ವಿಷಯಕ್ಕೆ ಹೋಗಿ

ಮೊದಲ ವಿದೇಶ ಪಯಣ ಆರಂಭದ ಕ್ಷಣಗಳು...

ನಾರ್ವೆ ದೇಶಕ್ಕೆ ಹೊರಡುವ ನನ್ನ ತಯಾರಿ ಏನ್ ಕೇಳ್ತಿರಾ... ಚಂದ್ರಲೋಕಕ್ಕೆ ರಾಕೇಶ್ ಶರ್ಮಾ ಹೊರಡುವಾಗಲೂ ಇಷ್ಟು ಚಡಪಡಿಕೆ, ಹಿಂಜರಿಕೆ ಅನುಭವಿಸಿರಲಿಕ್ಕಿಲ್ಲ! ಜತೆಯಲ್ಲಿ ಅಮ್ಮ ಮತ್ತು ನನ್ನ ತಂಗಿಯ ಅತ್ತೆ ಕೂಡ ಹೊರಡಲಿದ್ದರು. ಚಳಿಗಾಲದಲ್ಲಿ ಯುರೋಪ ಹೊರಟುನಿಂತ ನಮ್ಮ ಸಾಹಸಕ್ಕೆ ಗೆಳೆಯರೂ ಬೆಚ್ಚಿದ್ದರು. ಪಾಸಪೋರ್ಟ್ ತೆಗೆಯಿಸಿಕೊಳ್ಳುವುದಕ್ಕೂ ಹಿಂಜರಿದಿದ್ದ ನಾನು ವಿಸಾ, ಟಿಕೆಟ್ ಅಂತೆಲ್ಲಾ ಹೆಣಗಾಡುವುದನ್ನು ನೆನೆದರೆ ನನಗೇ ನಗು ಬರುತ್ತಿತ್ತು. ವಿಮಾನ ಹತ್ತುವ ಮುಂಚಿನ ಕೆಲ ಕ್ಷಣಗಳಿವು...


ಎಷ್ಟೋ ವರ್ಷಗಳ ನಂತರ ನನ್ನ ಕೇಶರಾಶಿ ಅಂತೂ ಒಂದು ಸಲೂನಿನ ಕತ್ತರಿ ರುಚಿ ಕಂಡಿತು...
ನವದೆಹಲಿಯಲ್ಲಿನ ನಾರ್ವೆ ಕಾನ್ಸುಲೇಟ್ ಆಫೀಸಿನಲ್ಲಿ ವೀಸಾ ಸ್ಟ್ಯಾಂಪ್ ಮಾಡಿಸಿಕೊಂಡು ಪಾಸಪೋರ್ಟ್ ಪಡೆದುಕೊಂಡ ಕ್ಷಣ... ಅಯ್ಯೋ ಅದೊಂದು ಅತ್ಯಂತ ಕಠಿಣ ಸಮಯ!
ಯುರೋಪ ಚಳಿಗೆ ಇಲ್ಲಿಂದಲೇ ತಯಾರಿ! ಕನ್ನಡಿ ಮುಂದೆ ನನ್ನ ಮೇಲೆ ನಾನೇ ಜೋಕು ಮಾಡಿಕೊಂಡು ನಕ್ಕಿದ್ದೇ ನಕ್ಕಿದ್ದು.

ವೈಯಕ್ತಿಕವಾಗಿ ನಾನೆಂದೂ ವಿದೇಶದ ಸೊಲ್ಲೆತ್ತಿದವನಲ್ಲ. ಈ ಹಿಂದೆ ಒಂದು ಸಾರಿ ಪ್ಯಾರಿಸ್ ಮತ್ತು ದುಬೈ ಹೋಗುವ ಬಗ್ಗೆ ಆಫೀಸಿನ ಮೇಲಧಿಕಾರಿಯಾಗಿದ್ದ ಆರ್ ಪಿ ಜಗದೀಶ್ ಆಹ್ವಾನ ನೀಡಿದಾಗ ಪಾಸಪೋರ್ಟ್ ಇಲ್ಲ ಎನ್ನುವ ನೆವ ಹೇಳಿ ಬಚಾವಾಗಿದ್ದೆ. ಹಾಗೂ ಬೈಸಿಕೊಂಡಿದ್ದೆ. ಈಗ ನಾನು ವಿದೇಶಕ್ಕೆ ತೆರಳಲೇಬೇಕಾದ ಪ್ರಸಂಗ ಬಂದೇಬಿಟ್ಟಿತು. ಜತೆಯಲ್ಲಿ ಹೋಗೋಣ ಎಂದು ಗೆಳೆಯರು ಕೂಡ ಮನಸು ಮಾಡಿದ್ದರು. ಕಡೆ ಘಳಿಗೆಯಲ್ಲಿ ಕೈಕೊಟ್ಟರು. ಅಂತೂ ಅಮ್ಮ, ತಂಗಿಯ ಅತ್ತೆ ಇಬ್ಬರನ್ನು ಕಟ್ಟಿಕೊಂಡು ವಿದೇಶಕ್ಕೆ ಹೊರಡಲು ಸಿದ್ಧನಾದೆ. ಅದರ ಕೆಲ ಆರಂಭದ ಉತ್ಸಾಹ ಹೀಗಿತ್ತು....

 ನಾರ್ವೆ ಹೊರಡಲು ಆರ್ಥಿಕ ವ್ಯವಸ್ಥೆ ಮಾಡಿಕೊಳ್ಳಬೇಕಲ್ಲ! ನೆರವಾದ ಗೆಳೆಯ, ಸಹೋದ್ಯೋಗಿ ಬಿ ಎನ್ ಶ್ರೀಧರ್ ನನ್ನ ಪುಟ್ಟ ಮನೆಯವರೆಗೂ ಕುಟುಂಬ ಸಮೇತ ಬಂದು ಹಾರೈಸಿ ಹೋದ. ಥ್ಯಾಂಕ್ಸ್ ಶ್ರೀಧರ್... ಮತ್ತೊಬ್ಬ ಗೆಳೆಯ ವಸೀಂ ಖಾನ್ ನನಗೆ ಚೆನ್ನೈನಲ್ಲಿ ತುಂಬ ಸಹಾಯ ಮಾಡಿದ್ದ. ಅವನಿಗೈ ಥ್ಯಾಂಕ್ಸ್...
 ಜತೆಯಲ್ಲಿ ಹೋಗೋಣ ಎಂದು ಪುಸಲಾಯಿಸಿ ನನ್ನ ಕುದುರೆ ಹತ್ತಿಸಿದವರು... ಶ್ರೀಕಾಂತ, ತಿಪ್ಪಣ್ಣ ಸರ್, ಗಂಗಾಧರಯ್ಯ... ಮನೆವರೆಗೂ ಬಂದು ಹಾರೈಸಿದರು. 25ಕ್ಕೆ ಹೊರಡುವ ನಿರ್ಧಾರವಾಗಿತ್ತು. ಕಡೆ ಕ್ಷಣ ನನ್ನ ಪ್ರೋಗ್ರಾಂ ಚೇಂಜ್ ಆಗಿತ್ತು. ಆದರೂ ಇವರೆಲ್ಲ 24ರ ರಾತ್ರಿ ವಿಶ್ ಮಾಡಲೆಂದು ಮನೆಗೆ ಬಂದೇಬಿಟ್ಟರು. ನಾವೆಲ್ಲ ನಾಲ್ವರು ಶ್ರೀ ಕಾರಿನಲ್ಲಿ ಏರಪೋರ್ಟ್ ಹೋಗಿ ಬಂದೆವು. ಅದೊಂಥರ ರಿಹರ್ಸಲ್ ಅನ್ನಿ. ಏರಪೋರ್ಟಿನಿಂದ ವಾಪಸ್ ಬಂದಾಗ ಸರಿ ರಾತ್ರಿ ಆಗಿತ್ತು. ಅವರೆಲ್ಲ ರಾತ್ರಿ ತಿಪಟೂರಿಗೆ ಪ್ರಯಾಣಿಸಿದರು. ನಾನು ಅಂತೂ 27ರ ರಾತ್ರಿ ನಾರ್ವೆ ಹೊರಟು ನಿಂತೆ.
ನಮ್ಮ ಕುಟುಂಬದ ಎಲ್ಲ ಸದಸ್ಯರು ಏರಪೋರ್ಟ್ ವರೆಗೂ ಬೀಳ್ಕೊಡಲು ಬಂದ ಕ್ಷಣ...


ಏರಪೋರ್ಟ್ ನಲ್ಲಿ ನನ್ನ ಅಣ್ಣ ರಫೀಕ್ ತಮ್ಮಂದಿರಾದ ಶಮ್ಮು, ಝಕೀರ್, ತಂಗಿ ಷಹನಾಜ್, ಭಾವ ರಶೀದ್ ಅವರೆಲ್ಲರ ಮಕ್ಕಳು ಮತ್ತಿತರ ಸಂಬಂಧಿಕರು ಅತ್ಯಂತ ಹೃದಯಸ್ಪರ್ಶಿ ಬೀಳ್ಕೊಡುಗೆ ಕೊಟ್ಟರು. ನನ್ನ ಕಣ್ಣಲ್ಲೂ ನೀರಿತ್ತು. ಮಕ್ಕಳಂತೂ ನನ್ನ ಅಮ್ಮನ ತಬ್ಬಿಕೊಂಡು ಅಳುತ್ತಿದ್ದವು. ಓಹ್ ಅದೊಂದು ನಿಜಕ್ಕೂ ಹೃದಯಸ್ಪರ್ಶಿ ಕ್ಷಣ...
ಅನಾರೋಗ್ಯ ಕಾರಣದಿಂದ ನನ್ನ ತಂದೆ ಬಂದಿರಲಿಲ್ಲ .
ಚೆಕ್ ಇನ್ ಆಗುವ ಹೊತ್ತಿನಲ್ಲಿ ನನ್ನ ಅಮ್ಮ ಮತ್ತು ತಂಗಿಯ ಅತ್ತೆ...
ಅದೆಷ್ಟು ಹೊತ್ತು ನನ್ನ ತಮ್ಮಂದಿರು, ತಂಗಿ, ಭಾವ ಮತ್ತವರ ಕುಟುಂಬ, ಮಕ್ಕಳು ಅಳುತ್ತ ಕೈಬೀಸುತ್ತಲೇ ಇದ್ದರು...
ಇಮಿಗ್ರೇಷನ್, ಫಾರಂ ಫಿಲಪ್ ಮತ್ತಿತರ ಫಾರ್ಮಾಲಿಟಿ ನಂತರ ನಮ್ಮ ವಿಮಾನ ಪ್ರವೇಶದ ಗೇಟ್ ತಲುಪಿದಾಗ ಮಧ್ಯರಾತ್ರಿ ಕಳೆದಿತ್ತು. ವಿಮಾನ ನಾಲ್ಕು ಗಂಟೆ ತಡ ಎಂದು ಅನೌನ್ಸ್ ಮಾಡಿದರು. ಆ ಕೊರೆವ ಚಳಿಯಲ್ಲಿ ನಾಲ್ಕು ಗಂಟೆ ಹೋ... ನರಕಯಾತನೆ! ನೋಡಬೇಕಿತ್ತು ನನ್ನ ಅಮ್ಮ ಮತ್ತು ನನ್ನ ತಂಗಿ ಅತ್ತೆಯ ಸ್ಥಿತಿ... ಬೆಂಗಳೂರು ವಿಮಾನ ನಿಲ್ದಾಣದ ಚಳಿಗೇ ಹೀಗೆ ಇನ್ನು ಯುರೋಪಿನ ಚಳಿಗೆ ಏನು ಗತಿ ಎಂದು ಬೆಚ್ಚಿದ್ದೆ...
ಅಂತೂ ಬೆಳಗಿನಜಾವ 5 ಗಂಟೆಗೆ ಏರ್ ಫ್ರಾನ್ಸ್ ವಿಮಾನ ಹತ್ತುವ ಕ್ಷಣ ಬಂತು... ನಮ್ಮನ್ನು ಪ್ಯಾರಿಸ್ ತನಕವಷ್ಟೇ ಕೊಂಡೊಯ್ಯುವ ವಿಮಾನ ಹತ್ತಿದೆವು. ಪ್ಯಾರಿಸ್ ನಿಂದ ನಾರ್ವೆ ರಾಜಧಾನಿ ಒಸ್ಲೊಗೆ ಮತ್ತೊಂದು ವಿಮಾನ ಹತ್ತಬೇಕಿತ್ತು... ವಿಮಾನದೊಳಗಿನ ಕೆಲ ಚಿತ್ರಗಳು ಮುಂದಿನ ಪೋಸ್ಟಿನಲ್ಲಿ ....

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇಷ್ಕ್‌ ಕೆ ಇಮ್ತೆಹಾನ್‌ ಔರ್‌ ಭೀ ಹೈ’.. ಇಮ್ರಾನ್‌ ಖಾನ್‌!

ಪಾಕಿಸ್ತಾನದ ಬಗ್ಗೆ ಮಾತನಾಡುವುದು ಮಹಾ ಪಾಪದ ಕೆಲಸವೇನಲ್ಲ. ಹಾಗೆ ಭಾವಿಸಬೇಕಿಲ್ಲ. ಅದು ಒಪ್ಪಿತವೊ ಇಲ್ಲವೋ, ಅದರ ಬಗ್ಗೆ ಅಲಕ್ಷ್ಯವೋ ನಿರ್ಲಕ್ಷ್ಯವೊ ಏನೇ ಆದರೂ ಅದು ಒಂದು ದೇಶ. ನೆರೆಯ ರಾಷ್ಟ್ರ. ‘ಪಡೋಸಿ...’ ಸಂಬಂಧದಲ್ಲಿ ನಮ್ಮದೇ ಕರುಳಬಳ್ಳಿ. ಭಾಷೆ, ಜನಜೀವನ ಶೈಲಿಯಲ್ಲಿ ಬದಲಾದರೂ ಮನುಷ್ಯ ಭಾವ, ಬದುಕುವ ಸಾಮಾನ್ಯ ಕಾಳಜಿ  ಒಂದೇ. ಹಾಗೆ ನೋಡಿದರೆ ಸಾಂಸ್ಕೃತಿಕವಾಗಿ ಎರಡೂ ದೇಶಗಳು ಅಭಿನ್ನ. ನಮ್ಮಲ್ಲಿರುವ ಹಾಗೆ ಅಲ್ಲಿಯೂ ಪ್ರಜಾಪ್ರಭುತ್ವ ಇದೆ. ಅಲ್ಲಿ ನಡೆಯುವುದು ಇಲ್ಲೂ ನಡೆಯುತ್ತದೆ. ಅಲ್ಲಿ ನಡೆಯಲೇಬಾರದ್ದು ಇಲ್ಲೂ ನಡೆಯಲೇಬಾರದು.  ತೀವ್ರವಾದ ನಮ್ಮಲ್ಲಿನದಕ್ಕಿಂತ ಅಲ್ಲಿ ತುಸು ಹೆಚ್ಚು ಸವಾರಿಗೆ ಹವಣಿಸಿದೆ. ಅಲ್ಲಿನ ಮಿಲಿಟರಿ ಅತಿರೇಕದ್ದು. ಅಕ್ಷಮ್ಯ. ಮತ್ತೆ ದೇಶ ಪುಟ್ಟದಾದಷ್ಟು ಅದಕ್ಕೆ ಭಯಗಳು ಜಾಸ್ತಿ. ಮಿಲಿಟರಿ ಕವಚದಲ್ಲಿ ಅದು ಸುರಕ್ಷಾ ಭಾವವನ್ನು ಕಲ್ಪಿಸಿಕೊಳ್ಳುತ್ತದೆ. ಅದೊಂದು ತರಹದ ಸಮಾಧಾನ. ಆದರೆ ಭ್ರಮೆಯಿಂದ ಕೂಡಿದ್ದು. ಭಯೋತ್ಪಾದನೆ ಕೂಡ ಒಂದರ್ಥದಲ್ಲಿ ಪುಕ್ಕಲುತನವೇ ಆಗುತ್ತದೆ. ಹಿಂಸಾ ಪ್ರವೃತ್ತಿಗೆ ಹೆದರಿಸುವುದೇ ಕೆಲಸ. ಹೆದರಿಸುವವರು ಶೂರರು, ಧೀರರು ಮತ್ತು ಜೀನಿಯಸ್‌ ಆಗಿರಲು ಹೇಗೆ ಸಾಧ್ಯ? ಮುಖ್ಯವಾಗಿ ಅಲ್ಲಿನ ವಿದ್ಯಮಾನಗಳನ್ನು ಗಮನಿಸುವುದಾದರೆ, ಮಿಲಿಟರಿ, ಮತಾಂಧರು, ಭಯೋತ್ಪಾದಕರು, ಭ್ರಷ್ಟರು ಇದೆಲ್ಲದರಿಂದ ಪಾಕಿ ತುಂಬ ರೋಸಿ ಹೋಗಿದ್ದಾನೆ. ಒಂದು ಸೂಕ್ತ ಪರ್ಯಾಯಕ್ಕಾಗಿ ಹಂಬಲಿಸಿದ್...

ನಾನು ನೀನಾಸಂ ಪದವೀಧರನಲ್ಲ...

ನೀನಾಸಂ ಪದವಿ ನನ್ನ ತಲೆಗೆ ಅನಗತ್ಯ ಭಾರ ಸ್ವಾಮೀ. ಅಷ್ಟು ಕಪ್ಪು ಸುಂದರಿಯರ ಭಾರವೇ ನನ್ನ ತಲೆಗೆ ಸಾಕಾಗಿ ಹೋಗಿದೆ. ಇನ್ನು ಇಷ್ಟು 'ವಜನ್' ಪದವಿ ಕಿರೀಟ ಬೇಡವೇ ಬೇಡ. ಸುಮ್ಮನೇ ಖಾಸಗಿಯಾಗಿ ಡೈರಿಯ ಹಾಗೆ ಬೆಚ್ಚಗೆ ನನ್ನ ಜತೆಗೆ ಸದಾ ಇರಲಿ ಎಂದುಕೊಂಡು ಈ ಬ್ಲಾಗ್ ರೂಪಿಸಿದ್ದೇನಷ್ಟೇ. ಅವಧಿ ಬ್ಲಾಗ್ ನನ್ನ ಈ ಪುಟ್ಟ ಯತ್ನಕ್ಕೆ ಬೆನ್ನು ತಟ್ಟಿದ್ದು ಸಂತೋಷವೇ. ಆದರೆ, ನನ್ನ ಬಗ್ಗೆ ಬೆನ್ನುತಟ್ಟುವ ಸಾಲುಗಳ ಬರೆಯುತ್ತ ನೀನಾಸಂ ಪದವೀಧರ ಎನ್ನುವ ಒಂದು ತಪ್ಪು ಮಾಹಿತಿ ಕೂಡ ನುಸುಳಿಕೊಂಡಿದೆ. ಸ್ವಾಮೀ ನಾನೀ ನೀನಾಸಂ ಸುದ್ದಿಗೇ ಹೋದವನಲ್ಲ. ಅಲ್ಲಿ ಕಲಿತು ಬಂದವರ ಜತೆ 'ಬೇಜಾನ್' ಜಗಳ ಮಾಡಿದಿನಿ ಅಷ್ಟೇ.

‘ಪಲ್ಲಟ’ ಒಂದು ಪ್ರಾಮಾಣಿಕ ಪ್ರಯತ್ನ

  (ಇನ್ನೂ ತೆರೆ ಕಾಣದ ‘ಪಲ್ಲಟ’ ಕನ್ನಡ ಸಿನಿಮಾದ ಪ್ರೀಮಿಯರ್‌ ಶೋ  ಬಗ್ಗೆ ) ಸಿನಿಮಾದ ಸೊಗಸೇ ಅಂಥದು. ಯಂತ್ರಗಳಿಂದ ಸೆರೆ ಹಿಡಿದ ಬದುಕು ತೆರೆಯ ಮೇಲೆ ಬಾಳುವಾಗ ಆ ಕ್ಷಣಕ್ಕೆ ಎಲ್ಲ ಹೊಸತೇ ಆಗಿ ಕಾಣಿಸುತ್ತದೆ. ಗತ ಬದುಕು ಹೊಸ ಬದುಕಿನಂತೆ ಹೊಳೆಯುತ್ತದೆ. ಪರದೆ ಮೇಲಿನ ಮೂರು ಗಂಟೆಯ ಬಾಳಲ್ಲಿ ಪ್ರೇಕ್ಷಕ ಅದರ ಅಸಲಿ ನೋವು, ನಲಿವುಗಳ ಬದುಕಿಗಿಳಿಯುತ್ತ ಮೆಲ್ಲಗೆ ಅದರ ಒಟ್ಟು ಹರವಿನಗುಂಟ ಸಾಗಬಹುದು. ಆ ಪುಟ್ಟ ಜರ್ನಿಯಲ್ಲಿ  ಅವನೊಳಗಿನ ಬದುಕಿಗೆ ಹೊಸ ಕಣ್ಣುಗಳು ಮೂಡಬಹುದು. ಅಂತಃಕರಣದ ಸೆಲೆಗಳು ಮತ್ತಷ್ಟು ಜಿನುಗಬಹುದು. ಸಿನಿಮಾದ ಸಾಧ್ಯತೆಗಳು, ಪರಿಣಾಮಗಳು ಹಲವು. ಸಿನಿಮಾಗೆ ಅದರ ಅಂತಃಸತ್ವ ಮುಖ್ಯ. ನೋಡಿ ತಿಳಿವ ಪ್ರಾಸೆಸ್‌ ಇದಾದ್ದರಿಂದ ವಿಶ್ಯುಯಲ್‌ ಟ್ರೀಟಮೆಂಟ್‌ ಕೂಡ ಮುಖ್ಯ.  ‘ಪಲ್ಲಟ’ ಕನ್ನಡ ಸಿನಿಮಾದ ವಸ್ತು  ಸ್ಥಳೀಯ ಸಂಸ್ಕೃತಿಗಳ ಸ್ಥಿತ್ಯಂತರ ಹೇಗೆ ನಿಜ ಜೀವನದಲ್ಲಿ ಕೆಲವರ ಬದುಕನ್ನೇ ಮುಗಿಸಿಬಿಡುತ್ತದೆ ಎನ್ನುವುದು. ಇದು ಅಮಾನವೀಯ ಎನ್ನುವುದು ಚಿತ್ರದ ಒಳದನಿ. ಬಹುಕಾಲ ನಿಲ್ಲಬಲ್ಲ ಮತ್ತು ಕಾಡಬಲ್ಲ ಸಿನಿಮಾ ಆಗುವ ಅವಕಾಶವನ್ನು ಇದು ಸ್ವಲ್ಪದರಲ್ಲಿಯೇ ಕಳಕೊಂಡಿದೆ. ಇದರಾಚೆಗೂ ಚಿತ್ರ ಕೆಲವು ವಿಚಾರಗಳಿಗೆ ಸಂಬಂಧಿಸಿ ಚರ್ಚೆಗೆ ಯೋಗ್ಯವಾಗಿದೆ. ನಾಗರಿಕತೆ ಎಂಬುದು ಜನರೇ ಸೃಜಿಸಿಕೊಂಡಿದ್ದು. ಆಯಾ ಜನಪ್ರದೇಶಗಳಲ್ಲಿ ಕಾಲದ ಅಗತ್ಯಗಳಿಗೆ ತಕ್ಕುದಾದ ವ್ಯವಸ್ಥೆಯೊಂದು ರೂಪುಗೊಂಡಿರುತ್ತದ...