿ ಕಾದಿದೆ ಅನಿಸುತ್ತದೆ.  ಇದರ ಬಿಸಿ ಬಿಸಿ ಕಾಫಿ ನಮ್ಮ ಕೆಫೆ ಕಾಫೀ ಡೇ ಕಾಫಿಯನ್ನು ಮೀರಿಸುವಂಥದಿದ್ದೆ (ಸದ್ಯಕ್ಕೆ). ರೇಟು ಕೂಡ ಅಂಥ ದುಬಾರಿ ಏನಲ್ಲ (ಅದೂ ಸದ್ಯಕ್ಕೆ)... ಇದಿಷ್ಟು ಸಾಕಲ್ಲ ನಮ್ಮ ಉಡುಪಿ ದರ್ಶಿನಿಗಳ ಇಡ್ಲಿ, ವಡೆ, ದೋಸೆ... ಮತ್ತದೇ ಕುಂಬಳಕಾಯಿ, ತುರಿದ ಕೊಬ್ಬರಿ, ಒಂದಷ್ಟು ಎಂಟಿಆರ್ ಮಸಾಲೆ ಹಾಕಿ ಮಾಡುವ ಸಾಂಬಾರಿನ ರುಚಿಗೆ ಸಖತ್ ಪೈಪೋಟಿ ನೀಡಲು?
 ಯಾವಾಗ ಅಮೆರಿಕದ ಪೆಪ್ಸಿ, ಕೋಲಾ ಭಾರತಕ್ಕೆ ಬಂತೊ ಆಗಿನಿಂದ ನಮ್ಮ ಪಾನೀಯಗಳು, ಎಳೆನೀರು ಚಮಕ್ ಕಳಕೊಂಡವು. ಅಮೆರಿಕದ ಬಿಸ್ಕತ್ತುಗಳು ಬಂದ ಮೇಲೆ ನಮ್ಮ ಪಾರ್ಲೆ ಜಿ ರುಚಿ ಕಳಕೊಂಡಿತು. ಹೀಗೆ ಒಂದೊಂದಾಗಿ ಕಳಕೊಳ್ಳುತ್ತಾ ಇಡ್ಲಿ, ವಡೆ, ಲೋಟ ಕಾಫಿಯನ್ನೂ ಕಳಕೊಳ್ಳುತ್ತೇವೋ ಏನೋ?....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...