ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್ 21, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡ್ರಾಮಾಕ್ರಸಿ-3: ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...

ಎಡ್ಡ: ಮನ್ನಿ ‘ಮೊದಲು ಅರಿ ಆಮೇಲೆ ಇರಿ’ ಅಂತೆಲ್ಲಾ ಚಂಪಾ ಡೈಲಾಗ್ ಹೊಡದಿ. ಅಂಥ ಬಂಡಾಯದ ಬರಹಗಾರರು ಚಿಂತಕರು ಇಂಥಾ ಸಂದಿಗ್ಧ ಪರಿಸ್ಥಿತಿಯೊಳಗೂ ಮಂಕಾಗಿ ಕೂತಾರಲೇ ಏನ್‌ ಮಾಡೂನ ಇದಕ್ಕ. ಗಿಡ್ಡ: ನಾನೂ ಅದನ್ನ ಹೇಳೂದು. ಅರ್ಧ ಸತ್ಯದ ಹುಡುಗಿ ಗುಂಗಿನಾಗ ಅದಾರ್ರಿ ಅವ್ರಿನ್ನೂ. ಅಕಿ ಸತ್ ಸ್ವರ್ಗಾ ಸೇರಿಳೋ, ನರಕದಾಗ ಅದಾಳೋ ಗೊತ್ತಿಲ್ಲ. ಸತ್ತದ್ದಂತೂ ಖರೇ. ರಾಜಬಬ್ಬರ್ ಅಕಿನ್ ಮರತು ಜಮಾನಾನ ಆತು. ಎಡ್ಡ: ಸೈದ್ಧಾಂತಿಕ ಜಗಳದೊಳಗ ಹೆಚ್ಚು ಕಾಲ ಕಳದ ಚಂಪಾ ಸಾಹಿತ್ಯ ರಚನಾದಿಂದ ದೂರ ಸರದ ಭಾಳ ವರ್ಷನ ಆತು. ಅವ್ರ ಹೋರಾಟ, ಬಂಡಾಯದ ಮೊನಚು ಯಾಕೋ ಕಮ್ಮಿ ಆತು. ಅದ್ಭುತ ಅಸಂಗತ ನಾಟಕಗಳನ್ನ ಕೊಟ್ಟ ಮನಶ್ಯಾ ಸಾಹಿತ್ಯದೊಳಗ ಇನ್ನೂ ಎಂಥಾ ಅದ್ಭುತ ಸೃಷ್ಟಿ ಮಾಡಬಹುದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ, ಸ್ವಾಭಿಮಾನಿ ಕರ್ನಾಟಕ ಅಂತೆಲ್ಲ ಅವ್ರೂ ರಗಡ ಖಟಪಟಿ ಮಾಡಿದ್ರು ಖರೆ. ಏನಾತು? ಪಾಟೀಲ ಪುಟ್ಟಪ್ಪ ಅಂದ್ರ ನಮ್ ‘ಪಾಪು’ ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಹೆಂಗ್ ಆಚೆ ಬರಲೇ ಇಲ್ಲಲಾ, ಹಾಂಗ ಇವ್ರು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅನ್ನೂದ ಬಿಟ್ಟ ಬ್ಯಾರೆ ಏನೂ ಖಡಕ್ ಆಗಿ ಮಾಡಲೇ ಇಲ್ಲ. ಗಿಡ್ಡ: ಅರ್ಧಾ ಜೀವನಾ ‘ಒಕ್ಕಣ್ಣಿನ ರಾಕ್ಷಸ’ ಅಂತ ಲಂಕೇಶ್‌ ಮ್ಯಾಲ ಲೇವಡಿ ಮಾಡೂದರಾಗ ಕಳೀತು. ಇನ್ನರ್ಧಾ ಜೀವನಾ ಕನ್ನಡ ಹೋರಾಟ. ಈ ಹೋರಾಟಕ್ಕರೇ ಸೀರಿಯಸ್ ಆಗಿ ಸರಿಯಾದ ದಿಕ್ಕು ದೆಸಿ ತೋರಿಸ್ಬಹುದಾಗಿತ್ತು. ಅದೂ ಮಾಡ್ಲಿಲ್ಲ. ಪ್ರಾಧಿಕಾರದೊ