ವಿಷಯಕ್ಕೆ ಹೋಗಿ

ರೈಲ್ವೆ: ಕನಿಷ್ಠ ವ್ಯವಸ್ಥೆ ಮತ್ತು ಸೇವಾ ಕಮಿಟಮೆಂಟ್

ಇದು ನಾರ್ವೆ ರಾಜಧಾನಿ ಸೆಂಟ್ರಲ್ ರೈಲ್ವೆ ಸ್ಟೇಷನ್ನಿನ ಒಂದು ಪ್ಲ್ಯಾಟಫಾರ್ಮ್. ಹಳಿಯಗುಂಟ ಹುಡುಕಿದರೂ ಕಾಣದ ಒಂಚೂರು ಕೊಳೆ. ಇಲ್ಲಿ ಯಾರೂ ಗಲೀಜು ಮಾಡುವುದಿಲ್ಲ, ಉಗುಳುವುದಿಲ್ಲ. ಜನರೇ ಇಟ್ಟುಕೊಂಡ, ಕಾಯ್ದುಕೊಂಡ ವ್ಯವಸ್ಥೆ. ಆದರೆ ನಾವ್ಯಾಕೆ ಹೀಗೆ ಉಳಿಸಿಕೊಳ್ಳುತ್ತಿಲ್ಲ!
ಇಲ್ಲಿ ಯಾರೂ ಯಾರಿಗೂ ತೊಂದರೆ ಮಾಡುವುದಿಲ್ಲ. ಜನರೇ ಕಮ್ಮಿ ಇರುವ ಈ ದೇಶದಲ್ಲಿ ಜನಜಂಗುಳಿ ಇರುವುದಿಲ್ಲ. ಈ ಮಾತು ಸತ್ಯವಾದರೂ ಟ್ರೈನ್  ಪ್ರತಿ ಐದು ನಿಮಿಷಗಳಿಗೊಮ್ಮೆ ಕರಾರುವಕ್ಕಾಗಿ ಬರುತ್ತಲೇ ಇರುವುದರಿಂದ ಹಾಗೆ ಜನಜಂಗುಳಿಯಾಗುವುದಕ್ಕೆ ಅವಕಾಶವಾಗುವುದಿಲ್ಲ ಎನ್ನುವುದು ಇಲ್ಲಿನ ವಾಸ್ತವ. ನಮ್ಮ ದೇಶಕ್ಕೆ ಇದನ್ನು ಕಂಪೇರ್ ಮಾಡುವುದಲ್ಲ. ನಾವು ಇಂಥದೊಂದು ವ್ಯವಸ್ಥೆಯನ್ನು ಹೊಂದಲು ಸಾಧ್ಯವಿದೆ ಎನ್ನುವುದಷ್ಟೇ ನನ್ನ ಕಾಳಜಿ.
ಇದು ಜನರಲ್ ಟ್ರೈನ್. ನಗರದಿಂದ ದೇಶದ ಪ್ರತಿ ಪ್ರದೇಶಕ್ಕೆ ಇಂಥದೇ ಟ್ರೈನ್ ವ್ಯವಸ್ಥೆ ಇದೆ. ನಾನು ರಾಜಧಾನಿಯಿಂದ ದೂರದ ಸ್ಯಾಂಡ್ ವಿಕಾ ಎನ್ನುವ ಒಂದು ಪುಟ್ಟದಾದ ಸುಂದರ ಪ್ರದೇಶಕ್ಕೆ ಈ ಟ್ರೈನ್ ನಲ್ಲಿ ಪ್ರಯಾಣಿಸಿದೆ. ಅಲ್ಲಿರುವ ಮುರಳಿ ಶರ್ಮಾ, ಸುಜಾತಾ ಎನ್ನುವ ದಂಪತಿ ಮನೆಗೆ ಭೇಟಿ ನೀಡುವುದು ನನ್ನ ಪ್ರಯಾಣದ ಉದ್ದೇಶವಾಗಿತ್ತು. ಅದೊಂದು ಅದ್ಭುತ ಆತಿಥ್ಯ ಕಂಡ ಕ್ಷಣ. ಸ್ಯಾಂಡವಿಕಾ ಬಗ್ಗೆ ಮತ್ತೆ ಬರೆಯುತ್ತೇನೆ.
ರಾಜಧಾನಿಯ ಸೆಂಟ್ರಲ್ ಸ್ಟೇಷನ್ ನಿಂದ ಪ್ರತಿಯೊಂದು ಪ್ಲ್ಯಾಟಫಾರ್ಮ್ ಗೆ ಹೀಗೆ ಕನೆಕ್ಟ್ ಮಾಡುವ ಎಸ್ಕೆಲೇಟರ್ ಗಳಿವೆ. ನಿಗದಿತ ಟಿಕೆಟ್ ಪಡೆದು ಇಲ್ಲಿ ನಿಂತರೆ ಸೇರಬೇಕಾದ ಪ್ಲ್ಯಾಟಫಾರ್ಮ ತಲುಪುತ್ತೇವೆ. ಕನಫ್ಯೂಷನ್ ಆಗುವ ಸಾಧ್ಯತೆಯೇ ಇಲ್ಲ. ಇಳಿದ ಮೇಲೆ ಬಂದು ನಿಲ್ಲುವ ಟ್ರೈನ್ ಹತ್ತಿಕೊಂಡರೆ ಸಾಕು ಸೇರಬೇಕಾದ ಸ್ಟೇಷನ್ ತಲುಪುವುದು ಸುಲಭ.   
ಇದು ಶರವೇಗದ ಬುಲೆಟ್ ಟ್ರೈನ್. ಬೆಂಗಳೂರಿಗೆ ಈ ವ್ಯವಸ್ಥೆ ಬರುವ ದಿನಗಳು ದೂರವಿಲ್ಲ. ಇದು ಪ್ರಯಾಣಿಕರನ್ನು ಸೆಂಟ್ರಲ್ ಸ್ಟೇಷನ್ ನಿಂದ ಏರ್ ಪೋರ್ಟ್ ಗೆ ಬರಿಯ 20 ನಿಮಿಷಗಳಲ್ಲಿ ತಲುಪಿಸುತ್ತದೆ. ಅದು ಕಮ್ಮಿಯೆಂದರೂ ನಗರ ಪ್ರದೇಶದಿಂದ 65 ಕಿಮೀ ದೂರದಲ್ಲಿದೆ.
ಇದೇ ಸೆಂಟ್ರಲ್ ರೈಲ್ವೆ ಸ್ಟೇಷನ್. ಸುಂದರ ಒಳನೋಟ. ಯಾವ ಟ್ರೈನ್ ಎಷ್ಟು ಗಂಟೆಗೆ, ಯಾವ ಪ್ಲ್ಯಾಟಫಾರಂ ಎಂಬೆಲ್ಲ ಮಾಹಿತಿಯನ್ನು ಗೊಂದಲವಿಲ್ಲದೇ ಸೈನ್ ಬೋರ್ಡ್ ಗಳು ಧ್ವನಿ ಸಮೇತ ವಿವರಿಸುತ್ತಿರುತ್ತವೆ.
ಇಡೀ ಸೆಂಟ್ರಲ್ ಸ್ಟೇಷನ್ ಸ್ವರೂಪ ಮುಂದೆ ಹೇಗಿರುತ್ತದೆಂಬ ಮಾಹಿತಿಯನ್ನು ಅಲ್ಲಲ್ಲಿ ಅಳವಡಿಸಿರುವ ಟಿವಿ ಮಾನಿಟರ್ ಗಳು ವಿವರಿಸುತ್ತಲೇ ಇರುತ್ತವೆ. ಈ ಯೋಜನೆ ಕೈಗೆತ್ತಿಕೊಳ್ಳಲು ಸಾಕಷ್ಟು ಸಮಯವಿರುವುದರಿಂದ ಈಗಲೇ ಜನರನ್ನು ಅದಕ್ಕೆ ಸಜ್ಜುಗೊಳಿಸುವ ಇಲಾಖೆಯ ವಿಧಾನ, ಮತ್ತು ಕಮಿಟಮೆಂಟ್ ನನ್ನ ಸೆಳೆಯಿತು. ಈ ಶಿಸ್ತು, ಕಮಿಟಮೆಂಟ್ ನಮಗೂ ಸಾಧ್ಯವಿದೆ, ಸಾಧ್ಯವಾಗಿಸಿಕೊಳ್ಳಬೇಕು.
ನಾರ್ವೆ ದೇಶದ ಒಂದು ಜನರಲ್ ಟ್ರೈನ್ ನಲ್ಲಿ ಮೊದಲ ಬಾರಿಗೆ ಪ್ರಯಾಣಿಸಿದುದರ ನೆನಪಿಗೆ..
ಟಿಕೆಟ್/ಪಾಸ್ ಕೊಂಡು ಪ್ಲ್ಯಾಟಫಾರಂನತ್ತ ಪಯಣ ಬೆಳೆಸುವ ಮುನ್ನ...
ನಗರದ ಒಂದು ಪ್ರಮುಖ ಪ್ರದೇಶವಾಗಿರುವ ನ್ಯಾಷನಲ್ ಥಿಯೇಟರ್ ಎನ್ನುವ ಸ್ಟೇಷನ್. ಇಲ್ಲಿಂದಲೂ ದೇಶದ ಎಲ್ಲ ಭಾಗಗಳಿಗೆ ಟ್ರೈನ್ ಮೂಲಕ ಪ್ರಯಾಣಿಸಬಹುದು. ಇದು ಸಂಪೂರ್ಣ ಅಂಡರ್ ಗ್ರೌಂಡ್ ನಲ್ಲಿದೆ. ಇಲ್ಲಿಂದ ಹೊರಕ್ಕೆ ಬಂದು ಕೊಂಚ ದೂರ ಹೆಜ್ಜೆ ಹಾಕಿದರೆ ಅಕೆರ್ ಬ್ರಿಗೆ ತಲುಪಬಹುದು. ಇದು ಪುಟ್ಟ ಕ್ರುಸರ್, ದೋಣಿ ಮತ್ತು ಹಡಗು ನಿಲ್ಲುವ ಬಂದರು. ಇಲ್ಲಿಂದ ದೇಶದ ವಿವಿಧ ದ್ವೀಪಗಳು ಮತ್ತು ಇತರ ದೇಶಗಳಿಗೆ ಜಲಮಾರ್ಗವಾಗಿ ಪ್ರಯಾಣಿಸಬಹುದು.
ಇದು ಬುಲೆಟ್ ಟ್ರೈನ್ ಟಿಕೆಟ್ ಕೌಂಟರ್. ಏರ್ ಪೋರ್ಟ್ ಗೆ ಈ ಟ್ರೈನ್ ನಲ್ಲಿ ಪ್ರಯಾಣಿಸಲು 200 ನಾಕ್ಸ್ (ಕ್ರೋನರ್) ಅಂದರೆ ನಮ್ಮ ಲೆಕ್ಕದಲ್ಲಿ ಹೆಚ್ಚು ಕಮ್ಮಿ 2000 ರೂಪಾಯಿ!
ಜನರಲ್ ಟ್ರೈನ್ ಗಳಿಗೆ ಇಲ್ಲಿಂದಲೇ ಟಿಕೆಟ್ ಅಥವಾ ಪಾಸ್ ಪಡೆದುಕೊಳ್ಳಬಹುದು. ಇದರ ಪಕ್ಕದಲ್ಲೇ ಇಡೀ ದೇಶ ಮತ್ತು ನಗರಕ್ಕೆ ಸಂಬಂಧಿಸಿದ ವರ್ಣರಂಜಿತ ರೂಟ್ ಮ್ಯಾಪ್ ಲಭ್ಯವಿರುತ್ತವೆ. ಪ್ರವಾಸಿ ತಾಣಗಳ ಆಕರ್ಷಕ ಬುಕಲೆಟ್ ಗಳೂ ಉಚಿತವಾಗಿ ದೊರೆಯುತ್ತವೆ. ನಾರ್ಗಿ ಲ್ಯಾಂಗ್ವೇಜ್ ಗೆ ಎಲ್ಲ ಪ್ರಾಶಸ್ತ್ಯ. ವಿದೇಶಿಯರಿಗೆ ಅಲ್ಲಲ್ಲಿ ಇಂಗ್ಲಿಷ್ ಮಾಹಿತಿ.
ಅಂಧರಿಗೆ ಅನುಕೂಲವಾಗಲಿ ಎಂದು ಬ್ರೈಲ್ ಲಿಪಿ ಮಾದರಿಯ ಒಂದು ಕಾಲ್ನಡಿಗೆ ವ್ಯವಸ್ಥೆ. ಮೇಲೆ ಕಾಲಿಟ್ಟು ಇದರಗುಂಟ ಸಾಗಿದರೆ ಟಿಕೆಟ್ ಕೌಂಟರ್, ಎಸ್ಕೆಲೇಟರ್, ಟಾಯ್ಲೆಟ್, ಪ್ಲ್ಯಾಟಫಾರಂ ಮತ್ತಿತರ ಕಡೆ ಸುಲಭವಾಗಿ ತಲುಪಬಹುದು. ವಿಕಲಾಂಗರಿಗೆ ಯಾವ ತೊಂದರೆಯೇ ಆಗದಂತೆ ನಿಲ್ದಾಣಗಳ ಸಿಬ್ಬಂದಿ ನೋಡಿಕೊಳ್ಳುತ್ತದೆ.
ಸ್ಯಾಂಡವಿಕಾ ಎನ್ನುವ ಒಂದು ಸುಂದರ ಪುಟ್ಟ ಪ್ರದೇಶದ ರೈಲ್ವೆ ಸ್ಟೇಷನ್ ಮುಂಭಾಗ. ಇದಕ್ಕೆ ಹೊಂದಿಕೊಂಡೇ ಸಾರಿಗೆ ಬಸ್ ನಿಲ್ದಾಣ, ಟ್ಯಾಕ್ಸಿ ನಿಲ್ದಾಣವಿದೆ.
ಸ್ಯಾಂಡವಿಕಾ ಸ್ಟೇಷನ್ ನ ಎಂಟ್ರಿ. ಎಲ್ಲ ನೀಟ್, ಕ್ಲೀನ್ ಮತ್ತು ಯಾವುದೇ ಗದ್ದಲ, ಗಲೀಜುಗಳಿಲ್ಲ. ಟಿಕೆಟ್ ಕೊಳ್ಳುವುದು ಟ್ರೈನ್ ಹತ್ತುವುದು ಅಷ್ಟೇ. ಖಾನ್ ಮತ್ತು ಗೆಳೆಯ ಮುರುಳಿ ಶರ್ಮಾ ಸ್ಟೇಷನ್ ನ ಒಂದೊಂದು ವಿಶೇಷತೆಯನ್ನು ಮುಂಚೆಯೇ ವಿವರಿಸಿದ್ದರು. ಅವರೇ ಈ ಪ್ರಯಾಣಕ್ಕೆ ನನ್ನ ಅಣಿಗೊಳಿಸಿದ್ದು.
ರಾಜಧಾನಿಯಿಂದ ದೂರದ ಪ್ರದೇಶವೊಂದರ ಜನರಲ್ ಟ್ರೈನ್ ಮತ್ತಲ್ಲಿನ ಪ್ಲ್ಯಾಟಫಾರಂ.
ಅಟೊಮ್ಯಾಟಿಕ್ ಆಗಿ ತೆರಕೊಳ್ಳುವ/ಮುಚ್ಚಿಕೊಳ್ಳುವ ಬಾಗಿಲು, ಬರಲಿರುವ ಮತ್ತು ತಲುಪಲಿರುವ ಪ್ರತಿ ಸ್ಟೇಷನ್ ಬಗ್ಗೆ ಮಾಹಿತಿ ಕೊಡುವ ಬೋರ್ಡ್ ಮತ್ತು ಧ್ವನಿ ವ್ಯವಸ್ಥೆ ಜನರಲ್ ಟ್ರೈನಿಗೂ ಇರುವುದು ಇಲ್ಲಿ ವಿಶೇಷವೇ ಅಲ್ಲ. ಸಾಮಾನ್ಯ. ಕೂರುವ ಕುರ್ಚಿ ವ್ಯವಸ್ಥೆ ಮತ್ತು ಒಳಾಂಗಣ ವಿನ್ಯಾಸ ನಮ್ಮ ಜನಶತಾಬ್ದಿ ಎಕ್ಸ್ ಪ್ರೆಸ್ ನ ಎಸಿ ಬೋಗಿಗಿಂತ ಹತ್ತು ಪಾಲು ಉತ್ತಮ ಎಂದರೂ ಅಡ್ಡಿ ಇಲ್ಲ.
ಒಂದು ದೇಶ, ರಾಜ್ಯ ಮತ್ತಲ್ಲಿನ ಸರ್ಕಾರ ಅಥವಾ ಆಡಳಿತ ಜನರಿಗೆ ಮೂಲ ಸೌಕರ್ಯಗಳನ್ನು ಹೇಗೆ ಒದಗಿಸಿಕೊಡಬೇಕು, ಅವುಗಳ ನಿರ್ವಹಣೆ ಮತ್ತು ಸೇವಾ ಕಮಿಟಮೆಂಟ್ ಹೇಗಿರಬೇಕೆನ್ನುವುದಕ್ಕೆ ಇದೂ ಒಂದು ಮಾದರಿಯಾಗುವಂಥದು. ನಮ್ಮ ದೇಶದ ಮಟ್ಟಿಗಾದರೂ... ಇದೆಲ್ಲ ವ್ಯವಸ್ಥೆಯನ್ನು ಇಲ್ಲಿನ ಪ್ರತಿ ಜನಸಾಮಾನ್ಯ ವರ್ಷಗಳಿಂದ ಅನುಭವಿಸಿದ್ದಾನೆ. ಸಮಯ, ಕ್ವಾಲಿಟಿ, ಕಂಫರ್ಟ್... ಯಾವ ದೃಷ್ಟಿಯಿಂದಲೂ ಜನಸಾಮಾನ್ಯರಿಗೆ ಕಂಪ್ಲೆಂಟ್ ಗಳೇ ಇಲ್ಲ. ಮೆಟ್ರೊದಂಥ ಹೈಯರ್ ವೆರ್ಸನ್ ಗೆ ಹೋಗುವ ಮುನ್ನ ಸಾಮಾನ್ಯ ಸಾರಿಗೆಯಲ್ಲಿ ಈ ಕನಿಷ್ಠ ವ್ಯವಸ್ಥೆಗಳ ಬಗ್ಗೆ ನಾವೆಂದಾದರೂ ಗಮನಹರಿಸಿದ್ದೇವಾ? 

ಕಾಮೆಂಟ್‌ಗಳು

ಶ್ರೀಹೇಳಿದ್ದಾರೆ…
ಒಮ್ಮೆಯಾದರೂ ನೋಡಲೇಬೇಕೆಂದೆನಿಸುತ್ತಿದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ