ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 4, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮುಸ್ಸಂಜೆಯ ಮುಲುಕು...

ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ ಸೋಮವಾರ, 2 ಡಿಸೆಂಬರ್ 2013, ಸಂಜೆ 7.00 ನಾಟಕ: ಮುಸ್ಸಂಜೆ ಕಥಾಪ್ರಸಂಗ (ಪಿ. ಲಂಕೇಶ್ ಕೃತಿ ಆಧಾರಿತ)  ಟಿಕೆಟ್: ರೂ. 50 ರಂಗರೂಪ: ಬಸವರಾಜ್ ಸೂಳೇರಿಪಾಳ್ಯ ಅಭಿನಯ: ರೂಪಾಂತರ ತಂಡ, ಬೆಂಗಳೂರು ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. . * * * ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧ