ಅಡಿಗಡಿಗೆ ಭಾಷೆ-ಗಡಿ ಸಮಸ್ಯೆ ಭುಗಿಲೇಳಲೇಬೇಕು! ಮಹಾರಾಷ್ಟ್ರ ಗಡಿ ಸಮಸ್ಯೆಗಂತೂ ಚಾಲನೆ ದಕ್ಕುತ್ತಲೇ ಇರುತ್ತದೆ. ರಾಜಕೀಯದ ಜತೆ ಸಾಹಿತ್ಯಿಕ-ಸಾಂಸ್ಕೃತಿಕ ಲಾಭಕ್ಕೂ! ವಿಪರ್ಯಾಸವಲ್ಲವೇ?
ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು.
ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು)
ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅವರು ಲಾಡ್ಜ್ ಬಂದಾಗ ತಮಗೆ ಗೊತ್ತು ಮಾಡಿದ ಕೋಣೆಗೆ ತೆರಳಿದರಂತೆ. ಅಲ್ಲಿ ಮರಾಠಿ ಸಾಹಿತಿ ಆಗಲೇ ವಿರಾಜಮಾನರಾಗಿದ್ದರಂತೆ. ಜತೆಗುಳಿಯಲು ಅವಕಾಶ ನೀಡಲಿಲ್ಲವಂತೆ. ಹೀಗಾಗಿ ಈ ರೂಮಿಗೆ ಬಂದೆ ಎಂದರು.
ಆ ಪ್ರಸಂಗ ಅವರೇ ಹೇಳಿದ್ದು ಹೀಗಿತ್ತು..
( ಸಂಭಾಷಣೆ ಹೀಗೆ ನಡೆಯಿತಂತೆ)
ಮಸಾ (ಮರಾಠಿ ಸಾಹಿತಿ) : ಬನ್ನಿ ಬನ್ನಿ... ನನ್ನ ಭೇಟಿ ಮಾಡಲೆಂದು ಬಂದಿರಾ?
ಗಭಾಸಾ (ಗಡಿ ಭಾಗದ ಸಾಹಿತಿ) : ಹಾ ಹಾ.. ನಿಮ್ಮ ಜತೆ ನನಗೂ ಇಲ್ಲೇ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಮಸಾ: ನೋ ನೋ
ಗಭಾಸಾ: ಅರೇ, ಯಾಕೆ?
ಮಸಾ: ಇಲ್ಲ ಹಾಗಾಗಲ್ಲ. ನಾನಾಗಲೇ ರಿಸೆಪ್ಷನ್ ಕೌಂಟರಿಗೆ ಹೇಳಿದ್ದೇನೆ. ನಾನ್ಯಾರ ಜತೆಗೂ ರೂಂ ಶೇರ್ ಮಾಡಲ್ಲ ಅಂತ.
ಗಭಾಸಾ: ಮತ್ತೆ ನಾನೆಲ್ಲಿ ಹೋಗೋದು?
ಮಸಾ: ನೀವು ಬೇರೇನಾದರೂ ವ್ಯವಸ್ಥೆ ಮಾಡಿಕೊಳ್ಳಿ.
ಗಭಾಸಾ: ಅರೇ, ಸಂಜೆಯವರೆಗೆ ಅಷ್ಟೇ ತಾನೆ ನಾವಿಲ್ಲಿರೋದು?
ಮಸಾ: ನೋ ನೋ ಏನೇ ಆಗಲಿ ಸಾಧ್ಯವಿಲ್ಲ.
.... ಗಭಾಸಾ ಎಷ್ಟೇ ಹೇಳಿದರೂ ಮಸಾ ಒಪ್ಪಲೇ ಇಲ್ಲವಂತೆ.
ಭಾಷಾ ಸೌಹಾರ್ದತೆಗೆಂದು ಬಂದವರೇ ಒಂದು ಸಂಜೆಯವರೆಗೆ ಒಟ್ಟಾಗಿ ಇರೋಕಾಗಲ್ಲ. ಇನ್ನು ಸಾಮಾನ್ಯ ಜನತೆ........ ?
ಮತ್ತು ಸೌಹಾರ್ದತೆಯ ಘೋಷವೂ ಮೊಳಗಬೇಕಲ್ಲ! ರಾಜಧಾನಿಯಲ್ಲಿಂದು ಭಾಷಾ ಸೌಹಾರ್ದತಾ ಸಮಾವೇಶ ನಡೆಯಿತು. ಅದಕ್ಕೆಂದು ಬಿಜೆಪಿ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದೇಶದ ವಿವಿಧ ಭಾಷೆಯ ಹಾಗೂ ವಿಶೇಷವಾಗಿ ರಾಜ್ಯದ ಬಹುತೇಕ ಜಿಲ್ಲೆ ಮತ್ತು ಗಡಿ ಸಾಹಿತಿಮಣಿಗಳನ್ನು ರಾಜಧಾನಿಗೆ ಆಹ್ವಾನಿಸಿತ್ತು. ಆಹ್ವಾನಕ್ಕೆ ಓಗೊಟ್ಟು, ಸಾಹಿತಿಗಳು ತಮ್ಮ ಎಲ್ಲಾ ಬದುಕಿನ ಬಹುಮುಖ್ಯ ಕೆಲಸ ಕಾರ್ಯಗಳನ್ನೆಲ್ಲ ಬಿಟ್ಟು "ದೇಶ-ಭಾಷೆ-ನಾಡ ರಕ್ಷಣೆ" ಮತ್ತು "ಗಡಿ- ಸೌಹಾರ್ದತೆ" ಬಗ್ಗೆ ಒಟ್ಟೊಟ್ಟಿಗೆ ಕಾಳಜಿ ವ್ಯಕ್ತಪಡಿಸಲು, ಸಲಹೆಯನ್ನಿತ್ತಲು ರಾಜಧಾನಿಗೆ ಧಾವಿಸಿದ್ದರು.
ಹಾಗೆ ಸಮಾರಂಭ/ಸೌಹಾರ್ದತೆ ಸಮಾವೇಶಕ್ಕೆಂದೇ ಬಂದ ಗಡಿ ಭಾಗದ ಸಾಹಿತಿ ಮಿತ್ರರೊಬ್ಬರನ್ನು ನಾನು ಬೆಳ್ಳಂ ಬೆಳಿಗ್ಗೆ ಕಾಣಬೇಕಾಗಿ ಬಂದಿತ್ತು. ಇಳಿದುಕೊಳ್ಳಲು ಅವರಿಗೆಂದೇ ಗೊತ್ತು ಮಾಡಿದ್ದ ಲಾಡ್ಜ್ ನ ಒಂದು ರೂಮಿಗೆ ನಾವು ಒಟ್ಟಿಗೇ ಕಾಲಿಟ್ಟೆವು. ಅಲ್ಲಿ ಅದೇ ಭಾಗದ ಮತ್ತೋರ್ವ ಸಾಹಿತಿ ಆಗಲೇ ವಿರಾಜಮಾನರಾಗಿದ್ದರು. ಥೇಟು 'ಶಿವಾಜಿ ಮಹಾರಾಜ'ರ ಹಾಗೆ! (ಇಬ್ಬರೂ ಮರಾಠಿಯಿಂದ ಕನ್ನಡಕ್ಕೆ ಸಾಕಷ್ಟು ಸಾಹಿತ್ಯ ಕೊಟ್ಟವರು)
ಅವರೊಂದು ಪ್ರಸಂಗ ಹೇಳಿದರು. ಬೆಳಿಗ್ಗೆ ಅವರು ಲಾಡ್ಜ್ ಬಂದಾಗ ತಮಗೆ ಗೊತ್ತು ಮಾಡಿದ ಕೋಣೆಗೆ ತೆರಳಿದರಂತೆ. ಅಲ್ಲಿ ಮರಾಠಿ ಸಾಹಿತಿ ಆಗಲೇ ವಿರಾಜಮಾನರಾಗಿದ್ದರಂತೆ. ಜತೆಗುಳಿಯಲು ಅವಕಾಶ ನೀಡಲಿಲ್ಲವಂತೆ. ಹೀಗಾಗಿ ಈ ರೂಮಿಗೆ ಬಂದೆ ಎಂದರು.
ಆ ಪ್ರಸಂಗ ಅವರೇ ಹೇಳಿದ್ದು ಹೀಗಿತ್ತು..
( ಸಂಭಾಷಣೆ ಹೀಗೆ ನಡೆಯಿತಂತೆ)
ಮಸಾ (ಮರಾಠಿ ಸಾಹಿತಿ) : ಬನ್ನಿ ಬನ್ನಿ... ನನ್ನ ಭೇಟಿ ಮಾಡಲೆಂದು ಬಂದಿರಾ?
ಗಭಾಸಾ (ಗಡಿ ಭಾಗದ ಸಾಹಿತಿ) : ಹಾ ಹಾ.. ನಿಮ್ಮ ಜತೆ ನನಗೂ ಇಲ್ಲೇ ಇಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದಾರೆ.
ಮಸಾ: ನೋ ನೋ
ಗಭಾಸಾ: ಅರೇ, ಯಾಕೆ?
ಮಸಾ: ಇಲ್ಲ ಹಾಗಾಗಲ್ಲ. ನಾನಾಗಲೇ ರಿಸೆಪ್ಷನ್ ಕೌಂಟರಿಗೆ ಹೇಳಿದ್ದೇನೆ. ನಾನ್ಯಾರ ಜತೆಗೂ ರೂಂ ಶೇರ್ ಮಾಡಲ್ಲ ಅಂತ.
ಗಭಾಸಾ: ಮತ್ತೆ ನಾನೆಲ್ಲಿ ಹೋಗೋದು?
ಮಸಾ: ನೀವು ಬೇರೇನಾದರೂ ವ್ಯವಸ್ಥೆ ಮಾಡಿಕೊಳ್ಳಿ.
ಗಭಾಸಾ: ಅರೇ, ಸಂಜೆಯವರೆಗೆ ಅಷ್ಟೇ ತಾನೆ ನಾವಿಲ್ಲಿರೋದು?
ಮಸಾ: ನೋ ನೋ ಏನೇ ಆಗಲಿ ಸಾಧ್ಯವಿಲ್ಲ.
.... ಗಭಾಸಾ ಎಷ್ಟೇ ಹೇಳಿದರೂ ಮಸಾ ಒಪ್ಪಲೇ ಇಲ್ಲವಂತೆ.
ಭಾಷಾ ಸೌಹಾರ್ದತೆಗೆಂದು ಬಂದವರೇ ಒಂದು ಸಂಜೆಯವರೆಗೆ ಒಟ್ಟಾಗಿ ಇರೋಕಾಗಲ್ಲ. ಇನ್ನು ಸಾಮಾನ್ಯ ಜನತೆ........ ?
ಕಾಮೆಂಟ್ಗಳು