ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು?
'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು.
ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗನ್ ಹಿಡಿದು ಗಡಿ ಕಾಯಲಿ ನೋಡೋಣ. ಕಾರ್ಗಿಲ್, ಭಾರತ-ಪಾಕ್... ಯುದ್ಧಗಳಲ್ಲಿ ಸಾಯುವವರೆಲ್ಲ ಯಾರು? ಹೆಣಗಳ ಲೆಕ್ಕ ಇದ್ದರೆ ಯಾರ ಪಾಲೆಷ್ಟಿದೆ ಚೆಕ್ ಮಾಡಿ ನೋಡಿ.)
ಸಹಮಾನವರನ್ನು ಹರಿಜನ, ಗಿರಿಜನ, ದಲಿತ ಎಂದೆಲ್ಲ ವರ್ಗೀಕರಿಸಿ ಇಟ್ಟೋರು ಯಾರು? ಬರಿಯ ಸಾಂತ್ವನದ ಮಾತು, ಸಹಾಯಗಳಿಂದ ಆ ಜನಸಮುದಾಯದಲ್ಲಿ ಕನಿಷ್ಠ ರಿಲೀಫ್ ಚಟ ರೂಢಿಸಿ ಅದನ್ನೇ ರೋಗವಾಗಿ ಬೆಳೆಸಿದ್ದು ಯಾರು? (ವಾಜಪೇಯಿ, ಸುಷ್ಮಾ, ಅನಂತಕುಮಾರ್... ಅವರಂಥ ಪರಿವಾರ ಅಲ್ಲವೇನು?) ಹೀಗೆ ಇಡೀ ಸಮಾಜವನ್ನು ಖಾಯಂ ರೋಗಗ್ರಸ್ಥವಾಗಿಸಿಟ್ಟು ಎಲ್ಲೆಂದರಲ್ಲಿ ಮಾಮೂಲಿ ದೈಹಿಕ ರೋಗಗಳಿಗೆ ಆಸ್ಪತ್ರೆಗಳನ್ನು ತೆರೆದಿಡುತ್ತ ಅದನ್ನೇ ಅಭಿವೃದ್ಧಿ ಅನ್ನೋದು ಎಂಥ ವಿಪರ್ಯಾಸ! ಮಲೇರಿಯಾ, ಫೈಲೇರಿಯಾ, ಬ್ಯಾಕ್ಟೀರಿಯಾ, ಹೃದ್ರೋಗ... ಗಳಿಗೆ ಮದ್ದು ಕೊಡಬಲ್ಲ ಆಸ್ಪತ್ರೆಗಳು ಸಮಾಜದಲ್ಲಿನ ತಾರತಮ್ಯ ರೋಗಕ್ಕೆ ಮದ್ದು ಕೊಡುತ್ತವೇನು?
ಆರೋಗ್ಯಕರ ಸಮಾಜ, ನಾಡು ಊರ ತುಂಬ ಆಸ್ಪತ್ರೆಗಳನ್ನು ಕಟ್ಟೋದರಿಂದ ರೂಪುಗೊಳ್ಳುತ್ತವೇನು?
ನಿರಾಶ್ರಿತರು, ಭಿಕ್ಷುಕರು ಸತ್ತ ಏಟಿಗೆ ಸುಧಾಕರ್ ಅವರಂಥವರು ಖಾತೆ ಕಳಕೊಳ್ಳುತ್ತಾರೆ. ಇಡೀ ರಾಜ್ಯದಲ್ಲಿ ಡೆಂಗ್ಯು, ಚಿಕುನ್ ಗುನ್ಯಾ, ಎಚ್ 1 ಎನ್ 1... ಹೀಗೆ ಹಲವಾರು ರೋಗಗಳಿಂದ ಸಾಮಾನ್ಯ ಜನರೂ ಸಾಯುತ್ತಲೇ ಇದ್ದಾರೆ. ಆರೋಗ್ಯ ಸಚಿವರ ಖಾತೆಯನ್ನು ಬದಲಾಯಿಸುವ ತಾಕತ್ತು ಸಿಎಂ ಅವರಿಗಿದೆಯಾ?
ಸಿದ್ದರಾಮಯ್ಯ ನಾಡಿನ ಜನತೆಯ ಆಕ್ರೋಶ ಪ್ರತಿನಿಧಿಸಿದ್ದರಿಂದಲೇ ಅಷ್ಟೊಂದು ಲಕ್ಷ ಜನ ಸ್ಪಂದಿಸಿದರು. ಅದನ್ನು ಬಾಡಿಗೆ ಜನಸಂಪತ್ತು ಅನ್ನೋದು ಸರ್ಕಾರಕ್ಕೆ ಸ್ವಾಮಿನಿಷ್ಠ ಬುದ್ಧಿಯನ್ನಷ್ಟೇ ಪ್ರದರ್ಶಿಸುವ ಜನರಿಗೆ ಶೋಭಿಸುವಂಥ ಮಾತಾಗುತ್ತದೆ. ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಇದೆಲ್ಲ ಇತ್ಯರ್ಥ ಮಾಡಿಕೊಳ್ಳಬೇಕಾಗಿತ್ತು ಹೀಗೆ ಬೀದಿಗೇ ಬರಬೇಕಾಗಿರಲಿಲ್ಲ ಎನ್ನಬಹುದೇನೋ. ಆದರೆ, ಹಾಗೆ ಜನರ ಆಕ್ರೋಶವನ್ನು ಸಾರ್ವಜನಿಕವಾಗಿ ಸಂಘಟಿಸುವುದು ಒಂದು ನೈತಿಕ ರಾಜಕೀಯ ಚಟುವಟಿಕೆಯೇ.
ಸುಷ್ಮಾ ಈ ಬಹುಸಂಸ್ಕೃತಿ ದೇಶದ ಸಂಸತ್ತಿನ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕಿ. ಆಕೆ ಬರಿಯ ಹಿಂದೂಗಳ ನಾಯಕಿಯಾಗಿ ವರ್ತಿಸೋದಲ್ಲ. ವರಮಹಾಲಕ್ಷ್ಮಿ ವೃತ ಮಾಡುವುದು ಏನನ್ನು ಸೂಚಿಸುತ್ತದೆ?
ಅದೇ ಸುಷ್ಮಾ ಕ್ರಿಸ್ ಮಸ್ ಆಚರಿಸ್ತಾರಾ? ಮಾರಮ್ಮ, ಮಾರಿಯಮ್ಮ, ಕರಗ ಮಹೋತ್ಸವದಂಥ ಹಿಂದುಳಿದವರ ಜಾತ್ರೆ, ಕುರಿ, ಕೋಣ ಬಲಿಯಂಥ ಆಚರಣೆಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ತಾರಾ? ಇವರೂ ಇಂಡಿಯನ್ನರೇ ಅಲ್ಲವೇನು?ಇಂಡಿಯಾ ದೇಶದ ಈ ಜನರ ನಂಬಿಕೆ, ಆಚರಣೆಗಳೂ ವಿರೋಧ ಪಕ್ಷದ ನಾಯಕರಾದವರಿಗೆ ಮುಖ್ಯವಾಗಬೇಕು.
ಸುಷ್ಮಾ ವರಮಹಾಲಕ್ಷ್ಮಿ ಪೂಜೆ ಮುಖ್ಯವೋ, ಬಳ್ಳಾರಿ ಗಣಿ ಮುಖ್ಯವೋ, ಸಿದ್ದರಾಮಯ್ಯ ಆಶಯ ಮುಖ್ಯವೋ ಇದನ್ನು ಬಳ್ಳಾರಿ ಜನತೆ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆ ನಿರ್ಧರಿಸಬೇಕು.
'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು.
ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗನ್ ಹಿಡಿದು ಗಡಿ ಕಾಯಲಿ ನೋಡೋಣ. ಕಾರ್ಗಿಲ್, ಭಾರತ-ಪಾಕ್... ಯುದ್ಧಗಳಲ್ಲಿ ಸಾಯುವವರೆಲ್ಲ ಯಾರು? ಹೆಣಗಳ ಲೆಕ್ಕ ಇದ್ದರೆ ಯಾರ ಪಾಲೆಷ್ಟಿದೆ ಚೆಕ್ ಮಾಡಿ ನೋಡಿ.)
ಸಹಮಾನವರನ್ನು ಹರಿಜನ, ಗಿರಿಜನ, ದಲಿತ ಎಂದೆಲ್ಲ ವರ್ಗೀಕರಿಸಿ ಇಟ್ಟೋರು ಯಾರು? ಬರಿಯ ಸಾಂತ್ವನದ ಮಾತು, ಸಹಾಯಗಳಿಂದ ಆ ಜನಸಮುದಾಯದಲ್ಲಿ ಕನಿಷ್ಠ ರಿಲೀಫ್ ಚಟ ರೂಢಿಸಿ ಅದನ್ನೇ ರೋಗವಾಗಿ ಬೆಳೆಸಿದ್ದು ಯಾರು? (ವಾಜಪೇಯಿ, ಸುಷ್ಮಾ, ಅನಂತಕುಮಾರ್... ಅವರಂಥ ಪರಿವಾರ ಅಲ್ಲವೇನು?) ಹೀಗೆ ಇಡೀ ಸಮಾಜವನ್ನು ಖಾಯಂ ರೋಗಗ್ರಸ್ಥವಾಗಿಸಿಟ್ಟು ಎಲ್ಲೆಂದರಲ್ಲಿ ಮಾಮೂಲಿ ದೈಹಿಕ ರೋಗಗಳಿಗೆ ಆಸ್ಪತ್ರೆಗಳನ್ನು ತೆರೆದಿಡುತ್ತ ಅದನ್ನೇ ಅಭಿವೃದ್ಧಿ ಅನ್ನೋದು ಎಂಥ ವಿಪರ್ಯಾಸ! ಮಲೇರಿಯಾ, ಫೈಲೇರಿಯಾ, ಬ್ಯಾಕ್ಟೀರಿಯಾ, ಹೃದ್ರೋಗ... ಗಳಿಗೆ ಮದ್ದು ಕೊಡಬಲ್ಲ ಆಸ್ಪತ್ರೆಗಳು ಸಮಾಜದಲ್ಲಿನ ತಾರತಮ್ಯ ರೋಗಕ್ಕೆ ಮದ್ದು ಕೊಡುತ್ತವೇನು?
ಆರೋಗ್ಯಕರ ಸಮಾಜ, ನಾಡು ಊರ ತುಂಬ ಆಸ್ಪತ್ರೆಗಳನ್ನು ಕಟ್ಟೋದರಿಂದ ರೂಪುಗೊಳ್ಳುತ್ತವೇನು?
ನಿರಾಶ್ರಿತರು, ಭಿಕ್ಷುಕರು ಸತ್ತ ಏಟಿಗೆ ಸುಧಾಕರ್ ಅವರಂಥವರು ಖಾತೆ ಕಳಕೊಳ್ಳುತ್ತಾರೆ. ಇಡೀ ರಾಜ್ಯದಲ್ಲಿ ಡೆಂಗ್ಯು, ಚಿಕುನ್ ಗುನ್ಯಾ, ಎಚ್ 1 ಎನ್ 1... ಹೀಗೆ ಹಲವಾರು ರೋಗಗಳಿಂದ ಸಾಮಾನ್ಯ ಜನರೂ ಸಾಯುತ್ತಲೇ ಇದ್ದಾರೆ. ಆರೋಗ್ಯ ಸಚಿವರ ಖಾತೆಯನ್ನು ಬದಲಾಯಿಸುವ ತಾಕತ್ತು ಸಿಎಂ ಅವರಿಗಿದೆಯಾ?
ಸಿದ್ದರಾಮಯ್ಯ ನಾಡಿನ ಜನತೆಯ ಆಕ್ರೋಶ ಪ್ರತಿನಿಧಿಸಿದ್ದರಿಂದಲೇ ಅಷ್ಟೊಂದು ಲಕ್ಷ ಜನ ಸ್ಪಂದಿಸಿದರು. ಅದನ್ನು ಬಾಡಿಗೆ ಜನಸಂಪತ್ತು ಅನ್ನೋದು ಸರ್ಕಾರಕ್ಕೆ ಸ್ವಾಮಿನಿಷ್ಠ ಬುದ್ಧಿಯನ್ನಷ್ಟೇ ಪ್ರದರ್ಶಿಸುವ ಜನರಿಗೆ ಶೋಭಿಸುವಂಥ ಮಾತಾಗುತ್ತದೆ. ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಇದೆಲ್ಲ ಇತ್ಯರ್ಥ ಮಾಡಿಕೊಳ್ಳಬೇಕಾಗಿತ್ತು ಹೀಗೆ ಬೀದಿಗೇ ಬರಬೇಕಾಗಿರಲಿಲ್ಲ ಎನ್ನಬಹುದೇನೋ. ಆದರೆ, ಹಾಗೆ ಜನರ ಆಕ್ರೋಶವನ್ನು ಸಾರ್ವಜನಿಕವಾಗಿ ಸಂಘಟಿಸುವುದು ಒಂದು ನೈತಿಕ ರಾಜಕೀಯ ಚಟುವಟಿಕೆಯೇ.
ಸುಷ್ಮಾ ಈ ಬಹುಸಂಸ್ಕೃತಿ ದೇಶದ ಸಂಸತ್ತಿನ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕಿ. ಆಕೆ ಬರಿಯ ಹಿಂದೂಗಳ ನಾಯಕಿಯಾಗಿ ವರ್ತಿಸೋದಲ್ಲ. ವರಮಹಾಲಕ್ಷ್ಮಿ ವೃತ ಮಾಡುವುದು ಏನನ್ನು ಸೂಚಿಸುತ್ತದೆ?
ಅದೇ ಸುಷ್ಮಾ ಕ್ರಿಸ್ ಮಸ್ ಆಚರಿಸ್ತಾರಾ? ಮಾರಮ್ಮ, ಮಾರಿಯಮ್ಮ, ಕರಗ ಮಹೋತ್ಸವದಂಥ ಹಿಂದುಳಿದವರ ಜಾತ್ರೆ, ಕುರಿ, ಕೋಣ ಬಲಿಯಂಥ ಆಚರಣೆಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ತಾರಾ? ಇವರೂ ಇಂಡಿಯನ್ನರೇ ಅಲ್ಲವೇನು?ಇಂಡಿಯಾ ದೇಶದ ಈ ಜನರ ನಂಬಿಕೆ, ಆಚರಣೆಗಳೂ ವಿರೋಧ ಪಕ್ಷದ ನಾಯಕರಾದವರಿಗೆ ಮುಖ್ಯವಾಗಬೇಕು.
ಸುಷ್ಮಾ ವರಮಹಾಲಕ್ಷ್ಮಿ ಪೂಜೆ ಮುಖ್ಯವೋ, ಬಳ್ಳಾರಿ ಗಣಿ ಮುಖ್ಯವೋ, ಸಿದ್ದರಾಮಯ್ಯ ಆಶಯ ಮುಖ್ಯವೋ ಇದನ್ನು ಬಳ್ಳಾರಿ ಜನತೆ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆ ನಿರ್ಧರಿಸಬೇಕು.
ಕಾಮೆಂಟ್ಗಳು