ವಿಷಯಕ್ಕೆ ಹೋಗಿ

ಮುಸ್ಸಂಜೆಯ ಮುಲುಕು...

ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ
ಸೋಮವಾರ, 2 ಡಿಸೆಂಬರ್ 2013, ಸಂಜೆ 7.00
ನಾಟಕ: ಮುಸ್ಸಂಜೆ ಕಥಾಪ್ರಸಂಗ
(ಪಿ. ಲಂಕೇಶ್ ಕೃತಿ ಆಧಾರಿತ)

 ಟಿಕೆಟ್: ರೂ. 50

ರಂಗರೂಪ: ಬಸವರಾಜ್ ಸೂಳೇರಿಪಾಳ್ಯ
ಅಭಿನಯ: ರೂಪಾಂತರ ತಂಡ, ಬೆಂಗಳೂರು
ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು




ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. .
* * *
ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧರ್ಮಕರ್ಮಠದ ಪಾಲನೆಯಲ್ಲಲ್ಲ . ಇದು ಎಲ್ಲ ಧರ್ಮ, ಜಾತಿಗಳಿಗೂ ಅನ್ವಯಿಸುವಂಥದು.
* * *
ಬ್ಯಾಡರ ಹುಡಗ ಮತ್ತು ಲಿಂಗಾಯತರ ಹುಡುಗಿ ಪರಸ್ಪರ ಪ್ರೇಮಿಸಿದ ಮಾತ್ರಕ್ಕೆ ಒಂದು ಕ್ರಾಂತಿ ನಡೆದುಹೋಗಲ್ಲ. ಅದನ್ನು ಸಮುದಾಯಗಳು ಪರಸ್ಪರ ಗೌರವಾದರದಿಂದ ಕಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಕ್ರಾಂತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರೇಮಿಗಳ ಪ್ರೇಮ ಪ್ರಕರಣಕ್ಕೆ ಪ್ರತಿಯಾಗಿ ಲಿಂಗಾಯತ ಸಮುದಾಯದ ಕೆಲ ಕಿಡಿಗೇಡಿಗಳಿಂದ ಕಿತಾಪತಿಗಳೇನೋ ನಡೆಯುತ್ತವೆ. ಆದರದು ನೈತಿಕ ತಳಹದಿಯ ಮೇಲೆ ನಿಂತ ಸಾಮಾಜಿಕ ಸವಾಲೇನಲ್ಲ.

ಹುಡುಗಿಯ ತಾಯಿ ರಂಗವ್ವ ವಿಧವೆ. ಸಮುದಾಯದವರ ಕಾಮುಕ ನೋಟ, ಕೊಂಕು ಮಾತುಗಳಿಂದ ರೋಸಿ ಹೋದವಳು. ಅನ್ಯ ಜಾತಿಯ ಹುಡುಗನೊಟ್ಟಿಗೆ ಮಗಳ ಪ್ರೇಮ ಸಲ್ಲಾಪದ ಬಗ್ಗೆ ತಿಳಿದು ಗದರಿಸುವಳಾದರೂ ಹಟಕ್ಕೆ ಬಿದ್ದು ಅವರಿಬ್ಬರ ಬದುಕಲ್ಲಿ ಹುಳಿ ಹಿಂಡುವ ಮನಸ್ಥಿತಿಯವಳಲ್ಲ. ವೈಧವ್ಯದ ನಂತರದಲ್ಲೂ ಪ್ರೀತಿಗಾಗಿ ಹಂಬಲಿಸಿದವಳು ಕೂಡ. ಹೀಗಾಗಿ ಬದುಕಿನ ಜೀವಪ್ರೀತಿ ಮಗಳ ಬದುಕಿನಲ್ಲಾದರೂ ಹಸನಾಗಿ ಹಬ್ಬಿ ಬಾಳಲಿ ಎನ್ನುವ ನಿಲುವಿಗೆ ಬಂದು ನಿಂತವಳು. ಸಮುದಾಯದ ಪ್ರತಿರೋಧಗಳನ್ನು ದಕ್ಕಿಸಿಕೊಂಡು, ಕಿಡಿಗೇಡಿಗಳನ್ನು ಎದುರಿಸಿ ನಿಂತು ಮಗಳ ಪ್ರೇಮ ಬದುಕಿಗೆ ಹೊಸ ಸೂರಾಗುತ್ತಾಳಲ್ಲ! ಅದು ನಿಜವಾದ ಕ್ರಾಂತಿಕಾರಕ ಪ್ರಜ್ಞೆ. ಇಡೀ ಕೃತಿಯ ಆಶಯದಲ್ಲಿ ಕ್ರಾಂತಿ ಮಗಳ ಪ್ರೇಮವಲ್ಲ. ಅದನ್ನು ಒಪ್ಪಿಕೊಂಡು ಮಗಳ ಪ್ರೇಮ ಬದುಕಿಗಾಗಿ ತಾಯಿಯೊಬ್ಬಳು ಸಂಘರ್ಷ ಎದುರಿಸಿ ಗೆಲ್ಲುತ್ತಾಳಲ್ಲ ಅದು ನಿಜವಾದ ಕ್ರಾಂತಿ. ಆದರೆ ರಂಗ ಪ್ರಯೋಗ ಈ ಆಶಯವನ್ನು ಸಶಕ್ತವಾಗಿ ಬದುಕಲಿಲ್ಲ.
* * *
ಪ್ರಯೋಗ, ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮವನ್ನು ರೋಚಕವಾಗಿ ಕಂಡಿತಷ್ಟೇ. ಹೀಗಾಗಿ ಪ್ರೇಮ ಎನ್ನುವುದು ಬರಿಯ ಮನೋಕಾಮನೆಯ ಹಂಬಲವಾಗಷ್ಟೇ ಕಾಣಿಸಿಕೊಂಡಿತು. ಲಸ್ಟ್ ಮುದವೆನಿಸತೊಡಗಿತು. ಪ್ರೇಮ- ಕಾಮ ಅಂತಃ ಸಂಬಂದ ಮತ್ತು ಹಾದರದ ತೆಳು ಸ್ಥರವನ್ನು ಸೂಕ್ಷ್ಮವಾಗಿ ಗ್ರಹಿಸದ ನಡೆಯಿಂದಾಗಿ ಇಡೀ ಪ್ರಸಂಗ ವಲ್ಗರ್ ಅನ್ನಿಸತೊಡಗಿತು. 'ಎ' ಮಾರ್ಕಿನ ಮಲೆಯಾಳಿ ಟೆಂಟ್ ಸಿನಿಮಾದ ಚೀಪ್ ಎಂಟರಟೇನ್ಮೆಂಟ್ ಮನಸ್ಥಿತಿಗೆ ಜಾರಿದಂತೆನಿಸಿತು. ಇದಕ್ಕೆ ಪೂರಕವಾಗಿ ಬಹುತೇಕ ಸಂದರ್ಭದಲ್ಲಿ ಹೊಮ್ಮಿದ ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳು ರಂಗಾಸಕ್ತರ ಎಂದಿನ ಜೀವೋತ್ಸಾಹಕ್ಕೆ ಹತ್ತಿರದವು ಎಂದೆನಿಸಲಿಲ್ಲ.

ಇಡೀ ಕೃತಿಯನ್ನು ರಂಗಕ್ಕೆ ಅಳವಡಿಸುವಲ್ಲಿ ಬಸವರಾಜ ಸೂಳೇರಿಪಾಳ್ಯ ಅವರ ಶ್ರದ್ಧೆ ಎದ್ದು ಕಾಣಿಸುವಂಥದು. ಸಂಭಾಷಣೆಗಳು ಮೊನಚಾಗಿವೆ. ಕೆಲವು ಹೃದಯಸ್ಪರ್ಶಿಯಾಗಿವೆ. ಆದರೆ ನಿರ್ದೇಶನದ (ಕೆ.ಎಸ್.ಡಿ.ಎಲ್ ಚಂದ್ರು) ಟ್ರೀಟಮೆಂಟ್ ಪ್ರಯೋಗಕ್ಕೆ ಪೂರಕವಾಗುವಲ್ಲಿ ಎಡವಿದೆ. ಹನುಮಕ್ಕನ ಪರಿಪಕ್ವ ಅಭಿನಯ ಪ್ರಯೋಗಕ್ಕೆ ಘನತೆ ಮತ್ತು ತೂಕ ಕಟ್ಟಿಕೊಟ್ಟಿದ್ದು ಬಿಟ್ಟರೆ, ಮಿಕ್ಕವರೆಲ್ಲರು ಸೆನ್ಸ್ ಆಫ್ ಹ್ಯೂಮರ್ ನಲ್ಲೇ ಮುಳುಗಿ ಹೋದಂತಿದ್ದರು. ಕೆಲವರ ಅಭಿನಯದಲ್ಲಿ ಉತ್ಸಾಹವೇನೋ ಕಾಣಿಸಿತಾದರೂ ಪಾತ್ರಗಳ ಮಹತ್ವವನ್ನು ಅದು ಬಯಸುವ ಆಳ ಮತ್ತು ಸೂಕ್ಷ್ಮತೆಯನ್ನು ನಟವರ್ಗ ಗ್ರಹಿಸಬೇಕಿತ್ತೆನಿಸಿತು. ವಿನ್ಯಾಸವೂ ಜಾಳು ಜಾಳು. ನಾಟಕವನ್ನು ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮ ಪ್ರಕರಣದ ಮೇಲಿನ ಕಾನಸಂಟ್ರೇಷನ್ ಮೂಲಕ ಕಟ್ಟಿಕೊಳ್ಳುವ ಬದಲಿಗೆ ರಂಗವ್ವನ ಮೂಲಕ ಕಟ್ಟಿಕೊಂಡಿದ್ದರೆ ಪ್ರಯೋಗಕ್ಕೆ ತುಂಬ ಅರ್ಥಪೂರ್ಣ ಆಯಾಮ ದಕ್ಕಬಹುದಿತ್ತು. ನಿರ್ದೇಶಕನ ಲಿಬರ್ಟಿ ಪ್ರಶ್ನಿಸುವ ಶ್ರೂಡನೆಸ್ ಇದು ಅನಿಸಲೂಬಹುದು. ಹಾಗೆನಿಸಿದರೆ ಅದಕ್ಕೊಂದು ಕ್ಷಮೆ ಇರಲಿ. ಆದರೆ ಭರವಸೆಯ ನಿರ್ದೇಶಕ ಚಂದ್ರು ಈ ನಿಟ್ಟಿನಲ್ಲಿ ಕೊಂಚ ಗಮನಹರಿಸಬಹುದಾಗಿತ್ತು ಎನ್ನುವುದು ಕಾಳಜಿ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ