ವಿಷಯಕ್ಕೆ ಹೋಗಿ

ಚರ್ಚ್ ದಾಳಿಯಂಥ ಬೂಟಾಟಿಕೆ ತಡೆಗೆ ಗಣರಾಜ್ಯೋತ್ಸವ ಆಚರಣೆ ಅಗತ್ಯ


ಮೈಸೂರಿನ ಹಿನಕಲ್ ಹೋಲಿ ಚರ್ಚ್ ಮತ್ತು ಮುರುಡೇಶ್ವರ ಸಮೀಪದ ಪೆರ್ನಮಕ್ಕಿ ಗ್ರಾಮದ ಚರ್ಚ್ ಮೇಲೆ ದಾಳಿ ನಡೆದಿದೆ. ದೇಶದ ಗಣರಾಜ್ಯೋತ್ಸವಕ್ಕೆ 60 ವರ್ಷಗಳೇ ಸಂದಿವೆ. ಗಣರಾಜ್ಯೋತ್ಸವವನ್ನು ಸ್ವಾತಂತ್ರ್ಯೋತ್ಸವಕ್ಕಿಂತ ಸಂಭ್ರಮದಿಂದ ಮತ್ತು ತುಂಬ ಹೆಮ್ಮೆಯಿಂದ ಆಚರಿಸಬೇಕಾದ ಅಗತ್ಯವಿದೆ. ಏಕೆಂದರೆ ಇದು ಹಕ್ಕುಗಳ ಬಗ್ಗೆ ಹೇಳುವ ಆಚರಣೆ. ಆಗಸ್ಟ್ 15  ಸಾಧನೆ. ಗಣರಾಜ್ಯೋತ್ಸವ ನಿತ್ಯದ ಬದುಕಿನ ಸಂಭ್ರಮಕ್ಕೆ ಭದ್ರ ಅಡಿಪಾಯ.

ಹಕ್ಕುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಧಾರ್ಮಿಕ ಹಕ್ಕು. ನಂಬಿಕೆಗಳ ಹಕ್ಕು, ಆಚರಣೆ, ಸಂಪ್ರದಾಯ ಪಾಲನೆ, ಪೂಜಿಸುವ, ಪ್ರಾರ್ಥಿಸುವ ಹಕ್ಕು. ಇದಕ್ಕೆ ಲಿಖಿತ ಸಂವಿಧಾನದ ಹಕ್ಕುಪತ್ರವಿದೆ. ಇದಕ್ಕಾಗಿ ಯಾರಪ್ಪನ ಅನುಮತಿಯೂ ಬೇಕಿಲ್ಲ. ಮತ್ತು ಇದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ. ಅಥವಾ ಬಲಪ್ರಯೋಗದ ಮೂಲಕ, ಪುಂಡಾಟಿಕೆ, ಬೂಟಾಟಿಕೆ ಮೂಲಕ ಹತ್ತಿಕ್ಕಲೂ ಸಾಧ್ಯವಿಲ್ಲ.

ಭಾರತದಂಥ ಬಹುಮುಖಿ ಸಂಸ್ಕೃತಿಯ ದೇಶಕ್ಕೆ ಇದೆಲ್ಲ ಬಹುದೊಡ್ಡ ಸವಾಲೇನಲ್ಲ. ಒಂದು ಪ್ರಭುತ್ವ ಮೂಲದಲ್ಲಿ ನೆಲದ ಆಶಯಗಳನ್ನು, ಪರಂಪರೆಯ ಮೌಲ್ಯಗಳನ್ನು ಅಡಿಪಾಯಾಗಿಟ್ಟುಕೊಂಡು ತನ್ನ ಕಾರ್ಯಚಟುವಟಿಕೆಗಳನ್ನು ರೂಪಿಸಿಕೊಳ್ಳಬೇಕಾಗುತ್ತದೆ. ಆದರೆ ನಮ್ಮ ರಾಜ್ಯದ ಕಥೆಯೇ ಬೇರೆಯಾಗಿದೆ. ದೇಶದ ಯಾವುದೋ ಒಂದು ರಾಜ್ಯದಲ್ಲಿ ಯಶಸ್ವಿಯಾದ ಕೇಸರಿ ಪ್ರಾಜೆಕ್ಟ್ ಅನ್ನು ಅದೇ ಸ್ವರೂಪದಲ್ಲಿ ಇಲ್ಲಿಯೂ ತುರುಕುವ ಯತ್ನ ಇಲ್ಲೀಗ ನಡೆಯುತ್ತಿದೆ. ಈಗೀಗ ಹೆಚ್ಚುತ್ತಿರುವ ಚರ್ಚ್ ಮೇಲಿನ ಹಲ್ಲೆಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ.


ಏಸು ಜನ್ಮದ ಸಂದರ್ಭದಿಂದ ಹಿಡಿದು ಈತನಕದ ಮಾನವ ಇತಿಹಾಸದಲ್ಲಿ ಇದೆಲ್ಲ ಹೊಸದೇನೂ ಅಲ್ಲ. ಸ್ವತಃ ಏಸು ಕೂಡ ಕಲ್ಲೇಟು ಎದುರಿಸಿದವನು. ನಾಗರಿಕತೆ ಬೆಳೆದು ಬಂದಂತೆ ಅದರ ಜತೆಗೆ ಬದುಕಿನ  ಹೊಸ ಮೌಲ್ಯಗಳೂ ಹುಟ್ಟಿಕೊಳ್ಳುತ್ತಲೇ ಬಂದವು. ಆಯಾ ನೆಲದ ಗುಣ, ಪರಿಸರ ಮತ್ತು ಆ ಕಾಲದ ಅಗತ್ಯಗಳಿಗನುಗುಣವಾಗಿ ನಾಗರಿಕತೆಗಳು ರೂಪುಗೊಂಡವು. ಜೀವನ ಶೈಲಿ, ಬದುಕಿನ ಮೌಲ್ಯಗಳ ಹೆಚ್ಚಿಸಲು ಧರ್ಮಗಳು, ಪಂಥಗಳು, ವಿವಿಧ ಸಂಸ್ಕೃತಿ ಹುಟ್ಟಿಕೊಂಡವು. ಆಯಾ ಜನರು ತಮ್ಮ ಬದುಕಿನ ಆಶಯಗಳು ಮತ್ತು ಕನಸುಗಳಿಗೆ ಸಂಬಂಧಿಸಿದಂತೆ ಅನುಕೂಲಕರವಾದ ಸಂಸ್ಕೃತಿಯೊಂದನ್ನು ಒಪ್ಪಿ, ಅನುಸರಿಸಿಕೊಂಡು ಬರುವ ಪ್ರಕ್ರಿಯೆ ಕೂಡ ಹೊಸದೇನೂ ಅಲ್ಲ. ನಂಬಿಕೆಗಳ ಆಧಾರದಲ್ಲೇ ನಡೆಯುವ ದೈವತ್ವದ ಕಲ್ಪನೆ ಮತ್ತು ಆದರ್ಶದ ಬದುಕು ವೈಯಕ್ತಿಕ ನಿರ್ಧಾರ ಅಷ್ಟೇ. ಅಂಥವರ ಸಂಖ್ಯೆ ಹೆಚ್ಚುತ್ತ ಸಾಗಿದಂತೆ ಅದರ ಪ್ರಭಾವವೂ ವಿಸ್ತಾರಗೊಳ್ಳುತ್ತ ಸಾಗುತ್ತದೆ. ನಂತರ ಅದೊಂದು ಸಾಂಘಿಕ ಮನೋಧರ್ಮವನ್ನೂ ರೂಪಿಸುತ್ತದೆ.

ಸಾಂಘಿಕ ಮನೋಧರ್ಮ ಒಂದು ಬೃಹತ್ ಶಕ್ತಿಗಣವಾದಾಗಲೇ ಸವಾಲುಗಳು ಹುಟ್ಟಿಕೊಳ್ಳುತ್ತವೆ. ನಂಬಿಕೆಗಳ ಪ್ರಭಾವ ವ್ಯಾಪಕವಾದಂತೆ, ಜೀವನಶೈಲಿಯಲ್ಲಿ ಸುಧಾರಣೆ ಕನಸು ಗರಿಗೆದರಿದಂತೆ ಮನುಷ್ಯನಲ್ಲಿ ಸ್ಥಿತ್ಯಂತರದ ಮನೋಭಾವನೆ ಮೂಡುವುದು ಸಹಜ. ಹೀಗೆ ಮತಾಂತರದ ಪ್ರಕ್ರಿಯೆ ಸಹಜವಾಗೇ ಶುರುವಾಗುತ್ತದೆ. ಕ್ರೈಸ್ತರ ವಿಷಯಕ್ಕೆ ಬಂದಾಗ ಏಸು ಅಥವಾ ಮೇರಿ ಮೇಲಿನ ಮಮತೆ, ನಂಬಿಕೆ ಹೀಗೆ ಗಟ್ಟಿಗೊಳ್ಳುತ್ತಲೇ ಬಂದಿದ್ದು ಗಮನಕ್ಕೆ ಬರುತ್ತದೆ. ಅದರಲ್ಲಿ ಕಂಡುಕೊಳ್ಳುವ ಒಬ್ಬರ ನೆಮ್ಮದಿ ಮತ್ತೊಬ್ಬರಿಗೂ ಪ್ರೇರಣೆಯಾಗಲು ಸಾಧ್ಯವಿದೆ. ಇದು ಮತಾಂತರಕ್ಕೆ ಉಳಿದವರನ್ನು ಸೆಳೆಯುವ ಸಾಧ್ಯತೆಯೂ ಸಹಜವಾಗೇ ಸೃಷ್ಟಿಯಾಗುತ್ತದೆ. ಇದೇಕೆ ಕ್ರೈಸ್ತರಲ್ಲದವರ ಹೊಟ್ಟೆ ಉರಿಸಬೇಕು?

ಶಿವಾಜಿನಗರದ ಸಂತ ಮೇರಿ ಜಾತ್ರೆ ಈಚೆಗೆ ಭರ್ಜರಿಯಾಗೇ ನಡೆಯಿತು. ಹಿಂದೆ ಈ ಜಾತ್ರೆಗೆ ಕೆಲವೇ ಲಕ್ಷ ಜನ ಸೇರುತ್ತಿದ್ದರು. ಈಗದು ಲಕ್ಷಾಂತರಕ್ಕೆ ಹಬ್ಬಿದೆ. ಇದು ಇಡೀ ಬೆಂಗಳೂರಿನಲ್ಲಿ ಕ್ರೈಸ್ತರ ಮೇಲೆ ಇತರರ ಕಣ್ಣು ಕೆಂಪಾಗಿಸಿದೆ. ಅದರಲ್ಲೂ ಸ್ಥಳೀಯ ಸರ್ಕಾರದ ರಾಜಕೀಯ ಪಕ್ಷ ಮತ್ತದರ ಸಂಘಟನೆಗಳ ನಿದ್ದೆಗೆಡಿಸಿದೆ.

ಒಂದೆಡೆ ಮುಸಲ್ಮಾನರು ಪವಿತ್ರ ರಂಜಾನ ಮಾಸಾಚರಣೆಯಲ್ಲಿ ಮತ್ತಿತರ ಆಚರಣೆಗಳಲ್ಲಿ ಧಾರ್ಮಿಕವಾಗೇ ಪಾಲ್ಗೊಳ್ಳುತ್ತಾರೆ.  ಮತ್ತೆ ಅವರು ಒಟ್ಟಾಗಿ ಸೇರಿ ಆಚರಿಸುವ ಹಬ್ಬಗಳೇ ಬೆರಳೆಣಿಕೆಯಷ್ಟು. ಸಾಂಘಿಕ ಶಕ್ತಿ, ತಮ್ಮದೇ ಧಾರ್ಮಿಕ ವಿಧಾನ, ಸ್ಪಷ್ಟ ನಾಗರಿಕತೆ ಮತ್ತು ಸಂಸ್ಕೃತಿಯಲ್ಲಿ ಅವರೆಲ್ಲ ನೆಮ್ಮದಿ ಕಂಡುಕೊಂಡಿದ್ದಾರೆ. ಅವರ ಈ ನಡಾವಳಿ, ಸಂಸ್ಕೃತಿ ಇತರರಿಗೂ ಆಕರ್ಷಣೀಯವಾಗುವ ಸಾಧ್ಯತೆ ಇದೆ. ಅವರಂತೆ ನಾವ್ಯಾಕಾಗಬಾರದು ಎನ್ನುವ ಸಣ್ಣ ಆಶಯ ಇತರರಲ್ಲಿ ಮೂಡುವುದು ಸಹಜ. ಹೀಗೆ ಕ್ರೈಸ್ತರು ಮತ್ತು ಮುಸಲ್ಮಾನರು ತಮ್ಮ ಜೀವನಶೈಲಿ, ವೈವಿಧ್ಯತೆಯಲ್ಲಿ, ಸಾಂಘಿಕ ಶಕ್ತಿಯಲ್ಲಿ ಇತರರಿಗಿಂತ ಭಿನ್ನರಾಗಿ ಕಾಣಿಸುತ್ತಾರೆ. ಈ ಭಿನ್ನತೆ ಆಕರ್ಷಣೀಯವಾಗುತ್ತಿರುವುದೇ ಬಹುದೊಡ್ಡ ಸಂಕಟದ ಸ್ಥಿತಿಯನ್ನು ಕೆಲವರಲ್ಲಿ ರೂಪಿಸಿದೆ. ಇದು ಚರ್ಚ್ ಮೇಲಿನ ದಾಳಿಯಂಥ ಯಡವಟ್ಟುಗಳಿಗೆ ಪ್ರೇರೇಪಿಸುತ್ತದೆ.

ಕರಾವಳಿಯ ಈ ಕೆಟ್ಟ ಸಂಪ್ರದಾಯ ಇಡೀ ನಾಡಿಗೆ ಹಬ್ಬುತ್ತಿರುವುದು ಬಹಳ ನಾಚಿಕೆಗೇಡಿನ ಬೆಳವಣಿಗೆ. ಇದನ್ನು ಮಟ್ಟಹಾಕಬೇಕು ಎನ್ನುವುದು ನಮ್ಮ ದೇಶದ ಸಂವಿಧಾನದ ಮೂಲ ಗುರಿಯೂ ಆಗಿದೆ. ಬಹುಸಂಸ್ಕೃತಿಯನ್ನು ಒಪ್ಪಿಕೊಂಡ ನಮ್ಮ ಸಂವಿಧಾನಕ್ಕೆ ಇಂಥ ಬೂಟಾಟಿಕೆಯನ್ನು ತಡೆಯುವ ಮತ್ತು ಶಿಕ್ಷಿಸುವ ತಾಕತ್ತಿದೆ. ಇಡೀ ರಾಜ್ಯವನ್ನು ರೋಗಗ್ರಸ್ಥವಾಗಿಸುವ ಇಂಥ ಬೆಳವಣಿಗೆಗಳು ಸರ್ಕಾರದ ಕೃಪಾಪೋಷಿತ ಕೃತ್ಯಗಳಾಗದಂತೆ ತಡೆಯಬೇಕಾದ ಕೆಲಸ ಮೊದಲು ಆಗಬೇಕು. ಇಲ್ಲಿ ಬಿಜೆಪಿ ಅಥವಾ ಇನ್ನಾವುದೋ ಪಕ್ಷಗಳ ಆಡಳಿತ ಬರಲಿ. ಅವೆಲ್ಲ ಭಾರತದ ಸಂವಿಧಾನದ ಅಡಿಯಲ್ಲೇ ಕೆಲಸ ಮಾಡಬೇಕು. ಅದು ಬಹುಮುಖಿ ಸಂಸ್ಕೃತಿಯನ್ನು ಪ್ರತಿಪಾದಿಸುವ ಲಿಖಿತ ಸಂವಿಧಾನ ಎನ್ನುವುದನ್ನು ಯಾರೂ ಮರೆಯಲೇಬಾರದು.

ಚರ್ಚ್ ಮೇಲಿನ ದಾಳಿಯಂಥ ಕೃತ್ಯಗಳನ್ನು ಸಿಬಿಐ ತನಿಖೆಗೆ ಆದೇಶಿಸಿ ಕೈತೊಳೆದುಕೊಳ್ಳುವ ಹಾಗೂ ಕಂಡಲ್ಲಿ ಗುಂಡಿಕ್ಕುವ ಆದೇಶಗಳ ಮೂಲಕ ಮಾತ್ರ ತಡೆಯಬಹುದೆನ್ನುವುದು ಕೇವಲ ಭ್ರಮೆ. ಬದುಕುವ ಹಕ್ಕಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಶಯಗಳನ್ನು ಗಟ್ಟಿಗೊಳಿಸುವ ಅಭಿವೃದ್ಧಿ ಯೋಜನೆಗಳ ಮೂಲಕ ಮಾಡಬೇಕಾದ ಕೆಲಸವಿದು. ಸರ್ಕಾರ ಅಭಿವೃದ್ಧಿಯ ಫಲವನ್ನು ಎಲ್ಲ ಸಮೂದಾಯಗಳಲ್ಲಿ ಸಮನಾಗಿ ಹಂಚುವ ಮೂಲಕವಷ್ಟೇ ಇದು ಸಾಧ್ಯ.

ಆದರೆ ಈ ನೆಲದ ಸಾಮರಸ್ಯದ, ಬಹುಮುಖಿ ಸಂಸ್ಕೃತಿಯ, ಜಾತ್ಯತೀತದ ಕಾನೂನು ಯಾಕೋ ಸಡಿಲಗೊಳ್ಳುತ್ತಿದೆ ಎನ್ನುವ ಅನುಮಾನ ಮೂಡುತ್ತಿದೆ. ಇಲ್ಲಿ ಕೆಲವರಿಗೆ ಬದುಕೇ ಹಿಂಸೆಯಾಗುವ ಅಪಾಯ ಕಾಣಿಸುತ್ತಿದೆ. ನಾಗರಿಕ ಸಮಾಜಕ್ಕೆ ಇಂಥ ದುರವಸ್ಥೆ ಎಂದೂ ಬರಬಾರದಲ್ಲವೇ?

ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ