ಒಂದು ಟಿಪ್ಪಣಿ
ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ.
ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್.
ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್ ಅಂಗಳದಲ್ಲಿ ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್(ಫುಲ್) ಮಿನಿಸ್ಟರ್ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್ ಪವರ್ ಆಜ್ಞಾಪಾಲಕರಂತೆ ತನಿಖಾ ದಳ ನಾಡಿನ ಮೂಲೆ ಮೂಲೆ ಮೂಸಿ ಹೋಯಿತು. ಸುರಕ್ಷಿತ ಕಲಿಗಳು ಗುಜರಾತಿನ ವಿಧಾನಸಭೆಯಲ್ಲಿ ನಿಷ್ಠೆ ಸಾಬೀತುಪಡಿಸಿದರು. ಒಂದಷ್ಟು ಹರಾಂಖೋರತನದ ಪ್ರದರ್ಶನವೂ ಆಯಿತು. ಆಯೋಗ ‘ಕೈ’ ಕೈಮೇಲೆತ್ತಿತು. ಮದಗಜಗಳ ಕಾದಾಟದಿಂದ ರಾಜಕೀಯ ಎನ್ನುವುದು ‘ಡಬ್ಲುಡಬ್ಲುಎಫ್’ ಆಟದಂತೆ ರೋಚಕವಾಗಿತ್ತು.
ಹಿಂದೂತ್ವ ವಿರೋಧಿ ಈಗ ನಾಡಧೋರಣೆಯಾದಂಥ ವಾತಾವರಣವಿದೆ. ಇದರ ದಿಕ್ಕೆಡಿಸಿ ತನ್ನದೊಂದು ಹವಾ ಸೃಷ್ಟಿಸಲು ಸರ್ವಜನಾಂಗದ ಶಾಂತಿತೋಟ ಲಾಲ್ಬಾಗ್ಗೆ ಗುಜರಾತಿನ ರಾಜಕೀಯ ಗೂಳಿಯೊಂದು ನುಗ್ಗಿ ಬಂದಿದೆ. ಹರಕತ್ತುಗಳ ಶುರು ಹಚ್ಚಿಕೊಂಡಿದೆ.
ಕಾಂಗ್ರೆಸ್ನ ಏಕೈಕ ಆಶಾಕಿರಣ ‘ಆಖರೀ ಗಾಂಧಿ’ ಬೃಹತ್ ಸಮಾವೇಶ ಸಾಗಿದ ಹೊತ್ತಲ್ಲಿ ಸದ್ಯದ ಕರ್ನಾಟಕ ‘ಅಹಿಂದ ರಾಜಕೀಯ ಕಣ್ಮಣಿ’ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅದರ ಸಂಭ್ರಮ ಚಳಿಯಲ್ಲಿರುವ ಮಾಧ್ಯಮವನ್ನು ಬಿಸಿಯಪ್ಪುಗೆಗೆಳೆದಿದೆ.
ಈ ನಡುವೆ ಕಲೆಯ ಕರಾಮತ್ತುಗಳೆಲ್ಲ ಮುಗಿದುಹೋದ ನಟನೊಬ್ಬ ಕಣಕ್ಕೆ ಕಣ್ಣಿಟ್ಟಿದ್ದಾನೆ. ಹತಾಶರು ರಾಜಕೀಯ ಗಮನ ಬೇರೆಡೆ ತಿರುಗಿಸಲು ರೂಪಿಸಿದ ತಂತ್ರಗಾರಿಕೆಯ ಒಂದು ಭಾಗವಾಗಲು ಸಜ್ಜಾಗುತ್ತಿದ್ದಾನೆ. ವಿಷಮಗೊಂಡ ಕರಾವಳಿಯ ರಾಜಕಾರಣದಲ್ಲಿ ಮುಖ ಕಳಕೊಂಡವರು ಇಂಥ ಗ್ಲ್ಯಾಮರ್ ಮುಖದ ಹಿಂದೆ ನಿಲ್ಲುವ ತಂತ್ರ ಹೂಡಿದ್ದಾರೆ. ಎಂದಿನಂತೆ ಕರಾವಳಿಗರಿಂದಲೇ ತುಂಬಿರುವ ಚಾನೆಲ್ಗಳು ತಮಗ್ಹತ್ತಿರದವನ ಬಾಯಿಯಾಗಲಿವೆ. ಒಂದಷ್ಟು ಯುವಕರು ಗ್ಲ್ಯಾಮರ್ ಹಿಂದೆ ಬೀಳಬಹುದು. ಒಟ್ಟಿನಲ್ಲಿ ಕೆಲವು ಮುಖ ಉಳಿಸಿಕೊಳ್ಳಲು ಸೃಷ್ಟಿಸಲ್ಪಟ್ಟ ರಾಜಕೀಯದ ‘ನೈಟ್ ವಾಚಮನ್’ (ಕ್ರಿಕೆಟ್ ಪರಿಭಾಷೆಯಲ್ಲಿ) ತರಹದ ನಮೂನಾವೇ ಇದು ಎನ್ನುವ ಅನುಮಾನ.
ಈ ಗದ್ದಲದಲ್ಲಿ ದೊಡ್ಡ ಕಾರ್ಯಕ್ರಮವಿಲ್ಲದೆ ಸೊರಗಿದ ಪ್ರಾದೇಶಿಕ ಪಕ್ಷವೊಂದರ ಏಕೈಕ ಆಶಾಕಿರಣ ’ಅಣ್ಣ’ ಸಿಂಗಪುರ್ಗೆ ಕಳ್ಳಬೆಕ್ಕಿನಂತೆ ಹಾರಿದ್ದಾರೆ. ಅಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ದೇಶ–ರಾಜ್ಯ ರಾಜಕೀಯದ ಆರೋಗ್ಯವೂ ಹದಗೆಟ್ಟಿದ್ದರಿಂದ ಮತ್ತು ಸದ್ಯದ ಅಖಾಡದಲ್ಲಿ ಆಟಕ್ಕಿಳಿಯಲು ಪ್ಲೇಸ್ಮೆಂಟ್ ಇದ್ದೂ ತಾಲೀಮು ಸಾಕಾಗಲಿಲ್ಲವೇನೋ.. ಸಿಂಗಪುರದಲ್ಲೇ ಇದ್ದು ಒಂದಷ್ಟು ತಾಲೀಮು ಮತ್ತು ಸಂಝೋತಾ ವ್ಯವಸ್ಥೆ ಮಾಡಿಕೊಂಡೇ ವಾಪಸ್ ಆಗಬಹುದೇನೋ.
ಒಟ್ಟಿನಲ್ಲಿ ರಾಜಕೀಯ ಅಖಾಡ ಕಲಿಗಳ ಫೈಟ್ಗೆ ಭರ್ಜರಿ ಸಜ್ಜಾಗಿದೆ. ರೋಮಾಂಚನದ ನಿರೀಕ್ಷೆ ಹುಟ್ಟಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳ ಹಣಾಹಣಿ ಒಂದು ಮೋಜಿನಾಟದಂತಾಗಿದೆ. ಅನುಭವಿಸುವ ಎಂದಿನ ಅವಕಾಶ ಪ್ರಜೆಗಳದು.
ಕರಾವಳಿಯಿಂದ ಖರಾಬು ಸುದ್ದಿಗಳೇ ಭೋರ್ಗರೆಯುತ್ತವೆ. ಧರ್ಮಾಂಧರ ಕೆಸರೆರೆಚಾಟದಲ್ಲಿ ರಾಜಕೀಯ ವೈಷಮ್ಯದ ಕೊಲೆಗಳು, ವಿದ್ಯಾರ್ಥಿನಿಯ ಸಾವು ಪ್ರಕರಣ, ಶಾಲಾ ವಿದ್ಯಾರ್ಥಿಗಳ ಬಾಯಿಂದಲೂ ಸರ್ಕಾರವನ್ನು ಉರುಳಿಸುವ ಮಾತು ಹೇಳಿಸುವ ರಾಜಕೀಯ ಹತಾಶೆಗಳು.. ಇತ್ಯಾದಿ.
ಭಾಷಾ ರಾಜಕಾರಣ ಮತ್ತೆ ಮುಂಚೂಣಿಗೆ ಬಂದಿದೆ. ಹಿಂದಿ ಹೇರ ಹೊರಟ ಕೇಂದ್ರದ ಹುನ್ನಾರಕ್ಕೆ ಸೆಡ್ಡು ಹೊಡೆದ ರಾಜ್ಯ ಸರ್ಕಾರ ಅದನ್ನು ಚಿತ್ ಮಾಡಿದೆ. ನಾಡ ಜನ ಬೆಂಬಲಕ್ಕೆ ನಿಲ್ಲುವ ಮೂಲಕ ದಿಟ್ಟ ರಾಜಕೀಯ ನಡೆ ಪ್ರದರ್ಶಿಸಿದೆ. ಹಿಂದೂತ್ವದ ರಾಜಕೀಯ ಪಕ್ಷವೊಂದು ಕೇಂದ್ರದಲ್ಲಿ ಅಧಿಕಾರ ಹಿಡಿದ ಸಂದರ್ಭದಲ್ಲೇ ಲಕ್ಷಾಂತರ ಜನ ತಾವು ಹಿಂದೂ ಅಲ್ಲ, ತಮ್ಮದು ಲಿಂಗಾಯತ ಎನ್ನುವ ಸ್ವತಂತ್ರ ಧರ್ಮ ಎಂದು ಎದೆತಟ್ಟಿ ಘೋಷಿಸಿಕೊಂಡರು. ರಾಜ್ಯ ಸರ್ಕಾರ ಪ್ರತ್ಯೇಕ ಧರ್ಮ ಬಯಸಿದವರ ನೆರವಿಗೆ ನಿಲ್ಲುವ ನಿಲುವು ತಾಳಿತು. ಇದು ದೇಶದ ಅಧಿಕಾರ ಹಿಡಿದ ಪಕ್ಷವೊಂದರ ಅಜೆಂಡಾಕ್ಕೆ ದೊಡ್ಡ್ ಚಾಲೆಂಜ್.
ಗುಜರಾತಿನ ಪಳಗಿದ ರಾಜಕಾರಣಿ ಕಾಂಗ್ರೆಸ್ ನಾಯಕಿಯ ಬಲಗೈ ಭಂಟ ರಾಜ್ಯಸಭೆ ಸೇರುವ ಯತ್ನ ಅಕ್ಷರಶಃ ಜಂಗೀ ನಿಕಾಲಿ ಕುಸ್ತಿ ಪಂದ್ಯವಾಯಿತು. ಅದು ಕರ್ನಾಟಕದತನಕ ಸಾಗಿ ಬಂದಿತು. ರೆಸಾರ್ಟ್ ಅಂಗಳದಲ್ಲಿ ಪಟುಗಳ ರಕ್ಷಿಸುವ ಅನಿವಾರ್ಯತೆ ಸೃಷ್ಟಿಸಿತು. ಉಸ್ತುವಾರಿ ನಾಡಿನ ಪವರ್(ಫುಲ್) ಮಿನಿಸ್ಟರ್ ಹೆಗಲಿಗೇರಿತು. ಪ್ರತೀಕಾರವಾಗಿ ಸೆಂಟ್ರಲ್ ಪವರ್ ಆಜ್ಞಾಪಾಲಕರಂತೆ ತನಿಖಾ ದಳ ನಾಡಿನ ಮೂಲೆ ಮೂಲೆ ಮೂಸಿ ಹೋಯಿತು. ಸುರಕ್ಷಿತ ಕಲಿಗಳು ಗುಜರಾತಿನ ವಿಧಾನಸಭೆಯಲ್ಲಿ ನಿಷ್ಠೆ ಸಾಬೀತುಪಡಿಸಿದರು. ಒಂದಷ್ಟು ಹರಾಂಖೋರತನದ ಪ್ರದರ್ಶನವೂ ಆಯಿತು. ಆಯೋಗ ‘ಕೈ’ ಕೈಮೇಲೆತ್ತಿತು. ಮದಗಜಗಳ ಕಾದಾಟದಿಂದ ರಾಜಕೀಯ ಎನ್ನುವುದು ‘ಡಬ್ಲುಡಬ್ಲುಎಫ್’ ಆಟದಂತೆ ರೋಚಕವಾಗಿತ್ತು.
ಹಿಂದೂತ್ವ ವಿರೋಧಿ ಈಗ ನಾಡಧೋರಣೆಯಾದಂಥ ವಾತಾವರಣವಿದೆ. ಇದರ ದಿಕ್ಕೆಡಿಸಿ ತನ್ನದೊಂದು ಹವಾ ಸೃಷ್ಟಿಸಲು ಸರ್ವಜನಾಂಗದ ಶಾಂತಿತೋಟ ಲಾಲ್ಬಾಗ್ಗೆ ಗುಜರಾತಿನ ರಾಜಕೀಯ ಗೂಳಿಯೊಂದು ನುಗ್ಗಿ ಬಂದಿದೆ. ಹರಕತ್ತುಗಳ ಶುರು ಹಚ್ಚಿಕೊಂಡಿದೆ.
ಕಾಂಗ್ರೆಸ್ನ ಏಕೈಕ ಆಶಾಕಿರಣ ‘ಆಖರೀ ಗಾಂಧಿ’ ಬೃಹತ್ ಸಮಾವೇಶ ಸಾಗಿದ ಹೊತ್ತಲ್ಲಿ ಸದ್ಯದ ಕರ್ನಾಟಕ ‘ಅಹಿಂದ ರಾಜಕೀಯ ಕಣ್ಮಣಿ’ 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅದರ ಸಂಭ್ರಮ ಚಳಿಯಲ್ಲಿರುವ ಮಾಧ್ಯಮವನ್ನು ಬಿಸಿಯಪ್ಪುಗೆಗೆಳೆದಿದೆ.
ಈ ನಡುವೆ ಕಲೆಯ ಕರಾಮತ್ತುಗಳೆಲ್ಲ ಮುಗಿದುಹೋದ ನಟನೊಬ್ಬ ಕಣಕ್ಕೆ ಕಣ್ಣಿಟ್ಟಿದ್ದಾನೆ. ಹತಾಶರು ರಾಜಕೀಯ ಗಮನ ಬೇರೆಡೆ ತಿರುಗಿಸಲು ರೂಪಿಸಿದ ತಂತ್ರಗಾರಿಕೆಯ ಒಂದು ಭಾಗವಾಗಲು ಸಜ್ಜಾಗುತ್ತಿದ್ದಾನೆ. ವಿಷಮಗೊಂಡ ಕರಾವಳಿಯ ರಾಜಕಾರಣದಲ್ಲಿ ಮುಖ ಕಳಕೊಂಡವರು ಇಂಥ ಗ್ಲ್ಯಾಮರ್ ಮುಖದ ಹಿಂದೆ ನಿಲ್ಲುವ ತಂತ್ರ ಹೂಡಿದ್ದಾರೆ. ಎಂದಿನಂತೆ ಕರಾವಳಿಗರಿಂದಲೇ ತುಂಬಿರುವ ಚಾನೆಲ್ಗಳು ತಮಗ್ಹತ್ತಿರದವನ ಬಾಯಿಯಾಗಲಿವೆ. ಒಂದಷ್ಟು ಯುವಕರು ಗ್ಲ್ಯಾಮರ್ ಹಿಂದೆ ಬೀಳಬಹುದು. ಒಟ್ಟಿನಲ್ಲಿ ಕೆಲವು ಮುಖ ಉಳಿಸಿಕೊಳ್ಳಲು ಸೃಷ್ಟಿಸಲ್ಪಟ್ಟ ರಾಜಕೀಯದ ‘ನೈಟ್ ವಾಚಮನ್’ (ಕ್ರಿಕೆಟ್ ಪರಿಭಾಷೆಯಲ್ಲಿ) ತರಹದ ನಮೂನಾವೇ ಇದು ಎನ್ನುವ ಅನುಮಾನ.
ಈ ಗದ್ದಲದಲ್ಲಿ ದೊಡ್ಡ ಕಾರ್ಯಕ್ರಮವಿಲ್ಲದೆ ಸೊರಗಿದ ಪ್ರಾದೇಶಿಕ ಪಕ್ಷವೊಂದರ ಏಕೈಕ ಆಶಾಕಿರಣ ’ಅಣ್ಣ’ ಸಿಂಗಪುರ್ಗೆ ಕಳ್ಳಬೆಕ್ಕಿನಂತೆ ಹಾರಿದ್ದಾರೆ. ಅಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದಾರಂತೆ. ದೇಶ–ರಾಜ್ಯ ರಾಜಕೀಯದ ಆರೋಗ್ಯವೂ ಹದಗೆಟ್ಟಿದ್ದರಿಂದ ಮತ್ತು ಸದ್ಯದ ಅಖಾಡದಲ್ಲಿ ಆಟಕ್ಕಿಳಿಯಲು ಪ್ಲೇಸ್ಮೆಂಟ್ ಇದ್ದೂ ತಾಲೀಮು ಸಾಕಾಗಲಿಲ್ಲವೇನೋ.. ಸಿಂಗಪುರದಲ್ಲೇ ಇದ್ದು ಒಂದಷ್ಟು ತಾಲೀಮು ಮತ್ತು ಸಂಝೋತಾ ವ್ಯವಸ್ಥೆ ಮಾಡಿಕೊಂಡೇ ವಾಪಸ್ ಆಗಬಹುದೇನೋ.
ಒಟ್ಟಿನಲ್ಲಿ ರಾಜಕೀಯ ಅಖಾಡ ಕಲಿಗಳ ಫೈಟ್ಗೆ ಭರ್ಜರಿ ಸಜ್ಜಾಗಿದೆ. ರೋಮಾಂಚನದ ನಿರೀಕ್ಷೆ ಹುಟ್ಟಿಸಿದೆ. ಪ್ರಜಾಪ್ರಭುತ್ವದಲ್ಲಿ ಪ್ರಭುಗಳ ಹಣಾಹಣಿ ಒಂದು ಮೋಜಿನಾಟದಂತಾಗಿದೆ. ಅನುಭವಿಸುವ ಎಂದಿನ ಅವಕಾಶ ಪ್ರಜೆಗಳದು.
ಕಾಮೆಂಟ್ಗಳು