ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಡ್ರಾಮಾಕ್ರಸಿ-3: ಕನ್ನಡದ ಸಂಬಂಜ ಅನ್ನೋದು ದೊಡ್ಡದು ಕನಾ...

ಎಡ್ಡ: ಮನ್ನಿ ‘ಮೊದಲು ಅರಿ ಆಮೇಲೆ ಇರಿ’ ಅಂತೆಲ್ಲಾ ಚಂಪಾ ಡೈಲಾಗ್ ಹೊಡದಿ. ಅಂಥ ಬಂಡಾಯದ ಬರಹಗಾರರು ಚಿಂತಕರು ಇಂಥಾ ಸಂದಿಗ್ಧ ಪರಿಸ್ಥಿತಿಯೊಳಗೂ ಮಂಕಾಗಿ ಕೂತಾರಲೇ ಏನ್‌ ಮಾಡೂನ ಇದಕ್ಕ. ಗಿಡ್ಡ: ನಾನೂ ಅದನ್ನ ಹೇಳೂದು. ಅರ್ಧ ಸತ್ಯದ ಹುಡುಗಿ ಗುಂಗಿನಾಗ ಅದಾರ್ರಿ ಅವ್ರಿನ್ನೂ. ಅಕಿ ಸತ್ ಸ್ವರ್ಗಾ ಸೇರಿಳೋ, ನರಕದಾಗ ಅದಾಳೋ ಗೊತ್ತಿಲ್ಲ. ಸತ್ತದ್ದಂತೂ ಖರೇ. ರಾಜಬಬ್ಬರ್ ಅಕಿನ್ ಮರತು ಜಮಾನಾನ ಆತು. ಎಡ್ಡ: ಸೈದ್ಧಾಂತಿಕ ಜಗಳದೊಳಗ ಹೆಚ್ಚು ಕಾಲ ಕಳದ ಚಂಪಾ ಸಾಹಿತ್ಯ ರಚನಾದಿಂದ ದೂರ ಸರದ ಭಾಳ ವರ್ಷನ ಆತು. ಅವ್ರ ಹೋರಾಟ, ಬಂಡಾಯದ ಮೊನಚು ಯಾಕೋ ಕಮ್ಮಿ ಆತು. ಅದ್ಭುತ ಅಸಂಗತ ನಾಟಕಗಳನ್ನ ಕೊಟ್ಟ ಮನಶ್ಯಾ ಸಾಹಿತ್ಯದೊಳಗ ಇನ್ನೂ ಎಂಥಾ ಅದ್ಭುತ ಸೃಷ್ಟಿ ಮಾಡಬಹುದಾಗಿತ್ತು. ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಸಾಪ, ಸ್ವಾಭಿಮಾನಿ ಕರ್ನಾಟಕ ಅಂತೆಲ್ಲ ಅವ್ರೂ ರಗಡ ಖಟಪಟಿ ಮಾಡಿದ್ರು ಖರೆ. ಏನಾತು? ಪಾಟೀಲ ಪುಟ್ಟಪ್ಪ ಅಂದ್ರ ನಮ್ ‘ಪಾಪು’ ಕಿತ್ತೂರ ಚೆನ್ನಮ್ಮ ಸರ್ಕಲ್‌ನಿಂದ ಹೆಂಗ್ ಆಚೆ ಬರಲೇ ಇಲ್ಲಲಾ, ಹಾಂಗ ಇವ್ರು ಕನ್ನಡ ಕನ್ನಡ ಬರ್ರಿ ನಮ್ಮ ಸಂಗಡ ಅನ್ನೂದ ಬಿಟ್ಟ ಬ್ಯಾರೆ ಏನೂ ಖಡಕ್ ಆಗಿ ಮಾಡಲೇ ಇಲ್ಲ. ಗಿಡ್ಡ: ಅರ್ಧಾ ಜೀವನಾ ‘ಒಕ್ಕಣ್ಣಿನ ರಾಕ್ಷಸ’ ಅಂತ ಲಂಕೇಶ್‌ ಮ್ಯಾಲ ಲೇವಡಿ ಮಾಡೂದರಾಗ ಕಳೀತು. ಇನ್ನರ್ಧಾ ಜೀವನಾ ಕನ್ನಡ ಹೋರಾಟ. ಈ ಹೋರಾಟಕ್ಕರೇ ಸೀರಿಯಸ್ ಆಗಿ ಸರಿಯಾದ ದಿಕ್ಕು ದೆಸಿ ತೋರಿಸ್ಬಹುದಾಗಿತ್ತು. ಅದೂ ಮಾಡ್ಲಿಲ್ಲ. ಪ್ರಾಧಿಕಾರದೊ

ಡ್ರಾಮಾಕ್ರಸಿ-2

ಎಡ್ಡ: ನೋಡ್ತಾ ಇರೀ ನಾ ಏನೇನ್.... ಅಂತೆಲ್ಲ ಕೊಚ್ಕೋತಾ ಇದ್ದಿ. ಈಗ ಹೇಳ್. ಗಿಡ್ಡ: ಹೇಳೂದೇನೂ ಇಲ್ರಿ ಬರೀ ಕೇಳೂದು. ಎಡ್ಡ: ಎಲ್ಲಾ ನಮ್ಮ ದೊಡ್ಡ ಸಾಹೇಬ್ರ ಹೇಳ್ತಿರೋವಾಗ ನಾವೇನ್‌ ಹೇಳೂದೈತಿ ಅಂತೀ ಹೌದಿಲ್ಲೋ. ಗಿಡ್ಡ: ಅವರು ಎಲ್ಲಾ ತಿಳಕೊಂಡಾರಿ. ಪರ್‌ದಾನಿ (ಪ್ರಧಾನಿ) ಅಷ್ಟ ಅಲ್ರಿ ಅವ್ರು ಜ್ಞಾನಿ. ಎಡ್ಡ: ಹೌದೌದು... ಹಿಮಾಲಯ ಕಂಡ ಬಂದಾವ್ರ ಬ್ಯಾರೆ. ಅವ್ರು ಪ್ರವಚನ ಹೇಳ್ತಾರು ನೀವು ಕೇಳ್ಕೊತ ಹೊಂಟ್ರಿ. ಕಾಯಕಾ ಯಾರ್ ಮಾಡಬೇಕು? ಗಿಡ್ಡ: ಅದನ್ನರೀ ನಾ ಹೇಳೂದು ಪರ್ ಪರ್ ಅಂತ. ಎಡ್ಡ: ಪರ್ ಪರ್ ಅಂದ್ರ ಏನಲೇ ಅದ. ಗಿಡ್ಡ: ಪರ್‌ವಚನ ಪರ್‌ದಾನಿ. ಎಡ್ಡ: ಹೌದ್ ಅನ್ನಿ ನೋಡ್ ಮಗನಾ. ಗಿಡ್ಡ: ಹೋಗ್ಲಿ ಬಿಡ್ರಿ. ಅಲ್ರೀ ಚೀನಾದವರು ಮುಂದ ಬಂದಿದ್ದು ಕಾಯಕಾ ನಂಬಕೊಂಡಿದ್ದರ ಫಲಾ ಅಂತ ಮನ್ನೇರ ಹೇಳಿದ್ರಿ. ನಾವೇನ್ ಕಮ್ಮಿ ಕಾಣ್ತೀವೆನ್ ನಿಮಗ... ಎಡ್ಡ: ನಾವೂ ಏನ್ ಕಮ್ಮಿ ಇಲ್ಲ. ಅವರಿಗಿಂತ ಒಂದ್ ಕೈ ಮುಂದ ಅದೀವಿ. ಇಂದಿರಾಗಾಂಧಿ ಎರಡು ಬೇಕು ಮೂರು ಸಾಕು ಅಂತ ಜರ ಕಡತಾ ಹೇಳಿರಲಿಲ್ಲ ಅಂದ್ರ ನೋಡ್ತಿದ್ದಿ, ಚೀನಾ ಮೀರಸತಿದ್ವಿ. ಪುತು ಪುತು ಅಂತ ಜಗತ್ ತುಂಬ ನಾವ ಕಾಣಿಸ್ತಿದ್ವಿ ಹುಳದಗತ್ಲೆ. ಗಿಡ್ಡ: ಅದನ್ನರೀ ನಾ ಹೇಳೂದು. ಅಲ್ರೀ, ಸವ್ವಾ ಸೌ ಕರೋಡ್ ಅದೀವಲ್ರಿ. ಕಮ್ಮಿ ಆತೇನ್ ನಿಮಗ. ಅದ್ರಾಗ ನಮ್ಮ ಮುಸಲ್ಮಾನ್ರ ಏರಿಯಾದೊಳಗ ಹ್ವಾದ್ರ ಮುಗೀತ್. ಮಂದೀನ ಮಂದಿ.ಮುಸಲ್ಮಾನರು ಹಿಂಗ ಬೆಳಕೋತ ಹೋದ್ರು ಅತಂದ್ರ, ಸ್ವಲ್ಪ ಸಮಯದೊಳಗ ಇಡೀ ದೇಶನ ಅ

ಡ್ರಾಮಾಕ್ರಸಿ-1

 (ಮೊದಲನೇ ಅಂಕ- ರಸ್ತಾ ಸೀನ್) ಗಿಡ್ಡ: ಪರ್ ಪರ್... ಎಡ್ಡ: ಏನಲೇ ಅದ ಮುಂಜ ಮುಂಜಾಲೆ ಹೊರಕಾಡಿಗರೇ ಹೋಗಿದ್ಯೋ ಇಲ್ಲೋ. ಗಿಡ್ಡ: ಪರ್ ಪರ್... ಎಡ್ಡ: ಥೂ ಇವನೌನ್, ಹೊಲಸ ವಾಸನಿ ಬರತೈತಲೇ. ಹೊಂಡ ಲಗೂನ.. ಹ್ಞೂಂ ಹೊಂಡ ಇನ್ನ. ಗಿಡ್ಡ: ಅದನ್ನರೀ ನಾ ಹೇಳಾಕ ಹೊಂಟಿದ್ದು. ಸಾಹೇಬ್ರ ಮನ್ಯಾಗ ಟಿವಿ ಹಾಕಿದ್ರ ಸಾಕ್ ಪರ್ ಪರ್. ಎಡ್ಡ: ಗಿಡ್ಡಾ ಏನರೇ ಹೇಳಬೇಕಂತೀ, ಟಿವಿ ಅಂತೀ. ಪರ್ ಪರ್ ಅಂತೀ... ಒಂದೂ ತಿಳಿವಲ್ದು. ಸರಿ ಬೊಗಳ. ಗಿಡ್ಡ: ಸಾಹೇಬ್ರ ನಮ್ಮ ಉತ್ತರ ಕರ್ನಾಟಕದಾಗ ಅದರಾಗೂ ಲಿಂಗಾತರೊಳಗ ಇದೇನು ಹೊಸಾದೇನ್ರಿ? ನಾವು ದಿನಾ ಮುಂಜಾಲೆ ಎದ್ದು ನಮ್ಮ ನಮ್ಮ ಮನೀ ಮುಂದಿನ ಅಂಗಳ ಪರಾ ಪರಾಂತ ಗುಡಸಂಗಿಲೇನ್ರಿ. ಎಡ್ಡ: ಗುಡುಸೂದು ಅಷ್ಟ ಅಲ್ಲ, ಬಕೀಟ್ ನೀರಾ ಒಂದು ಚಂಬೂ.... ಚಂಬೂ ನೀರಾಗ ಎದ್ದೋದು ಫಸಲ್ ಫಸಲ್ ಅಂತ ದೂರ ದೂರಕ್ಕ ನೀರ ಹೊಡಿಯೋದು. ಮುಂಜೇಲೊಮ್ಮೆ ಸಂಜೀಕೊಮ್ಮೆ ಇದನ್ನ ಮಾಡಿಕೋತ ಬಂದೀವು. ಗಿಡ್ಡ: ಅದನ್ನರೀ ನಾನು ಹೇಳೋದು. ಎಡ್ಡ: ಅದ್ಸರಿ ಕಸ ಗುಡಸೂದು, ನೀರ ಚುಮುಕಿಸೋದು, ಪರ್ ಪರ್... ಏನೇನೋ ಮಾತಾಡಾಕಹತ್ತಿ. ನಿಮ್ಮನ್ನ ನಂಬಕೊಂಡ ನಾಂವ ಉದ್ಧಾರ ಆಗಿಲ್ಲ. ಇನ್ನ ದೇಶಾ ಏನ್ ಉದ್ಧಾರ ಆದೀತು? ಲೇ ಗಿಡ್ಡಾ, ಮೋದಿ ಕಸಾ ಗುಡಸೋದು ನೋಡಾಕ ಆಗಲ್ದಕ್ಕ ಸುತ್ತೂ ಬಳಸಿ ಹಿಂಗ್ ಮಾತಾಡಕ್ಹತ್ತಿ ಹೌಂದಿಲ್ಲೋ. ಗಿಡ್ಡ:  ಅಲ್ರೀ ನಾನೂ ಅದನ್ನ ಹೇಳಾಕತ್ತೀನಿ. ಕಸಾ ಗುಡಸೂದೇನ್ ದೊಡ್ಡ ಸಾಧನಾ ಅಂತ ಹೇಳತೀರಿ. ಕಸ ಗುಡಸೋದು ನಮ್ಮ