ವಿಷಯಕ್ಕೆ ಹೋಗಿ

ನಾರ್ವೆ ರಾಜಧಾನಿ ಒಸ್ಲೊ ನೆಲಕ್ಕಿಳಿದಾಗ...

ನಾರ್ವೆ ರಾಜಧಾನಿ ಒಸ್ಲೊಗೆ ಪ್ಯಾರಿಸ್ ನಿಂದ ಪಯಣ ಶುರುವಾಯ್ತು. ಈ ಸಲ ನನ್ನವ್ವನಿಗೆ ಕಿಟಕಿ ಇರುವ ಸೀಟು ಸಿಕ್ಕಿತು. ಫ್ಲೈಟ್ ಟೇಕಾಫ್ ಆಗುವ ಮಜಾ ಅವಳಿಗೆ ಮೊದಲ ಸಲ ಸಿಕ್ಕಿರಲಿಲ್ಲ. ಈ ಸಲ ಅವಳು ಥ್ರಿಲ್ ಆದಳು. ಭೂಮಿಯಿಂದ ಮೇಲಕ್ಕೆ ಹಾರುವ ಹಕ್ಕಿಯಂಥ ಅನುಭವ ಆಕೆಗೆ ಆಗಿರಲೇಬೇಕು. ಅಮ್ಮಾ! ಜಮೀನ್, ರಸ್ತಾ, ಘರ್ ಕಿತನೆ ಛೋಟೆ ಲಗ ರಹೇ ಹೈ, ವೋ ದೇಖೋ ಆಸ್ಮಾನ್, ಬಾದಲ್, ಸೂರಜ್... ಗಾಂವ್ ಮೇ ಉಡತಾ ಹುವಾ ಹವಾಯಿಜಹಾಜ್ ಸಿರ್ಫ್ ದೇಖತೆ ಥೇ, ಆಜ್ ಅಸಲಿ ಎಹಸಾಸ್ ಹುವಾ, ಹಮಾರಿ ಬೇಟಿ ಸಪನಾ ಸಚ್ ಕರ್ ದೀ... 
ನನ್ನವ್ವನ ಮಾತುಗಳಿವು. ಭೂಮಿ, ಆಕಾಶ, ರಸ್ತೆ, ಮನೆ... ಎಲ್ಲ ಎಷ್ಟು ಸಣ್ಣ ಜಗತ್ತು! ಎಲ್ಲ ಅದೆಷ್ಟು ಹತ್ತಿರ! ನಮ್ಮೂರ ಆಕಾಶದಲ್ಲಿ ಹಾರುತ್ತಿದ್ದ ವಿಮಾನವನ್ನು ದೂರದಿಂದಲೇ ನೋಡಿ ದಂಗಾಗುತ್ತಿದ್ದೆವು... ಅದರಲ್ಲಿ ಹತ್ತುವ ಕನಸು ಮೂಡುತ್ತಿತ್ತು...  ಆ ಕನಸನ್ನು ಮಗಳು ಈಗ ನನಸು ಮಾಡಿಬಿಟ್ಟಳು...
ಅವಳ ಕೈಗೆ ಕ್ಯಾಮೆರಾ ಕೊಟ್ಟೆ. ಸಂಕೋಚದಿಂದಲೇ ಕ್ಲಿಕ್ ಮಾಡಲೆತ್ನಿಸಿದಳು. ಅವಳು ತಡಕಾಡುತ್ತಿರುವುದನ್ನೆಲ್ಲ ಅವಳ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಯುರೋಪ್ ಹುಡುಗಿ ಗಮನಿಸಿ ನಗುತ್ತಿದ್ದಳು. ನನ್ನತ್ತ ನೋಡಿ ದೊಡ್ಡದಾಗಿ ನಕ್ಕಳು. ಮೈ ಮಾಮ್ ಎಂದೆ, ಯಾ ಐ ಕ್ಯಾನ್ ಅಂಡರಸ್ಟ್ಯಾಂಡ್ ಎಂದು ನಕ್ಕಳು. ನನ್ನವ್ವನನ್ನೇ ನೋಡುತ್ತಿದ್ದಳು, ಕಡೆಗೂ ಆಕೆ ಒಂದಷ್ಟು ಕ್ಲಿಕ್ಕಿಸಿದಳು... ಯಾ ಸೀ ಗಾಟ್ ದಿ ಪಿಕ್ಸ್ ಅಂದಳಾಕೆ... ಅವಳಿಗೆ ಕ್ಯಾಮೆರಾದ ಮಾನಿಟಾರ್ ನಲ್ಲಿ ಪ್ರಿವೀವ್ ತೋರಿಸಿದೆ. ಯಾ ವ್ಹೇರಿ ವ್ಹೇರಿ ನೈಸ್ ಅಂದಳು. ಒಸ್ಲೊ ಬರುವತನಕ ಆಕೆ ನಮ್ಮನ್ನೇ ಗಮನಿಸುತ್ತಿದ್ದಳು. ನಾನು ಪೇಪರ್ ವಿನ್ಯಾಸದಲ್ಲಿ ಮುಳುಗಿದ್ದೆ. ಇಳಿಯುವ ಮುನ್ನ ಆಕೆ, ಯಾ ನೈಸ್ ಮೀಟಿಂಗ್ ಯು, ಹ್ಯಾವ್ ಅ ನೈಸ್ ಟ್ರಿಪ್, ಸಿ ಯು ಬಾಯ್ ಎಂದು ಕೈಕುಲುಕಿದಳು. ಲಗೇಜ್ ತೆಗೆದುಕೊಳ್ಳುವ ಭರಾಟೆಯಲ್ಲಿ ಅವಳನ್ನು ಮತ್ತೆ ಕಾಣುವಷ್ಟೊತ್ತಿಗೆ ಆಕೆ ಮುಂದೆ ಸಾಗಿದ್ದಳು, ಆದರೂ ಒಮ್ಮೆ ಹಿಂತಿರುಗಿ ಕೈ ಮಾಡಿ, ಸ್ಮೈಲ್ ಕೊಡುವುದ ಮರೆಯಲಿಲ್ಲ. ಲಗೇಜ್ ತೆಗೆದುಕೊಳ್ಳುವ ಸಂದರ್ಭ ಮತ್ತೆ ಆಕೆಯೇ ನೋಡಿ ಮಾತನಾಡಿಸಿದಳು. ಏನು ಇಲ್ಲಿ ಬಂದಿದ್ದು ಅಂದಳು, ನಾನವಳಿಗೆ ವಿವರಿಸಿದೆ. ಆಕೆ ಇಲ್ಲೇ ಒಸ್ಲೊದಲ್ಲಿ ಅಧ್ಯಯನಕ್ಕಾಗಿ ದೂರದ ಚೀನಾದಿಂದ ಬಂದವಳು ಎನ್ನುವುದು ಗೊತ್ತಾಯಿತು. ನಿಮ್ಮನ್ನು ಯುರೋ ಹುಡುಗಿ ಅಂದುಕೊಂಡಿದ್ದೆ ಅಂದೆ. ಯಾ ಐ ಆ್ಯಮ್ ಫ್ರಾಮ್ ಯುರೋಪ್ ಒನ್ಲಿ, ಬಟ್ ಮೈ ಪೇರೆಂಟ್ಸ್ ಮೈಗ್ರೆಟೆಡ್ ಟು ಚೈನಾ... ಎಂದಳು. ಆಕೆಗೊಂದು ವಿಸಿಟಿಂಗ್ ಕಾರ್ಡ್ ಕೊಡೋಣ ಎಂದರೆ ಜೇಬಲ್ಲಿ ವಿಸಿಟಿಂಗ್ ಕಾರ್ಡ್ ಸಿಕ್ಕಲೇ ಇಲ್ಲ. ವಿಲ್ ಮೀಟ್ ಇನ್ ಒಸ್ಲೊ ಇಫ್ ಪಾಸಿಬಲ್ ಎಂದೆ. ಶೂರ್ ಎಂದಳಾಕೆ.  ನನ್ನವ್ವ ಕ್ಲಿಕ್ಕಿಸಿದ ಮೊದಲ ಚಿತ್ರಗಳಿವು...
ಒಸ್ಲೊ ಏರ್ ಪೋರ್ಟ್ ತಲುಪಿದಾಗ!... ತುಂಬ ನೀಟಾದ ವಿಮಾನ ನಿಲ್ದಾಣವಿದು. ಅಚ್ಚುಕಟ್ಟಾದ ವ್ಯವಸ್ಥೆ. ಪ್ಯಾರಿಸ್ ನಷ್ಟು ದೊಡ್ಡ ಏರ್ ಪೋರ್ಟ್ ಅಲ್ಲವಾದರೂ, ಸುಸಜ್ಜತೆ ಮತ್ತು ನೀಟನೆಸ್ ದೃಷ್ಟಿಯಲ್ಲಿ ಅದಕ್ಕೂ ಕಮ್ಮಿ ಏನಲ್ಲ.  ಇಲ್ಲಿಂದಲೂ ಯುರೋಪ್ ಮತ್ತಿತರ ಕಡೆಗೆ ಸಾಕಷ್ಟು ವಿಮಾನಗಳು ಹಾರಾಡುತ್ತವೆ. ನಿಲ್ದಾಣದಲ್ಲಿ ಎಲ್ಲಿ ನೋಡಿದಲ್ಲಿ ಸ್ವಚ್ಛತೆ, ಸಭ್ಯತೆ, ಇನಫ್ರಾಸ್ಟ್ರಕ್ಚರ್ ಮನ ಸೆಳೆಯುತ್ತಿತ್ತು.
ಅಂತೂ ನಾವು ಸೇರಬೇಕಿದ್ದ ಜಾಗ ಸೇರಿಕೊಂಡೆವು. ಒಸ್ಲೊ ಏರ್ ಪೋರ್ಟ್ ನಲ್ಲಿ ನಮ್ಮನ್ನು ಸ್ವಾಗತಿಸಲು ಭಾವ ಖಾನ್ ಕಾದು ಕುಳಿತಿದ್ದರು. ಅವರ ಕೈಯಲ್ಲೊಂದು ಸುಂದರ ಹೂಗುಚ್ಛವಿತ್ತು. ಮುಖದಲ್ಲಿ ಸಮಾಧಾನದ ನಗುವಿತ್ತು. ನಾವು ಸುರಕ್ಷಿತವಾಗಿ ಬಂದು ತಲುಪಿದ್ದು ಅವರಿಗೂ ಖುಷಿ ತಂದಿತ್ತು. ಅಂತೂ ಎರಡು ಹಿರಿಯ ಜೀವಗಳನ್ನು ಸುರಕ್ಷಿತವಾಗಿ ಒಸ್ಲೊ ತಲುಪಿಸಿದ ಸಮಾಧಾನ ನನಗೂ. ನನ್ನ ಮೊದಲ ವಿದೇಶ ಪಯಣದ ಒಂದು ಹಂತದ ಕೆಲಸ ಅತ್ಯಂತ ಯಶಸ್ವಿಯಾಗಿತ್ತು.
ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವುದೊಂದೇ ಪಯಣ ಅನಿಸುವುದೇ?... ಒಂದು ವಾತಾವರಣದಿಂದ ಮತ್ತೊಂದು ವಾತಾವರಣಕ್ಕೆ, ಒಂದು ಸಂಸ್ಕೃತಿಯಿಂದ ಮತ್ತೊಂದು ಸಂಸ್ಕೃತಿಗೆ, ಒಂದು ಭಾವ ತೀರದಿಂದ ಮತ್ತೊಂದು ಭಾವ ತೀರಕ್ಕೆ ಬಂದು ನಿಲ್ಲುವ ಮತ್ತು ಒಂದಷ್ಟು ಬೆರೆಯುವ, ಕೊಡಕೊಳ್ಳುವ ಹಾಗೂ ಆಮೂಲಕ ಒಂದಷ್ಟು ಅನುಭವದ ಹರವು ಹಬ್ಬಿಸಿಕೊಳ್ಳುವ ಪರಿಯೇ ಒಂದು ಪುಟ್ಟ ಪಯಣವಾದೀತು! ಅಥವಾ ಒಟ್ಟು ಬದುಕೆಂಬ ಪಯಣದಲ್ಲಿ ಇದೊಂದು ಪುಟ್ಟ ನೆನಪಾಗುಳಿದೀತು ಅಷ್ಟೇ... ಅಲ್ಲವೇ?

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಲೆ ಮತ್ತು ನೈತಿಕತೆ

ಕಲಾವಿದನೊಬ್ಬನ ಕಲೆಯ ಬಗೆಗಿನ ಅನುರಾಗ, ಶ್ರದ್ಧೆ, ವಿಶ್ವಾಸಾರ್ಹತೆ ಮತ್ತು ಧ್ಯಾನ ಎಲ್ಲವೂ ಬದ್ಧತೆಯಿಂದ ಕೂಡಿರುತ್ತದೆ. ಅವನೊಳಗೇ ಒಂದು ಸ್ವರ್ಗ ಸಮಾನವಾದ ಜಗತ್ತೊಂದು ರೂಪುಗೊಂಡಿರುತ್ತದೆ. ಅದನ್ನು ಬೇಕಿದ್ದರೆ ಕಾವ್ಯದ  ಅಂತಃದೃಷ್ಟಿ, ಅಂತಃಪ್ರಜ್ಞೆ ಅಥವಾ ಅಂತಃ ಸೂಕ್ಷ್ಮತೆ ಅಂತ ಅನ್ನಿ. ಕಾವ್ಯ ಎಂದಾಕ್ಷಣ ಅಕ್ಷರಗಳ ಕಲಾಕೃತಿ ಅಲ್ಲ. ಕಾವ್ಯ ಅಥವಾ ಪೊಯಟ್ರಿ ಅನ್ನೋದು ಎಲ್ಲದರೊಳಗೂ ಇರುವ ಅವ್ಯಕ್ತ ಸೂಕ್ಷ್ಮ. ಅದನ್ನು ಅಭಿವ್ಯಕ್ತಿಸಲು ನಾವು ಕಂಡುಕೊಳ್ಳುವ ಮಾರ್ಗಗಳಲ್ಲಿ ಅಕ್ಷರ, ಶಬ್ದ, ಧ್ವನಿ, ಚಿತ್ರ, ಅಭಿನಯ.. ಎಲ್ಲವೂ ಒಂದು ಮಾಧ್ಯಮ. ಕಲಾವಿದ ಅಥವಾ ಕವಿ ತಾನು ಸೃಜಿಸಹೊರಟ ಕೃತಿಯಲ್ಲಿ ಇದೆಲ್ಲವನ್ನು ಪ್ರಯೋಗಕ್ಕೊಳಪಡಿಸಿ ಅದರ ಸಾರವನ್ನೇ ಅಭಿವ್ಯಕ್ತಿಯಲ್ಲಿ ಎರಕಹೊಯ್ಯುತ್ತಾನೆ. ಹಾಗಾದಾಗ ಆ ಕಲಾಕೃತಿಯಲ್ಲಿ ಧ್ವನಿಸುತ್ತಿರುವುದು ಅವನ ದೃಷ್ಟಿ, ಪ್ರಜ್ಞೆ, ತತ್ವ, ಅಭಿಪ್ರಾಯ ಆಗುತ್ತದೆ. ಇದಕ್ಕೂ ಮಿಗಿಲಾಗಿ ಅದು ಆತನ ಅನುಭಾವ ಪರಪಂಚವೇ ಆಗುತ್ತದೆ. ಪ್ರತಿನಿಧಿಸುವ ತತ್ವ ಅವನದೇ ಆಗಬಹುದು. ಅದಕ್ಕವನು ಬದ್ಧನೂ ಆಗಬಹುದು. ಇಲ್ಲವೇ ಅರಾಜಕತೆಯ ಹಾಗೊಂದು ಭಾವದಲ್ಲಿ ತನಗೂ ತನ್ನ ಕಲಾಕೃತಿಗೂ ಸಂಬಂಧವೇ ಇಲ್ಲ ಎಂದು ವಾದಿಸಬಹುದು. ಅರಾಜಕತೆಯಿಂದ ಕೂಡಿದ ಯಾವುದೂ ಬಹುಕಾಲ ಬಾಳಿ ಬದುಕುವಂಥದ್ದಲ್ಲ ಎನ್ನುವ ಎಚ್ಚರ ಕೂಡ ಮುಖ್ಯ.   ಮತ್ತೆ ಕಲಾವಿದನ ಅಭಿವ್ಯಕ್ತಿಯನ್ನು ಬರಿಯ ಸಾಂಸ್ಕೃತಿಕ ನೆಲೆಯಲ್ಲಿ ಮಾತ್ರ ಕಾಣಬೇಕಿಲ್ಲ. ಅದು ಸಮ...

'ಅನಭಿಜ್ಞ ಶಾಕುಂತಲ': ನೆನಪು ಮರೆವಿನಾಟ

 ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ ಅಥವಾ ಸಾರ್ಥಕತೆಯ ದಡ ಸೇರುವುದು. ಈ ಆಟದ ಒಂದು ಹಂತದಲ್ಲಿ ಕಷ್ಟದ ಅಡವಿ ಸೇರುವುದೂ ಇದೆ! 'ಆಡಾಡ್ತ ಅಡವಿ ಸೇರುವುದು' ಅಂತಾರಲ್ಲ ಹಾಗೆ. ಅಡವಿ ಅಂದರೆ ಇಲ್ಲಿ ಸಂಕೀರ್ಣತೆ, ಸಂಕಷ್ಟ ಅವಘಡ, ಸಂದಿಗ್ಧತೆ ಎಂದು ಭಾವಿಸಿಕೊಳ್ಳಬಹುದು. ಬದುಕಿನ ದಾರಿಯಲ್ಲಿ ಒಮ್ಮೆ ಈ 'ಅಡವಿ' ಎದುರಾಗೇ ಆಗುತ್ತದೆ ಎನ್ನುವುದು ವಿಧಿಲಿಖಿತವೇ? ಗೊತ್ತಿಲ್ಲ. ಪ್ರೀತಿ-ಪ್ರೇಮ-ಕಾಮ ಎನ್ನುವ ಬದುಕಿನ ಒಟ್ಟಾರೆ ಆಟ- ಕೂಟದಲ್ಲಿ ಪಡಕೊಳ್ಳುವುದೆಲ್ಲ ಜೀವಕಾರುಣ್ಯವಷ್ಟೇ ಅಲ್ಲ. ಸಂಕಷ್ಟ ಮತ್ತು ಸಂದಿಗ್ಧತೆಯೂ ಜತೆಯಲ್ಲಿರುತ್ತದೆ ಎನ್ನುವುದು ಸಹಜ ಮನೋಧರ್ಮ.  ಬದುಕಿನ ಆಟಕ್ಕೆ ತೆರಕೊಂಡವರಲ್ಲಿ ಹಲವರು ಅನುಭವಿಸಿದ ಮಧುರ ಘಳಿಗೆಗಳನ್ನು ಕಡೆತನಕ ನೆನಪಿಟ್ಟುಕೊಳ್ಳುತ್ತಾರೆ. ಕೆಲವರು ಮರೆತೇ ಬಿಡುತ್ತಾರೆ!?..  ಕಾಳಿದಾಸನ ಮಹಾಕಾವ್ಯ ಶಾಕುಂತಲೆಯಲ್ಲಿ ಈ ಬದುಕು, ಮನುಷ್ಯ ಪ್ರೀತಿ ಪಯಣದ ನೆನಪು ಮತ್ತು ಮರೆವಿನಾಟ ಮನಮಿಡಿಯುವಂತೆ ಚಿತ್ರಣಗೊಂಡಿದೆ. ಈ ಕಾವ್ಯದಲ್ಲಿ ಎಲ್ಲವನ್ನು ವಿಧಿಯೇ ನಿರ್ಧರಿಸಿದಂತೆನಿಸುತ್ತದೆ. ಫೇಟಲಿಸಂ ವಾದಕ್ಕೆ ಪೂರಕವಾದ ಚಿಂತನೆ ಇದೆನ್ನಬಹುದು. ಆಧುನಿಕ ಯುಗದ ಶೇಕ್ಸಪಿಯರ್ ನ ಹಲವು ನಾಟಕಗಳಲ್ಲಿಯೂ ಈ ಫೇಟಲಿಸಂ ಪ್ರಧಾನ ಪಾತ್ರದಂತೆ ವರ್ತಿಸುವುದನ್ನು ಗಮನಿಸಬಹುದು. * ...

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ...