ಅಂಗೀ ತೆಗೆದು
ಅಂಗಾತಾಗಿ ಮಲಗಿದ್ದ
ಸಂಗಾತಿಯನ್ನು
ಕಂಡು
ಸಂಗೀತವಾದಳು ಅವಳು
ಕಾಮ್ರೇಡ್, ಕಾಮ್ರೇಡ್
ಅನ್ನುತ್ತ... ಕಾಮಾಗಿ
ರೇಡ್
ಮಾಡಿದಳು
ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ, ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ ಇದೀನಿ' ಅಂದ್ರು. ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ.
ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು.
-ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು.
ಸ್ವಾಮೀಜಿ ಇಲ್ಲೇ ಯಾಕೆ ತಪಸ್ಸು? ಎಂದು ಕುತೂಹಲದಿಂದ ಕೇಳಿದೆ.
ಸ್ವಾಮೀಜಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ, ರಸ್ತೆಯಲ್ಲಿ ಕಾರಿನ ಎದುರು ಬಸವಣ್ಣನೇ ಬಂದು ನಿಂತಂತೆನಿಸಿತಂತೆ. ಕೆಳಕ್ಕಿಳಿದರೆ ಸುಂದರ ಬೆಟ್ಟ! ಬೆಟ್ಟದ ಸುತ್ತ ಬಸವಣ್ಣ ನಡೆದಾಡುವುದು ಕಾಣಿಸಿತಂತೆ... ಹೀಗಾಗಿ ಬೆಟ್ಟದ ಮೇಲೆ ಪುಟ್ಟದಾಗಿ ಕಟ್ಟಿದ ಗುಡಿಯಲ್ಲಿ ಸ್ವಾಮಿಗಳು ತಪಸ್ಸು ಕೂತರಂತೆ. ಅವರು ತಪಸ್ಸಿನಲ್ಲಿ ಏನೇನು ಕಾಣ್ತಿದಾರೋ! ಅಂತೂ ಸ್ವಾಮೀಜಿ ಕಾಣಲು ಜನ ಸೇರುತ್ತಿದ್ದಾರಂತೆ... ಎಂದು ಗೌಡರು ನಕ್ಕರು.
ಸ್ವಾಮೀಜಿಗೆ ಬಸವಣ್ಣ ಕಂಡರೋ ಇಲ್ಲವೋ ಗೊತ್ತಿಲ್ಲ. ಆ ಬೆಟ್ಟ ಮಾತ್ರ ಪ್ರಶಸ್ತ ಜಾಗ!
ಸ್ವಾಮೀಜಿ ಬೆಳಗಾವಿಗೆ ಹತ್ತಿರದವರು. ಲೋಕಕಲ್ಯಾಣಕ್ಕೆ ಆಯ್ದುಕೊಂಡ ಜಾಗ, ತಪಸ್ಸಿನ ಮಾರ್ಗವೂ ಸೂಕ್ತವಾಗೇ ಇದೆ.
ಅಲ್ಲಾ ಗೌಡರೆ, ಬೆಟ್ಟಗಳು, ಗುಡ್ಡಗಳ ಮೇಲೆ ಎಷ್ಟೆಲ್ಲ ಜನಾ ಕಣ್ಣು ಹಾಕ್ತಾರೆ... ಕಲ್ಲು, ಅದಿರು, ಗ್ರಾನೈಟ್ ಅಂತೆಲ್ಲ ಎಂಥಿಂಥ ಮಹಾತ್ಮರು ಬೆಟ್ಟ, ಗುಡ್ಡ ನುಂಗ್ತಿದಾರೆ.. ಪಾಪ ಈ ಸ್ವಾಮೀಜಿ ಜಪ, ತಪದ ನೆಪದಲ್ಲಾದರೂ ಹಿಗೂ ಬೆಟ್ಟ ರಕ್ಷಣೆ ಮಾಡ್ತಾರೆ ಬಿಡಿ. ಬಳ್ಳಾರಿ, ಸೊಂಡೂರು, ಗದಗ ಕಪ್ಪತಗುಡ್ಡದಂಥ ನೂರಾರು ಬೆಟ್ಟ ಗುಡ್ಡಗಳತ್ತಲೂ ಸ್ವಾಮೀಜಿ ಕಣ್ಣು ಹಾಯಿಸಲಿ. ಅಲ್ಲೂ ಬಸವಣ್ಣ ಕಂಡಾನು... ಅಲ್ಲೂ ಜಪ, ತಪ ಮಾಡಲಿ... ಕನಿಷ್ಠ ಅಳಿದುಳಿದ ಕೆಲ ಬೆಟ್ಟಗಳಾದರೂ ಗಣಿಚೋರರಿಂದ ರಕ್ಷಣೆಯಾದರೂ ಪಡಕೋತಾವೆ ಎಂದೆ ನಾನು.
ಬಳ್ಳಾರಿ ಬೆಟ್ಟಗಳ ಮೇಲೆ ಸ್ವಾಮೀಜಿ ಕಣ್ಣು ಹಾಕಿದ್ರಂತ ಇಟ್ಕೊ, ಗಣಿಧಣಿಗಳು ಸುಮ್ಮನೇ ಬಿಡ್ತಾರಾ ಅಂದ್ರು ಗೌಡ್ರು.
ಅದೂ ನಿಜಾನೇ. ಆಗಲೇ ಅಗೆದು ಹಾಕಿದ ಜಾಗದಲ್ಲಿ ದೊಡ್ಡ ಕಂದರಗಳಿದಾವಲ್ಲ, ಅಲ್ಲಿ ಕಣ್ಣು ಹಾಕಿದವರನ್ನೆಲ್ಲಾ ಲಿಂಗೈಕ್ಯ ಮಾಡಿಸಿಬಿಡ್ತಾರಂತೀರೇನು? ಅಂದೆ.
ಗೌಡ್ರು ಮತ್ತೆ ನಕ್ಕರು. ಆದ್ರೂ ಬಂಡೆಗಳ ಮೇಲೆ ಸ್ವಾಮೀಜಿಗಳದು ಹೀಗೂ ಒಂದು ಬಂಡಾಯ ಚಿಗುರಲಿ ಇದೂ ಒಳ್ಳೆಯ ಐಡಿಯ ಅಲ್ವೇನ್ರಿ ಗೌಡರೆ ಅಂದೆ.
ಹೌದು ತಾಳು. ಇದಕ್ಕೇನಾರೂ ಒಂದು ಮಾಡೋಣ ಅಂದ್ರು ಗೌಡರು.
ನನಗೆ ಚಂಪಾ ಅವರ ಈ 'ಹಣಿ'ಯುವ ಕವಿತೆ ನೆನಪಾಯ್ತು.
'ನಾವು ಬಂಡೆಗಳ ಮೇಲೆ
ಚಿಗುರಬೇಕಾಗಿದೆ'
-ಎಂದು ಬಂಡಾಯ ಕವಿಯೊಬ್ಬ
ಚೀರಿಕೊಂಡ.
ನಮ್ಮ ಅಗ್ರಹಾರದ
ಅನಂತಮುಖೀ ಭಟ್ಟ
ಬೋಳು ತಲೆ ಮೇಲೆ ನಿಗುರಿ ನಿಂತ
ಚಂಡಿಕೆ ನೇವರಿಸುತ್ತ,
'ನಾವೂ ಹೀಗೇ ಚಿಗುರಿದ್ದು'
-ಎಂದುಕೊಂಡ
ಅಂಗಾತಾಗಿ ಮಲಗಿದ್ದ
ಸಂಗಾತಿಯನ್ನು
ಕಂಡು
ಸಂಗೀತವಾದಳು ಅವಳು
ಕಾಮ್ರೇಡ್, ಕಾಮ್ರೇಡ್
ಅನ್ನುತ್ತ... ಕಾಮಾಗಿ
ರೇಡ್
ಮಾಡಿದಳು
ಬಿಡುವಿನ ವೇಳೆ ಆಫೀಸಿನ ಲೈಬ್ರರಿಯಲ್ಲಿ ಒಂದು ಸಣ್ಣ ಸುತ್ತು ಹಾಕುತ್ತಿದ್ದೆ, ಇಂಗ್ಲೀಷ್ ಪ್ರೊಫೆಸರ್ ಚಂಪಾ ಚಿತ್ರ ಹೊಂದಿದ ಕನ್ನಡದ ಪುಟ್ಟ ಪುಸ್ತಕ ಕಣ್ಣಿಗೆ ಬಿತ್ತು. ಅದು ಅವರದೇ ಹನಿಗವನಗಳ ಪುಟ್ಟ ಸಂಕಲನ. ಓದುತ್ತಾ ಒಂದಷ್ಟು ನಕ್ಕೆ. ಕೆಲ ಹನಿಗವನಗಳ 'ಹಣಿ'ಯುವ ಪರಿ ಸೆಳೆyiತು. ಈ ಮೇಲಿನ ಕವಿತೆ ಓದಿದ ಮೇಲೆ. ಡಾ. ಸಿದ್ಧನಗೌಡ ಪಾಟೀಲರು (ಸಿಪಿಐ ರಾಜ್ಯ ಕಾರ್ಯದರ್ಶಿ) ನೆನಪಾದರು. ಫೋನ್ ಮಾಡಿದೆ. 'ಬಾಗಲಕೋಟ್ಯಾಗ ಇದೀನಿ' ಅಂದ್ರು. ಕವಿತೆ ಓದಿ ಹೇಳಿದೆ. ಅವರೂ ನಕ್ಕರು. ಪ್ರತಿಯಾಗಿ ಒಂದಷ್ಟು ಕುಟುಕಿದರು. ಅದನ್ನಿಲ್ಲಿ ಹೇಳುವುದು ಅನಗತ್ಯ.
ಅದು ಇದು ಮಾತನಾಡುತ್ತ ಬಂಡಾಯ ಸಂಘಟನೆಯ ಬಗ್ಗೆ ಪ್ರಸ್ತಾಪಿಸಿದರು. ಚಿತ್ರದುರ್ಗದ ಸಭೆ ಬಗ್ಗೆಯೂ ಹೇಳಿದರು. ಬೆಳಗಾವಿಗೆ ಕಾಮ್ರೆಡ್ ಒಬ್ಬರ ಅಂತಿಮ ದರ್ಶನ ಮಾಡಿಕೊಂಡು ಬರುವಾಗ ಧಾರವಾಡ-ಹಳಿಯಾಳ ರಸ್ತೆಯಲ್ಲಿ ಕಂಡ ಪ್ರಸಂಗವೊಂದನ್ನು ಹೀಗೆ ವಿವರಿಸಿದರು.
-ಅಲ್ಲಿ ಜನಸಾಗರವಿತ್ತು. ರಸ್ತೆಯ ಪಕ್ಕದಲ್ಲಿ ಕಟೌಟ್ ಗಳ ಭರಾಟೆಯೂ ಕಾಣಿಸಿತು. ನೆರೆದವರನ್ನು ವಿಚಾರಿಸಿದರೆ, ರಸ್ತೆಗೆ ಹತ್ತಿರದ ಬೆಟ್ಟವೊಂದರ ಮೇಲೆ ಸ್ವಾಮಿಗಳೊಬ್ಬರು ಲೋಕಕಲ್ಯಾಣಕ್ಕೆಂದು ತಿಂಗಳ ಕಾಲ ತಪಸ್ಸು ಕೈಗೊಂಡಿದ್ದಾರಂತೆ ಎಂದೆಲ್ಲ ಹೇಳಿದರು.
ಸ್ವಾಮೀಜಿ ಇಲ್ಲೇ ಯಾಕೆ ತಪಸ್ಸು? ಎಂದು ಕುತೂಹಲದಿಂದ ಕೇಳಿದೆ.
ಸ್ವಾಮೀಜಿ ಇದೇ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರಂತೆ, ರಸ್ತೆಯಲ್ಲಿ ಕಾರಿನ ಎದುರು ಬಸವಣ್ಣನೇ ಬಂದು ನಿಂತಂತೆನಿಸಿತಂತೆ. ಕೆಳಕ್ಕಿಳಿದರೆ ಸುಂದರ ಬೆಟ್ಟ! ಬೆಟ್ಟದ ಸುತ್ತ ಬಸವಣ್ಣ ನಡೆದಾಡುವುದು ಕಾಣಿಸಿತಂತೆ... ಹೀಗಾಗಿ ಬೆಟ್ಟದ ಮೇಲೆ ಪುಟ್ಟದಾಗಿ ಕಟ್ಟಿದ ಗುಡಿಯಲ್ಲಿ ಸ್ವಾಮಿಗಳು ತಪಸ್ಸು ಕೂತರಂತೆ. ಅವರು ತಪಸ್ಸಿನಲ್ಲಿ ಏನೇನು ಕಾಣ್ತಿದಾರೋ! ಅಂತೂ ಸ್ವಾಮೀಜಿ ಕಾಣಲು ಜನ ಸೇರುತ್ತಿದ್ದಾರಂತೆ... ಎಂದು ಗೌಡರು ನಕ್ಕರು.
ಸ್ವಾಮೀಜಿಗೆ ಬಸವಣ್ಣ ಕಂಡರೋ ಇಲ್ಲವೋ ಗೊತ್ತಿಲ್ಲ. ಆ ಬೆಟ್ಟ ಮಾತ್ರ ಪ್ರಶಸ್ತ ಜಾಗ!
ಸ್ವಾಮೀಜಿ ಬೆಳಗಾವಿಗೆ ಹತ್ತಿರದವರು. ಲೋಕಕಲ್ಯಾಣಕ್ಕೆ ಆಯ್ದುಕೊಂಡ ಜಾಗ, ತಪಸ್ಸಿನ ಮಾರ್ಗವೂ ಸೂಕ್ತವಾಗೇ ಇದೆ.
ಅಲ್ಲಾ ಗೌಡರೆ, ಬೆಟ್ಟಗಳು, ಗುಡ್ಡಗಳ ಮೇಲೆ ಎಷ್ಟೆಲ್ಲ ಜನಾ ಕಣ್ಣು ಹಾಕ್ತಾರೆ... ಕಲ್ಲು, ಅದಿರು, ಗ್ರಾನೈಟ್ ಅಂತೆಲ್ಲ ಎಂಥಿಂಥ ಮಹಾತ್ಮರು ಬೆಟ್ಟ, ಗುಡ್ಡ ನುಂಗ್ತಿದಾರೆ.. ಪಾಪ ಈ ಸ್ವಾಮೀಜಿ ಜಪ, ತಪದ ನೆಪದಲ್ಲಾದರೂ ಹಿಗೂ ಬೆಟ್ಟ ರಕ್ಷಣೆ ಮಾಡ್ತಾರೆ ಬಿಡಿ. ಬಳ್ಳಾರಿ, ಸೊಂಡೂರು, ಗದಗ ಕಪ್ಪತಗುಡ್ಡದಂಥ ನೂರಾರು ಬೆಟ್ಟ ಗುಡ್ಡಗಳತ್ತಲೂ ಸ್ವಾಮೀಜಿ ಕಣ್ಣು ಹಾಯಿಸಲಿ. ಅಲ್ಲೂ ಬಸವಣ್ಣ ಕಂಡಾನು... ಅಲ್ಲೂ ಜಪ, ತಪ ಮಾಡಲಿ... ಕನಿಷ್ಠ ಅಳಿದುಳಿದ ಕೆಲ ಬೆಟ್ಟಗಳಾದರೂ ಗಣಿಚೋರರಿಂದ ರಕ್ಷಣೆಯಾದರೂ ಪಡಕೋತಾವೆ ಎಂದೆ ನಾನು.
ಬಳ್ಳಾರಿ ಬೆಟ್ಟಗಳ ಮೇಲೆ ಸ್ವಾಮೀಜಿ ಕಣ್ಣು ಹಾಕಿದ್ರಂತ ಇಟ್ಕೊ, ಗಣಿಧಣಿಗಳು ಸುಮ್ಮನೇ ಬಿಡ್ತಾರಾ ಅಂದ್ರು ಗೌಡ್ರು.
ಅದೂ ನಿಜಾನೇ. ಆಗಲೇ ಅಗೆದು ಹಾಕಿದ ಜಾಗದಲ್ಲಿ ದೊಡ್ಡ ಕಂದರಗಳಿದಾವಲ್ಲ, ಅಲ್ಲಿ ಕಣ್ಣು ಹಾಕಿದವರನ್ನೆಲ್ಲಾ ಲಿಂಗೈಕ್ಯ ಮಾಡಿಸಿಬಿಡ್ತಾರಂತೀರೇನು? ಅಂದೆ.
ಗೌಡ್ರು ಮತ್ತೆ ನಕ್ಕರು. ಆದ್ರೂ ಬಂಡೆಗಳ ಮೇಲೆ ಸ್ವಾಮೀಜಿಗಳದು ಹೀಗೂ ಒಂದು ಬಂಡಾಯ ಚಿಗುರಲಿ ಇದೂ ಒಳ್ಳೆಯ ಐಡಿಯ ಅಲ್ವೇನ್ರಿ ಗೌಡರೆ ಅಂದೆ.
ಹೌದು ತಾಳು. ಇದಕ್ಕೇನಾರೂ ಒಂದು ಮಾಡೋಣ ಅಂದ್ರು ಗೌಡರು.
ನನಗೆ ಚಂಪಾ ಅವರ ಈ 'ಹಣಿ'ಯುವ ಕವಿತೆ ನೆನಪಾಯ್ತು.
'ನಾವು ಬಂಡೆಗಳ ಮೇಲೆ
ಚಿಗುರಬೇಕಾಗಿದೆ'
-ಎಂದು ಬಂಡಾಯ ಕವಿಯೊಬ್ಬ
ಚೀರಿಕೊಂಡ.
ನಮ್ಮ ಅಗ್ರಹಾರದ
ಅನಂತಮುಖೀ ಭಟ್ಟ
ಬೋಳು ತಲೆ ಮೇಲೆ ನಿಗುರಿ ನಿಂತ
ಚಂಡಿಕೆ ನೇವರಿಸುತ್ತ,
'ನಾವೂ ಹೀಗೇ ಚಿಗುರಿದ್ದು'
-ಎಂದುಕೊಂಡ
ಕಾಮೆಂಟ್ಗಳು