ರವೀಂದ್ರ ಕಲಾಕ್ಷೇತ್ರ-50, ಸುವರ್ಣ ಸಂಭ್ರಮ ನಾಟಕೋತ್ಸವ
ಸೋಮವಾರ, 2 ಡಿಸೆಂಬರ್ 2013, ಸಂಜೆ 7.00
ನಾಟಕ: ಮುಸ್ಸಂಜೆ ಕಥಾಪ್ರಸಂಗ
(ಪಿ. ಲಂಕೇಶ್ ಕೃತಿ ಆಧಾರಿತ)
ಟಿಕೆಟ್: ರೂ. 50
ರಂಗರೂಪ: ಬಸವರಾಜ್ ಸೂಳೇರಿಪಾಳ್ಯ
ಅಭಿನಯ: ರೂಪಾಂತರ ತಂಡ, ಬೆಂಗಳೂರು
ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು
ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. .
* * *
ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧರ್ಮಕರ್ಮಠದ ಪಾಲನೆಯಲ್ಲಲ್ಲ . ಇದು ಎಲ್ಲ ಧರ್ಮ, ಜಾತಿಗಳಿಗೂ ಅನ್ವಯಿಸುವಂಥದು.
* * *
ಬ್ಯಾಡರ ಹುಡಗ ಮತ್ತು ಲಿಂಗಾಯತರ ಹುಡುಗಿ ಪರಸ್ಪರ ಪ್ರೇಮಿಸಿದ ಮಾತ್ರಕ್ಕೆ ಒಂದು ಕ್ರಾಂತಿ ನಡೆದುಹೋಗಲ್ಲ. ಅದನ್ನು ಸಮುದಾಯಗಳು ಪರಸ್ಪರ ಗೌರವಾದರದಿಂದ ಕಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಕ್ರಾಂತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರೇಮಿಗಳ ಪ್ರೇಮ ಪ್ರಕರಣಕ್ಕೆ ಪ್ರತಿಯಾಗಿ ಲಿಂಗಾಯತ ಸಮುದಾಯದ ಕೆಲ ಕಿಡಿಗೇಡಿಗಳಿಂದ ಕಿತಾಪತಿಗಳೇನೋ ನಡೆಯುತ್ತವೆ. ಆದರದು ನೈತಿಕ ತಳಹದಿಯ ಮೇಲೆ ನಿಂತ ಸಾಮಾಜಿಕ ಸವಾಲೇನಲ್ಲ.
ಹುಡುಗಿಯ ತಾಯಿ ರಂಗವ್ವ ವಿಧವೆ. ಸಮುದಾಯದವರ ಕಾಮುಕ ನೋಟ, ಕೊಂಕು ಮಾತುಗಳಿಂದ ರೋಸಿ ಹೋದವಳು. ಅನ್ಯ ಜಾತಿಯ ಹುಡುಗನೊಟ್ಟಿಗೆ ಮಗಳ ಪ್ರೇಮ ಸಲ್ಲಾಪದ ಬಗ್ಗೆ ತಿಳಿದು ಗದರಿಸುವಳಾದರೂ ಹಟಕ್ಕೆ ಬಿದ್ದು ಅವರಿಬ್ಬರ ಬದುಕಲ್ಲಿ ಹುಳಿ ಹಿಂಡುವ ಮನಸ್ಥಿತಿಯವಳಲ್ಲ. ವೈಧವ್ಯದ ನಂತರದಲ್ಲೂ ಪ್ರೀತಿಗಾಗಿ ಹಂಬಲಿಸಿದವಳು ಕೂಡ. ಹೀಗಾಗಿ ಬದುಕಿನ ಜೀವಪ್ರೀತಿ ಮಗಳ ಬದುಕಿನಲ್ಲಾದರೂ ಹಸನಾಗಿ ಹಬ್ಬಿ ಬಾಳಲಿ ಎನ್ನುವ ನಿಲುವಿಗೆ ಬಂದು ನಿಂತವಳು. ಸಮುದಾಯದ ಪ್ರತಿರೋಧಗಳನ್ನು ದಕ್ಕಿಸಿಕೊಂಡು, ಕಿಡಿಗೇಡಿಗಳನ್ನು ಎದುರಿಸಿ ನಿಂತು ಮಗಳ ಪ್ರೇಮ ಬದುಕಿಗೆ ಹೊಸ ಸೂರಾಗುತ್ತಾಳಲ್ಲ! ಅದು ನಿಜವಾದ ಕ್ರಾಂತಿಕಾರಕ ಪ್ರಜ್ಞೆ. ಇಡೀ ಕೃತಿಯ ಆಶಯದಲ್ಲಿ ಕ್ರಾಂತಿ ಮಗಳ ಪ್ರೇಮವಲ್ಲ. ಅದನ್ನು ಒಪ್ಪಿಕೊಂಡು ಮಗಳ ಪ್ರೇಮ ಬದುಕಿಗಾಗಿ ತಾಯಿಯೊಬ್ಬಳು ಸಂಘರ್ಷ ಎದುರಿಸಿ ಗೆಲ್ಲುತ್ತಾಳಲ್ಲ ಅದು ನಿಜವಾದ ಕ್ರಾಂತಿ. ಆದರೆ ರಂಗ ಪ್ರಯೋಗ ಈ ಆಶಯವನ್ನು ಸಶಕ್ತವಾಗಿ ಬದುಕಲಿಲ್ಲ.
* * *
ಪ್ರಯೋಗ, ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮವನ್ನು ರೋಚಕವಾಗಿ ಕಂಡಿತಷ್ಟೇ. ಹೀಗಾಗಿ ಪ್ರೇಮ ಎನ್ನುವುದು ಬರಿಯ ಮನೋಕಾಮನೆಯ ಹಂಬಲವಾಗಷ್ಟೇ ಕಾಣಿಸಿಕೊಂಡಿತು. ಲಸ್ಟ್ ಮುದವೆನಿಸತೊಡಗಿತು. ಪ್ರೇಮ- ಕಾಮ ಅಂತಃ ಸಂಬಂದ ಮತ್ತು ಹಾದರದ ತೆಳು ಸ್ಥರವನ್ನು ಸೂಕ್ಷ್ಮವಾಗಿ ಗ್ರಹಿಸದ ನಡೆಯಿಂದಾಗಿ ಇಡೀ ಪ್ರಸಂಗ ವಲ್ಗರ್ ಅನ್ನಿಸತೊಡಗಿತು. 'ಎ' ಮಾರ್ಕಿನ ಮಲೆಯಾಳಿ ಟೆಂಟ್ ಸಿನಿಮಾದ ಚೀಪ್ ಎಂಟರಟೇನ್ಮೆಂಟ್ ಮನಸ್ಥಿತಿಗೆ ಜಾರಿದಂತೆನಿಸಿತು. ಇದಕ್ಕೆ ಪೂರಕವಾಗಿ ಬಹುತೇಕ ಸಂದರ್ಭದಲ್ಲಿ ಹೊಮ್ಮಿದ ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳು ರಂಗಾಸಕ್ತರ ಎಂದಿನ ಜೀವೋತ್ಸಾಹಕ್ಕೆ ಹತ್ತಿರದವು ಎಂದೆನಿಸಲಿಲ್ಲ.
ಇಡೀ ಕೃತಿಯನ್ನು ರಂಗಕ್ಕೆ ಅಳವಡಿಸುವಲ್ಲಿ ಬಸವರಾಜ ಸೂಳೇರಿಪಾಳ್ಯ ಅವರ ಶ್ರದ್ಧೆ ಎದ್ದು ಕಾಣಿಸುವಂಥದು. ಸಂಭಾಷಣೆಗಳು ಮೊನಚಾಗಿವೆ. ಕೆಲವು ಹೃದಯಸ್ಪರ್ಶಿಯಾಗಿವೆ. ಆದರೆ ನಿರ್ದೇಶನದ (ಕೆ.ಎಸ್.ಡಿ.ಎಲ್ ಚಂದ್ರು) ಟ್ರೀಟಮೆಂಟ್ ಪ್ರಯೋಗಕ್ಕೆ ಪೂರಕವಾಗುವಲ್ಲಿ ಎಡವಿದೆ. ಹನುಮಕ್ಕನ ಪರಿಪಕ್ವ ಅಭಿನಯ ಪ್ರಯೋಗಕ್ಕೆ ಘನತೆ ಮತ್ತು ತೂಕ ಕಟ್ಟಿಕೊಟ್ಟಿದ್ದು ಬಿಟ್ಟರೆ, ಮಿಕ್ಕವರೆಲ್ಲರು ಸೆನ್ಸ್ ಆಫ್ ಹ್ಯೂಮರ್ ನಲ್ಲೇ ಮುಳುಗಿ ಹೋದಂತಿದ್ದರು. ಕೆಲವರ ಅಭಿನಯದಲ್ಲಿ ಉತ್ಸಾಹವೇನೋ ಕಾಣಿಸಿತಾದರೂ ಪಾತ್ರಗಳ ಮಹತ್ವವನ್ನು ಅದು ಬಯಸುವ ಆಳ ಮತ್ತು ಸೂಕ್ಷ್ಮತೆಯನ್ನು ನಟವರ್ಗ ಗ್ರಹಿಸಬೇಕಿತ್ತೆನಿಸಿತು. ವಿನ್ಯಾಸವೂ ಜಾಳು ಜಾಳು. ನಾಟಕವನ್ನು ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮ ಪ್ರಕರಣದ ಮೇಲಿನ ಕಾನಸಂಟ್ರೇಷನ್ ಮೂಲಕ ಕಟ್ಟಿಕೊಳ್ಳುವ ಬದಲಿಗೆ ರಂಗವ್ವನ ಮೂಲಕ ಕಟ್ಟಿಕೊಂಡಿದ್ದರೆ ಪ್ರಯೋಗಕ್ಕೆ ತುಂಬ ಅರ್ಥಪೂರ್ಣ ಆಯಾಮ ದಕ್ಕಬಹುದಿತ್ತು. ನಿರ್ದೇಶಕನ ಲಿಬರ್ಟಿ ಪ್ರಶ್ನಿಸುವ ಶ್ರೂಡನೆಸ್ ಇದು ಅನಿಸಲೂಬಹುದು. ಹಾಗೆನಿಸಿದರೆ ಅದಕ್ಕೊಂದು ಕ್ಷಮೆ ಇರಲಿ. ಆದರೆ ಭರವಸೆಯ ನಿರ್ದೇಶಕ ಚಂದ್ರು ಈ ನಿಟ್ಟಿನಲ್ಲಿ ಕೊಂಚ ಗಮನಹರಿಸಬಹುದಾಗಿತ್ತು ಎನ್ನುವುದು ಕಾಳಜಿ.
ಸೋಮವಾರ, 2 ಡಿಸೆಂಬರ್ 2013, ಸಂಜೆ 7.00
ನಾಟಕ: ಮುಸ್ಸಂಜೆ ಕಥಾಪ್ರಸಂಗ
(ಪಿ. ಲಂಕೇಶ್ ಕೃತಿ ಆಧಾರಿತ)
ಟಿಕೆಟ್: ರೂ. 50
ರಂಗರೂಪ: ಬಸವರಾಜ್ ಸೂಳೇರಿಪಾಳ್ಯ
ಅಭಿನಯ: ರೂಪಾಂತರ ತಂಡ, ಬೆಂಗಳೂರು
ನಿರ್ದೇಶನ: ಕೆ.ಎಸ್.ಡಿ.ಎಲ್ ಚಂದ್ರು
ಬರ್ತೊಲ್ಟ ಬ್ರೆಕ್ಟನ 'ಎ ಗುಡ್ ವುಮನ್ ಆಫ್ ಶೇಜುವಾನ್', 'ಮದರ್ ಕರೇಜ್' ಹಾಗೂ ಮೆಕ್ಸಿಂ ಗೋರ್ಕಿಯ 'ತಾಯಿ'... ಈ ಎಲ್ಲ ಕೃತಿಗಳ ತಾಯಿ ಜೀವವನ್ನು ನೆನಪಿಸುವ "ಮುಸ್ಸಂಜೆಯ ಕಥಾಪ್ರಸಂಗ" ಪಿ.ಲಂಕೇಶ್ ಅವರ ಅದ್ಭುತ ಕೃತಿ. ಅದು ರಂಗದ ಮೇಲೆ ಪಾತ್ರಗಳಾಗಿ ಹರಡಿಕೊಂಡಾಗ ಒಂದರೆಕ್ಷಣ ಮನಸು ವಾವ್ ಅಂದಿತು. .
* * *
ಕೃತಿಯ ಪ್ಲಾಟ್ ನಲ್ಲಿ ಬಹುಮುಖ್ಯವಾಗಿ ಧ್ವನಿಸುವ ಬ್ಯಾಡರ ಹುಡುಗ ಮಂಜ, ಲಿಂಗಾಯತರ ಹುಡುಗಿಯ ಪ್ರೇಮ ಪ್ರಕರಣ, ಸಮುದಾಯವನ್ನು ರೊಚ್ಚಿಗೆಬ್ಬಿಸುವುದು ಇಂಡಿಯನ್ ಸೋಶಿಯಲ್ ಪರಿಸ್ಥಿತಿಯಲ್ಲಿ ಸಹಜ. ಹುಂಬತನದ ಕ್ರಾಂತಿಯಿಂದ ಇದನ್ನು ಎದುರಿಸುವುದು ಅನಗತ್ಯ ಹಿಂಸೆಗೆ ಇಂಬುಕೊಟ್ಟಂತಾಗುತ್ತದೆ. ಬದಲಾಗಿ ಜೀವಪರ ಆಶಯಕ್ಕೆಆರೋಗ್ಯಕರ ಭವಿಷ್ಯ ಕಟ್ಟಿಕೊಡಲು ಕ್ರಾಂತಿಕಾರಕ ಪ್ರಜ್ಞೆಯಿಂದ ದಿಟ್ಟ ಹೆಜ್ಜೆ ಇಡಬೇಕಾಗುತ್ತದೆ. ನಿರ್ಣಾಯಕ ಹಂತದಲ್ಲಿ ಜೀವಪರ ನಿಲುವನ್ನು ತಾಳಬೇಕಾಗುತ್ತದೆ. ಸಾಮುದಾಯಿಕ ಜವಾಬ್ದಾರಿಯಿರುವುದು ಇಂಥ ಮನುಷ್ಯ ಸಹಜ ಪ್ರೇಮ ನಡೆಯಲ್ಲಿ. ಧರ್ಮಕರ್ಮಠದ ಪಾಲನೆಯಲ್ಲಲ್ಲ . ಇದು ಎಲ್ಲ ಧರ್ಮ, ಜಾತಿಗಳಿಗೂ ಅನ್ವಯಿಸುವಂಥದು.
* * *
ಬ್ಯಾಡರ ಹುಡಗ ಮತ್ತು ಲಿಂಗಾಯತರ ಹುಡುಗಿ ಪರಸ್ಪರ ಪ್ರೇಮಿಸಿದ ಮಾತ್ರಕ್ಕೆ ಒಂದು ಕ್ರಾಂತಿ ನಡೆದುಹೋಗಲ್ಲ. ಅದನ್ನು ಸಮುದಾಯಗಳು ಪರಸ್ಪರ ಗೌರವಾದರದಿಂದ ಕಂಡಾಗ ಮಾತ್ರ ನಿಜವಾದ ಅರ್ಥದಲ್ಲಿ ಕ್ರಾಂತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರೇಮಿಗಳ ಪ್ರೇಮ ಪ್ರಕರಣಕ್ಕೆ ಪ್ರತಿಯಾಗಿ ಲಿಂಗಾಯತ ಸಮುದಾಯದ ಕೆಲ ಕಿಡಿಗೇಡಿಗಳಿಂದ ಕಿತಾಪತಿಗಳೇನೋ ನಡೆಯುತ್ತವೆ. ಆದರದು ನೈತಿಕ ತಳಹದಿಯ ಮೇಲೆ ನಿಂತ ಸಾಮಾಜಿಕ ಸವಾಲೇನಲ್ಲ.
ಹುಡುಗಿಯ ತಾಯಿ ರಂಗವ್ವ ವಿಧವೆ. ಸಮುದಾಯದವರ ಕಾಮುಕ ನೋಟ, ಕೊಂಕು ಮಾತುಗಳಿಂದ ರೋಸಿ ಹೋದವಳು. ಅನ್ಯ ಜಾತಿಯ ಹುಡುಗನೊಟ್ಟಿಗೆ ಮಗಳ ಪ್ರೇಮ ಸಲ್ಲಾಪದ ಬಗ್ಗೆ ತಿಳಿದು ಗದರಿಸುವಳಾದರೂ ಹಟಕ್ಕೆ ಬಿದ್ದು ಅವರಿಬ್ಬರ ಬದುಕಲ್ಲಿ ಹುಳಿ ಹಿಂಡುವ ಮನಸ್ಥಿತಿಯವಳಲ್ಲ. ವೈಧವ್ಯದ ನಂತರದಲ್ಲೂ ಪ್ರೀತಿಗಾಗಿ ಹಂಬಲಿಸಿದವಳು ಕೂಡ. ಹೀಗಾಗಿ ಬದುಕಿನ ಜೀವಪ್ರೀತಿ ಮಗಳ ಬದುಕಿನಲ್ಲಾದರೂ ಹಸನಾಗಿ ಹಬ್ಬಿ ಬಾಳಲಿ ಎನ್ನುವ ನಿಲುವಿಗೆ ಬಂದು ನಿಂತವಳು. ಸಮುದಾಯದ ಪ್ರತಿರೋಧಗಳನ್ನು ದಕ್ಕಿಸಿಕೊಂಡು, ಕಿಡಿಗೇಡಿಗಳನ್ನು ಎದುರಿಸಿ ನಿಂತು ಮಗಳ ಪ್ರೇಮ ಬದುಕಿಗೆ ಹೊಸ ಸೂರಾಗುತ್ತಾಳಲ್ಲ! ಅದು ನಿಜವಾದ ಕ್ರಾಂತಿಕಾರಕ ಪ್ರಜ್ಞೆ. ಇಡೀ ಕೃತಿಯ ಆಶಯದಲ್ಲಿ ಕ್ರಾಂತಿ ಮಗಳ ಪ್ರೇಮವಲ್ಲ. ಅದನ್ನು ಒಪ್ಪಿಕೊಂಡು ಮಗಳ ಪ್ರೇಮ ಬದುಕಿಗಾಗಿ ತಾಯಿಯೊಬ್ಬಳು ಸಂಘರ್ಷ ಎದುರಿಸಿ ಗೆಲ್ಲುತ್ತಾಳಲ್ಲ ಅದು ನಿಜವಾದ ಕ್ರಾಂತಿ. ಆದರೆ ರಂಗ ಪ್ರಯೋಗ ಈ ಆಶಯವನ್ನು ಸಶಕ್ತವಾಗಿ ಬದುಕಲಿಲ್ಲ.
* * *
ಪ್ರಯೋಗ, ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮವನ್ನು ರೋಚಕವಾಗಿ ಕಂಡಿತಷ್ಟೇ. ಹೀಗಾಗಿ ಪ್ರೇಮ ಎನ್ನುವುದು ಬರಿಯ ಮನೋಕಾಮನೆಯ ಹಂಬಲವಾಗಷ್ಟೇ ಕಾಣಿಸಿಕೊಂಡಿತು. ಲಸ್ಟ್ ಮುದವೆನಿಸತೊಡಗಿತು. ಪ್ರೇಮ- ಕಾಮ ಅಂತಃ ಸಂಬಂದ ಮತ್ತು ಹಾದರದ ತೆಳು ಸ್ಥರವನ್ನು ಸೂಕ್ಷ್ಮವಾಗಿ ಗ್ರಹಿಸದ ನಡೆಯಿಂದಾಗಿ ಇಡೀ ಪ್ರಸಂಗ ವಲ್ಗರ್ ಅನ್ನಿಸತೊಡಗಿತು. 'ಎ' ಮಾರ್ಕಿನ ಮಲೆಯಾಳಿ ಟೆಂಟ್ ಸಿನಿಮಾದ ಚೀಪ್ ಎಂಟರಟೇನ್ಮೆಂಟ್ ಮನಸ್ಥಿತಿಗೆ ಜಾರಿದಂತೆನಿಸಿತು. ಇದಕ್ಕೆ ಪೂರಕವಾಗಿ ಬಹುತೇಕ ಸಂದರ್ಭದಲ್ಲಿ ಹೊಮ್ಮಿದ ಪ್ರೇಕ್ಷಕರ ಚಪ್ಪಾಳೆ, ಸಿಳ್ಳೆಗಳು ರಂಗಾಸಕ್ತರ ಎಂದಿನ ಜೀವೋತ್ಸಾಹಕ್ಕೆ ಹತ್ತಿರದವು ಎಂದೆನಿಸಲಿಲ್ಲ.
ಇಡೀ ಕೃತಿಯನ್ನು ರಂಗಕ್ಕೆ ಅಳವಡಿಸುವಲ್ಲಿ ಬಸವರಾಜ ಸೂಳೇರಿಪಾಳ್ಯ ಅವರ ಶ್ರದ್ಧೆ ಎದ್ದು ಕಾಣಿಸುವಂಥದು. ಸಂಭಾಷಣೆಗಳು ಮೊನಚಾಗಿವೆ. ಕೆಲವು ಹೃದಯಸ್ಪರ್ಶಿಯಾಗಿವೆ. ಆದರೆ ನಿರ್ದೇಶನದ (ಕೆ.ಎಸ್.ಡಿ.ಎಲ್ ಚಂದ್ರು) ಟ್ರೀಟಮೆಂಟ್ ಪ್ರಯೋಗಕ್ಕೆ ಪೂರಕವಾಗುವಲ್ಲಿ ಎಡವಿದೆ. ಹನುಮಕ್ಕನ ಪರಿಪಕ್ವ ಅಭಿನಯ ಪ್ರಯೋಗಕ್ಕೆ ಘನತೆ ಮತ್ತು ತೂಕ ಕಟ್ಟಿಕೊಟ್ಟಿದ್ದು ಬಿಟ್ಟರೆ, ಮಿಕ್ಕವರೆಲ್ಲರು ಸೆನ್ಸ್ ಆಫ್ ಹ್ಯೂಮರ್ ನಲ್ಲೇ ಮುಳುಗಿ ಹೋದಂತಿದ್ದರು. ಕೆಲವರ ಅಭಿನಯದಲ್ಲಿ ಉತ್ಸಾಹವೇನೋ ಕಾಣಿಸಿತಾದರೂ ಪಾತ್ರಗಳ ಮಹತ್ವವನ್ನು ಅದು ಬಯಸುವ ಆಳ ಮತ್ತು ಸೂಕ್ಷ್ಮತೆಯನ್ನು ನಟವರ್ಗ ಗ್ರಹಿಸಬೇಕಿತ್ತೆನಿಸಿತು. ವಿನ್ಯಾಸವೂ ಜಾಳು ಜಾಳು. ನಾಟಕವನ್ನು ಬ್ಯಾಡರ ಹುಡುಗ-ಲಿಂಗಾಯತರ ಹುಡುಗಿ ಪ್ರೇಮ ಪ್ರಕರಣದ ಮೇಲಿನ ಕಾನಸಂಟ್ರೇಷನ್ ಮೂಲಕ ಕಟ್ಟಿಕೊಳ್ಳುವ ಬದಲಿಗೆ ರಂಗವ್ವನ ಮೂಲಕ ಕಟ್ಟಿಕೊಂಡಿದ್ದರೆ ಪ್ರಯೋಗಕ್ಕೆ ತುಂಬ ಅರ್ಥಪೂರ್ಣ ಆಯಾಮ ದಕ್ಕಬಹುದಿತ್ತು. ನಿರ್ದೇಶಕನ ಲಿಬರ್ಟಿ ಪ್ರಶ್ನಿಸುವ ಶ್ರೂಡನೆಸ್ ಇದು ಅನಿಸಲೂಬಹುದು. ಹಾಗೆನಿಸಿದರೆ ಅದಕ್ಕೊಂದು ಕ್ಷಮೆ ಇರಲಿ. ಆದರೆ ಭರವಸೆಯ ನಿರ್ದೇಶಕ ಚಂದ್ರು ಈ ನಿಟ್ಟಿನಲ್ಲಿ ಕೊಂಚ ಗಮನಹರಿಸಬಹುದಾಗಿತ್ತು ಎನ್ನುವುದು ಕಾಳಜಿ.
ಕಾಮೆಂಟ್ಗಳು