ಇಡೀ ಪ್ರಕೃತಿ ದೇವತೆ. ಗೋಮಾತೆಯಂತೆ, ನೆಲವೂ ದೇವತೆ. ಗೋಹತ್ಯೆ ನಿಷೇಧಿಸುವುದಾದರೆ, ಗಣಿಗಾರಿಕೆಯನ್ನೂ ನಿಷೇಧಿಸಲೇಬೇಕು.
ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು.
ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು.
ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು!
ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್ ಜಗದೀಶಚಂದ್ರ ಭೋಸ್ ಹೇಳಿದ್ದಾರೆ. . ಗಿಡ, ಮರಗಳೂ ಪವಿತ್ರ. ಅವುಗಳ ಫಲ ಕಿತ್ತುಕೊಳ್ಳಬಾರದು. ಅದು ಜೀವದ ಹೊಸ ಜೀವ ತೆಗೆದ ಹಾಗೆ. ಕುಡುಗೋಲಿನಿಂದ, ಯಂತ್ರದಿಂದ ಜೋಳ, ಗೋಧಿ, ರಾಗಿಯ ತೆನೆ ಕತ್ತು ಕತ್ತರಿಸಿ ನೆಲಕ್ಕುರುಳಿಸಿ ಅದರ ಮೇಲೆ ದೊಡ್ಡ ಕಲ್ಲಿನ ರೋಲರ್ ಉರುಳಿಸಿ ಅಥವಾ ಯಂತ್ರದ ಚಕ್ರಕ್ಕೆ ಸಿಕ್ಕಿಸಿ ಕಾಳು ತುರಿಯಬಾರದು. ಗೋವಿನ ಮಾಂಸ ತೆಗೆಯಲು ಚರ್ಮ ಸುಲಿಯುವ ಹಾಗೆ, ಗಾಳಿಗೆ ಕಾಳುಗಳ ಮೇಲ್ಹೊದಿಕೆ (ತ್ವಾಟೆ) ತೂರಬಾರದು. ಅದೂ ಹಿಂಸೆಯೇ. ರಾಶಿಯನ್ನೂ ನಿಷೇಧಿಸಬೇಕು!
ಈ ನೆಲ ಭಾರತಮಾತೆಯಾದರೆ ಅದರೊಡಲ ಬಗೆಯುವುದನ್ನು ಮೊದಲು ನಿಲ್ಲಿಸಲೇಬೇಕು. ಮೆಟ್ರೋ ರೈಲು, ಹೈ ಸ್ಪೀಡ್ ರೈಲು, ಬಹುಮಹಡಿ ಕಟ್ಟಡಕ್ಕೆ, 'ಬಳ್ಳಾರಿ' ಅದಿರಿಗೆ ನೆಲ ಅಗೆಯುವುದನ್ನಂತೂ ನಿಲ್ಲಿಸಿಬಿಡಬೇಕು. ಒಟ್ಟಾರೆ ನೆಲ ಅಗೆಯುವುದನ್ನೇ ನಿಷೇಧಿಸಬೇಕು!
ಮಣ್ಣು ಪವಿತ್ರ. ಅದರ ಮೇಲೆ ಹೇಸಿಗೆ ಮಾಡಬಾರದು. ನೀರು ಪವಿತ್ರ. ಅದರಿಂದ ತಿಕ ತೊಳೆಯಬಾರದು. ಕಲ್ಲೂ ಪೂಜನೀಯ. ಕಲ್ಲಿನಿಂದ ಹೇಲು (ಈ ಪದ ನಿಷೇಧಕ್ಕೊಳಪಟ್ಟಂತಿದೆ. ಬಳಸಿದ್ದಕ್ಕೆ ಕ್ಷಮೆ ಇರಲಿ) ಒರೆಯಿಸಿಕೊಳ್ಳಬಾರದು. ಹೀಗಾಗಿ ಹೇಲುವುದನ್ನೂ ನಿಷೇಧಿಸಬೇಕು!
ಎಷ್ಟೆಲ್ಲ ನಿಷೇಧಿಸಲಿಕ್ಕಿದೆ!
ಗೋವು ಪವಿತ್ರವಾದರೆ ಅದರ ಹಾಲೂ ಪವಿತ್ರ. ಗೋ'ಮಾತೆ' ಕೆಚ್ಚಿಲಿಗೆ ಕೈಹಾಕಿ ಹಿಸುಕಿ ಹಿಸುಕಿ ಹಾಲು ಕರೆಯುವುದು ಅದರ ಜತೆಗೆ ನಡೆಸುವ ಚೆಲ್ಲಾಟವೂ ಆಗುತ್ತದೆ. ಹಾಲಿನ ತಣ್ಣಗಿನ ಭಾವಕ್ಕೆ ಅಗ್ನಿ ಸ್ಪರ್ಶ ಮಾಡಿ ಕಾಯಿಸಿ, ಆರಿಸಿ, ಮಥಿಸಿ ಮೊಸರು, ಮಜ್ಜಿಗೆ, ಬೆಣ್ಣೆ ಮಾಡುವುದು ನಂತರ ಬೆಣ್ಣೆಯ ಅತ್ಯಂತ ಮೃದು ಭಾವಕ್ಕೆ ಮತ್ತೆ ಅಗ್ನಿ ಕಾವು ಕೊಟ್ಟು ತುಪ್ಪವಾಗಿಸಿ, ಕಡೆಗೆ ಅದನ್ನು ಹೋಮದ ಅಗ್ನಿಕುಂಡಕ್ಕೆ ಎಸೆದೆಸೆದು ಧಗ ಧಗಿಸುವಂತೆ ಸುಡುವುದೂ ಹಿಂಸೆ ಅಷ್ಟೇ ಅಲ್ಲ ಚಿತ್ರಹಿಂಸೆಯಾಗುತ್ತದೆ. ಹೀಗಾಗಿ ಮೊಸರು, ಮಜ್ಜಿಗೆ, ಬೆಣ್ಣೆ, ತುಪ್ಪ ಮಾಡುವುದರ ಮೇಲೂ ನಿಷೇಧ ಹೇರಬೇಕು.
ಗೋವು ಪವಿತ್ರ. ಅದರ ಉಚ್ಚೆಯೂ ಪವಿತ್ರವೇ. ಪವಿತ್ರವಾದ್ದನ್ನು ತಿಪ್ಪೆಗೆಸೆಯುವುದೇ? ಸೆಗಣಿಯೂ ಪವಿತ್ರವೇ. ಮನೆ ಮುಂದೆ ಚಂದಕ್ಕೆ ರಂಗೋಲಿಗೆಂದು ಸೆಗಣಿಯನ್ನು ನೀರಲ್ಲಿ ಮನಸೋ ಇಚ್ಛೆ ಕಿವುಚಿ ನೆಲಕ್ಕೆ ಸಾರಿಸುವುದು, ತಟ್ಟಿ ಬಿಸಿಲಿಗೆ ಒಣಗಿಸಿ ಕುಳ್ಳಾಗಿಸಿ ಒಲೆಗಿಟ್ಟು ಧಗ ಧಗಿಸುವಂತೆ ಮಾಡುವುದೂ ಹಿಂಸೆಯೇ. ಸೆಗಣಿ ಬಳಕೆ ಕೂಡ ನಿಷೇಧಿಸಬೇಕು.
ಹಂದಿ, ಕೋಳಿ, ಕುರಿ, ಮೇಕೆಗಳಂತೆ ಜೀವವಿರುವ ಎಲ್ಲವೂ ಪವಿತ್ರ ಜೀವಗಳೇ. ಅವುಗಳ ವಧೆಯನ್ನೂ ನಿಷೇಧಿಸಬೇಕು!
ಸಸ್ಯಕ್ಕೂ ಜೀವ ಇದೆ, ಅವೂ ಉಸಿರಾಡುತ್ತವೆ ಎಂದು ಭಾರತ ಮೂಲದ ವಿಜ್ಞಾನಿ ಸರ್ ಜಗದೀಶಚಂದ್ರ ಭೋಸ್ ಹೇಳಿದ್ದಾರೆ. . ಗಿಡ, ಮರಗಳೂ ಪವಿತ್ರ. ಅವುಗಳ ಫಲ ಕಿತ್ತುಕೊಳ್ಳಬಾರದು. ಅದು ಜೀವದ ಹೊಸ ಜೀವ ತೆಗೆದ ಹಾಗೆ. ಕುಡುಗೋಲಿನಿಂದ, ಯಂತ್ರದಿಂದ ಜೋಳ, ಗೋಧಿ, ರಾಗಿಯ ತೆನೆ ಕತ್ತು ಕತ್ತರಿಸಿ ನೆಲಕ್ಕುರುಳಿಸಿ ಅದರ ಮೇಲೆ ದೊಡ್ಡ ಕಲ್ಲಿನ ರೋಲರ್ ಉರುಳಿಸಿ ಅಥವಾ ಯಂತ್ರದ ಚಕ್ರಕ್ಕೆ ಸಿಕ್ಕಿಸಿ ಕಾಳು ತುರಿಯಬಾರದು. ಗೋವಿನ ಮಾಂಸ ತೆಗೆಯಲು ಚರ್ಮ ಸುಲಿಯುವ ಹಾಗೆ, ಗಾಳಿಗೆ ಕಾಳುಗಳ ಮೇಲ್ಹೊದಿಕೆ (ತ್ವಾಟೆ) ತೂರಬಾರದು. ಅದೂ ಹಿಂಸೆಯೇ. ರಾಶಿಯನ್ನೂ ನಿಷೇಧಿಸಬೇಕು!
ಈ ನೆಲ ಭಾರತಮಾತೆಯಾದರೆ ಅದರೊಡಲ ಬಗೆಯುವುದನ್ನು ಮೊದಲು ನಿಲ್ಲಿಸಲೇಬೇಕು. ಮೆಟ್ರೋ ರೈಲು, ಹೈ ಸ್ಪೀಡ್ ರೈಲು, ಬಹುಮಹಡಿ ಕಟ್ಟಡಕ್ಕೆ, 'ಬಳ್ಳಾರಿ' ಅದಿರಿಗೆ ನೆಲ ಅಗೆಯುವುದನ್ನಂತೂ ನಿಲ್ಲಿಸಿಬಿಡಬೇಕು. ಒಟ್ಟಾರೆ ನೆಲ ಅಗೆಯುವುದನ್ನೇ ನಿಷೇಧಿಸಬೇಕು!
ಮಣ್ಣು ಪವಿತ್ರ. ಅದರ ಮೇಲೆ ಹೇಸಿಗೆ ಮಾಡಬಾರದು. ನೀರು ಪವಿತ್ರ. ಅದರಿಂದ ತಿಕ ತೊಳೆಯಬಾರದು. ಕಲ್ಲೂ ಪೂಜನೀಯ. ಕಲ್ಲಿನಿಂದ ಹೇಲು (ಈ ಪದ ನಿಷೇಧಕ್ಕೊಳಪಟ್ಟಂತಿದೆ. ಬಳಸಿದ್ದಕ್ಕೆ ಕ್ಷಮೆ ಇರಲಿ) ಒರೆಯಿಸಿಕೊಳ್ಳಬಾರದು. ಹೀಗಾಗಿ ಹೇಲುವುದನ್ನೂ ನಿಷೇಧಿಸಬೇಕು!
ಎಷ್ಟೆಲ್ಲ ನಿಷೇಧಿಸಲಿಕ್ಕಿದೆ!
ಕಾಮೆಂಟ್ಗಳು