ವಿಷಯಕ್ಕೆ ಹೋಗಿ

ಯಾವುದು ಮುಖ್ಯ?

ಸಾಮೂಹಿಕ ವಿವಾಹ, ಸುಷ್ಮಾರಿಂದ ವರಮಹಾಲಕ್ಷ್ಮಿ ವೃತ, ವರಸಿದ್ಧಿ ವಿನಾಯಕ ಪೂಜೆ, ಮಲ್ಟಿ ಸ್ಪೆಶ್ಯಾಲಿಟಿ ಆಸ್ಪತ್ರೆ ಉದ್ಘಾಟನೆ... ಇವನ್ನೇ ಅಭಿವೃದ್ಧಿ ಅನ್ನುವವರಿಗೆ ಏನು ಹೇಳಬೇಕು?
'ಬಳ್ಳಾರಿ ಕೆ ಶೋಲೆ' ಬರಹಕ್ಕೆ ಬಂದ ಒಂದು ಪ್ರತಿಕ್ರಿಯೆ ನೋಡಿದೆ. ಅದರಲ್ಲಿ ಮೇಲಿನ ಮೂರ್ನಾಲ್ಕು ಕಾರ್ಯಗಳನ್ನು ಅಭಿವೃದ್ಧಿ ಎಂದು ಗ್ರಹಿಸಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತು ಸಿದ್ದರಾಮಯ್ಯ ನಡೆಸಿದ ನಾಡರಕ್ಷಣೆ ನಡಿಗೆಯಲ್ಲಿ ಸೇರಿದ ಜನತೆಯನ್ನು 'ಬಾಡಿಗೆ ಜನಸಂಪತ್ತು' ಎಂದೆಲ್ಲ ಅರ್ಥೈಸಿದ್ದಾರೆ... ಬಳ್ಳಾರಿ ಜನಕ್ಕೆ ಸುಷ್ಮಾ  ಮುಖ್ಯವೋ, ಸಿದ್ದರಾಮಯ್ಯ ಬಾಡಿಗೆ ಜನಸಂಪತ್ತು ಪ್ರದರ್ಶನ ಮುಖ್ಯವೋ ಎಂದು ಪ್ರಶ್ನಿಸಿದ್ದಾರೆ... ತುಂಬ ಹತಾಶ ಮನೋಭಾವನೆ ಇದು.

ಸಹಮಾನವರನ್ನು ತಾರತಮ್ಯದಿಂದ ಕಾಣುವವರೆಲ್ಲ ದೈವದ ಮುಂದೆ ಕೂರುವ ಅರ್ಹತೆ ನಮಗಷ್ಟೇ ಎನ್ನುವಂತೆ ಕೂತು ಭಜನೆ, ಪೂಜೆ ಮಾಡುವುದು ದೊಡ್ಡ ಭಕ್ತಿ ಏನಲ್ಲ. ಅದು ಸಾಮೂಹಿಕ ಭಕ್ತಿ ಮಾರ್ಗವೂ ಅಲ್ಲ. ಹಿಂದೆ ಗಾಂಧೀಜಿ ಮಾಡುತ್ತಿದ್ದ ರಘುಪತಿ ರಾಘವ ರಾಜಾರಾಂ... ಭಜನೆಗೂ ಅವರಿಗಿಂತ ಭಿನ್ನ ಮಾರ್ಗದಲ್ಲಿ ಸ್ವಾತಂತ್ರ್ಯ ಚಳವಳಿ ಕಟ್ಟಬೇಕೆಂದುಕೊಂಡಿದ್ದವರು 'ಬರಿಯ ಭಜನೆಯಿಂದ ದೇಶ ಕಟ್ಟೋದಕ್ಕಾಗಲ್ಲ...' ಎಂದು ಟೀಕಿಸುತ್ತಿದ್ದರೆನ್ನುವ ವಿಷಯ  ನೆನಪಾಗುತ್ತಿದೆ. ದೇಶಪ್ರೇಮ/ಭಕ್ತಿ ಎಂದರೆ ಭಜನೆ ಅಲ್ಲ... (ಪುರೋಹಿತಷಾಹಿಗಳು ಎಲ್ಲದರ ಭಜನೆ ಮಾಡುತ್ತಾರೆ. ದೇಶಕ್ಕಾಗಿ ಗನ್ ಹಿಡಿದು ಗಡಿ ಕಾಯಲಿ ನೋಡೋಣ. ಕಾರ್ಗಿಲ್, ಭಾರತ-ಪಾಕ್... ಯುದ್ಧಗಳಲ್ಲಿ ಸಾಯುವವರೆಲ್ಲ ಯಾರು? ಹೆಣಗಳ ಲೆಕ್ಕ ಇದ್ದರೆ ಯಾರ ಪಾಲೆಷ್ಟಿದೆ ಚೆಕ್ ಮಾಡಿ ನೋಡಿ.)

ಸಹಮಾನವರನ್ನು ಹರಿಜನ, ಗಿರಿಜನ, ದಲಿತ ಎಂದೆಲ್ಲ ವರ್ಗೀಕರಿಸಿ ಇಟ್ಟೋರು ಯಾರು? ಬರಿಯ ಸಾಂತ್ವನದ ಮಾತು, ಸಹಾಯಗಳಿಂದ ಆ ಜನಸಮುದಾಯದಲ್ಲಿ ಕನಿಷ್ಠ ರಿಲೀಫ್ ಚಟ ರೂಢಿಸಿ ಅದನ್ನೇ ರೋಗವಾಗಿ ಬೆಳೆಸಿದ್ದು ಯಾರು? (ವಾಜಪೇಯಿ, ಸುಷ್ಮಾ, ಅನಂತಕುಮಾರ್... ಅವರಂಥ ಪರಿವಾರ ಅಲ್ಲವೇನು?) ಹೀಗೆ ಇಡೀ ಸಮಾಜವನ್ನು ಖಾಯಂ ರೋಗಗ್ರಸ್ಥವಾಗಿಸಿಟ್ಟು ಎಲ್ಲೆಂದರಲ್ಲಿ ಮಾಮೂಲಿ ದೈಹಿಕ ರೋಗಗಳಿಗೆ ಆಸ್ಪತ್ರೆಗಳನ್ನು ತೆರೆದಿಡುತ್ತ ಅದನ್ನೇ ಅಭಿವೃದ್ಧಿ ಅನ್ನೋದು ಎಂಥ ವಿಪರ್ಯಾಸ! ಮಲೇರಿಯಾ, ಫೈಲೇರಿಯಾ, ಬ್ಯಾಕ್ಟೀರಿಯಾ, ಹೃದ್ರೋಗ... ಗಳಿಗೆ ಮದ್ದು ಕೊಡಬಲ್ಲ ಆಸ್ಪತ್ರೆಗಳು ಸಮಾಜದಲ್ಲಿನ ತಾರತಮ್ಯ ರೋಗಕ್ಕೆ ಮದ್ದು ಕೊಡುತ್ತವೇನು?

ಆರೋಗ್ಯಕರ ಸಮಾಜ, ನಾಡು ಊರ ತುಂಬ ಆಸ್ಪತ್ರೆಗಳನ್ನು ಕಟ್ಟೋದರಿಂದ ರೂಪುಗೊಳ್ಳುತ್ತವೇನು?

ನಿರಾಶ್ರಿತರು, ಭಿಕ್ಷುಕರು ಸತ್ತ ಏಟಿಗೆ ಸುಧಾಕರ್ ಅವರಂಥವರು ಖಾತೆ ಕಳಕೊಳ್ಳುತ್ತಾರೆ. ಇಡೀ ರಾಜ್ಯದಲ್ಲಿ ಡೆಂಗ್ಯು, ಚಿಕುನ್ ಗುನ್ಯಾ, ಎಚ್ 1 ಎನ್ 1... ಹೀಗೆ ಹಲವಾರು ರೋಗಗಳಿಂದ ಸಾಮಾನ್ಯ ಜನರೂ ಸಾಯುತ್ತಲೇ ಇದ್ದಾರೆ. ಆರೋಗ್ಯ ಸಚಿವರ ಖಾತೆಯನ್ನು ಬದಲಾಯಿಸುವ ತಾಕತ್ತು ಸಿಎಂ ಅವರಿಗಿದೆಯಾ?
ಸಿದ್ದರಾಮಯ್ಯ ನಾಡಿನ ಜನತೆಯ ಆಕ್ರೋಶ ಪ್ರತಿನಿಧಿಸಿದ್ದರಿಂದಲೇ ಅಷ್ಟೊಂದು ಲಕ್ಷ ಜನ ಸ್ಪಂದಿಸಿದರು.  ಅದನ್ನು ಬಾಡಿಗೆ ಜನಸಂಪತ್ತು ಅನ್ನೋದು ಸರ್ಕಾರಕ್ಕೆ ಸ್ವಾಮಿನಿಷ್ಠ ಬುದ್ಧಿಯನ್ನಷ್ಟೇ ಪ್ರದರ್ಶಿಸುವ ಜನರಿಗೆ ಶೋಭಿಸುವಂಥ ಮಾತಾಗುತ್ತದೆ. ವಿರೋಧ ಪಕ್ಷದ ನಾಯಕನಾಗಿ ಸದನದಲ್ಲಿ ಇದೆಲ್ಲ ಇತ್ಯರ್ಥ ಮಾಡಿಕೊಳ್ಳಬೇಕಾಗಿತ್ತು ಹೀಗೆ ಬೀದಿಗೇ ಬರಬೇಕಾಗಿರಲಿಲ್ಲ ಎನ್ನಬಹುದೇನೋ. ಆದರೆ, ಹಾಗೆ ಜನರ ಆಕ್ರೋಶವನ್ನು ಸಾರ್ವಜನಿಕವಾಗಿ ಸಂಘಟಿಸುವುದು ಒಂದು ನೈತಿಕ ರಾಜಕೀಯ ಚಟುವಟಿಕೆಯೇ.

ಸುಷ್ಮಾ ಈ ಬಹುಸಂಸ್ಕೃತಿ ದೇಶದ ಸಂಸತ್ತಿನ ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕಿ. ಆಕೆ ಬರಿಯ ಹಿಂದೂಗಳ ನಾಯಕಿಯಾಗಿ ವರ್ತಿಸೋದಲ್ಲ. ವರಮಹಾಲಕ್ಷ್ಮಿ ವೃತ ಮಾಡುವುದು ಏನನ್ನು ಸೂಚಿಸುತ್ತದೆ?
ಅದೇ ಸುಷ್ಮಾ ಕ್ರಿಸ್ ಮಸ್ ಆಚರಿಸ್ತಾರಾ? ಮಾರಮ್ಮ, ಮಾರಿಯಮ್ಮ, ಕರಗ ಮಹೋತ್ಸವದಂಥ ಹಿಂದುಳಿದವರ ಜಾತ್ರೆ, ಕುರಿ, ಕೋಣ ಬಲಿಯಂಥ ಆಚರಣೆಗಳಲ್ಲಿ ಸಾಮೂಹಿಕವಾಗಿ ಪಾಲ್ಗೊಳ್ತಾರಾ? ಇವರೂ ಇಂಡಿಯನ್ನರೇ ಅಲ್ಲವೇನು?ಇಂಡಿಯಾ ದೇಶದ ಈ ಜನರ ನಂಬಿಕೆ, ಆಚರಣೆಗಳೂ ವಿರೋಧ ಪಕ್ಷದ ನಾಯಕರಾದವರಿಗೆ ಮುಖ್ಯವಾಗಬೇಕು.
ಸುಷ್ಮಾ ವರಮಹಾಲಕ್ಷ್ಮಿ ಪೂಜೆ ಮುಖ್ಯವೋ, ಬಳ್ಳಾರಿ ಗಣಿ ಮುಖ್ಯವೋ, ಸಿದ್ದರಾಮಯ್ಯ ಆಶಯ ಮುಖ್ಯವೋ ಇದನ್ನು ಬಳ್ಳಾರಿ ಜನತೆ ಅಷ್ಟೇ ಅಲ್ಲ ಇಡೀ ರಾಜ್ಯದ ಜನತೆ ನಿರ್ಧರಿಸಬೇಕು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮನುಷ್ಯ ಜಾತಿ ತಾನೊಂದೇ ವಲಂ...

ಭಾರತದಲ್ಲಿ ಜಾತಿ ವ್ಯವಸ್ಥೆ ಹೇಗೆ ಹುಟ್ಟಿತು ಎಂಬುದಕ್ಕೆ ಯಾವುದೇ ನಿರ್ಧಿಷ್ಟ ಥಿಯರಿ ಇಲ್ಲ. ಆದರೆ, ಇಲ್ಲಿನ ವರ್ಗ ಸೃಷ್ಟಿ ಮಾತ್ರ ಇರಾನ್ ವ್ಯವಸ್ಥೆಯಂತೇ ಇದೆ.  ಪುರಾತನ ಇರಾನಿನ ಚರಿತ್ರೆಯಲ್ಲಿ ಇಂಥದೊಂದು ವ್ಯವಸ್ಥೆ ಇತ್ತು. ಅದಕ್ಕೆ ಪಿಸ್ತ್ರಾಸ್ ಎನ್ನುತ್ತಾರೆ. ನಮ್ಮಲ್ಲಿ ಅದು ಚಾತುರ್ವರ್ಣವಾಗಿದೆ. ಅಲ್ಲಿ ಅಥ್ರವಾನ್ಸ್ (ಪ್ರೀಸ್ಟ್ ಕ್ಲಾಸ್), ರಥೈಸ್ತಾ (ವಾರಿಯರ್ಸ್), ವಸ್ತ್ರಿಯಾ (ಮರ್ಕಂಟೈಲ್ ಕ್ಲಾಸ್) ಮತ್ತು ಹ್ಯುತಿ (ಆರ್ಟಿಸನ್) ಎನ್ನುವ ವರ್ಗ ವ್ಯವಸ್ಥೆ ಇದೆ. ನಮ್ಮಲ್ಲಿ ಇದನ್ನು ಕಲ್ಪಿಸಿಕೊಂಡರೆ ಪುರೋಹಿತ ಅಥವಾ ಬ್ರಾಹ್ಮಣ (ಅಥ್ರವಾನ್ಸ್), ಕ್ಷತ್ರಿಯ  (ರಥೈಸ್ತಾ), ವೈಶ್ಯ  (ವಸ್ತ್ರಿಯಾ) ಮತ್ತು ಶೂದ್ರ (ಹ್ಯುತಿ) ಎಂದು ಅರ್ಥೈಸಿಕೊಳ್ಳಬಹುದು.  ಆದಿ ಕಾಲದ ಇರಾನಿಯನ್ ವ್ಯವಸ್ಥೆ ಹೀಗೇ ಇತ್ತು. ಅದೇ ನಾಲ್ಕು ವರ್ಗಗಳು ಭಾರತದಲ್ಲೂ ಈಗಲೂ ಚಾಲ್ತಿಯಲ್ಲಿವೆ. ಹೀಗೆ ಒಂದು ಇರಾನ್ ಸಂಬಂಧ ಭಾರತಕ್ಕಿದೆ. ಚರ್ಮದ ಬಣ್ಣ, ನಯ ನಾಜೂಕು, ಕಣ್ಣು, ಬುದ್ಧಿವಂತಿಕೆಯನ್ನು ಹೋಲಿಸಿದರೆ ಭಾರತದ ಅದರಲ್ಲೂ ಉತ್ತರ ಭಾರತದ ಕಾಶ್ಮೀರಿ ಪಂಡಿತರು, ಉತ್ತರ ಪ್ರದೇಶದ ಪಂಡಿತ್, ಚಿತ್ಪಾವನ ಬ್ರಾಹ್ಮಣರು, ನಮ್ಮ ಕರಾವಳಿ ಮತ್ತು ಉತ್ತರ ಕನ್ನಡದ ಹವ್ಯಕರು ಹೆಚ್ಚೂ ಕಮ್ಮಿ ಇರಾನಿಗಳನ್ನು ಹೋಲುತ್ತಾರೆ (ಮೇಲ್ನೋಟಕ್ಕೆ).  ಬಹುಶಃ ಹೀಗೂ ಆಗಿರಬಹುದು, ಆಗ ಇರಾನ್ ನಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಮುಂಚೆಯೂ ಹಲವಾರು ಸುಧಾರಣಾವಾದಿಗಳ ಅಥವಾ ಬಂಡುಕೋರರ

"ಮಣೆಗಾರ" ಬಸಿದಿಟ್ಟ ಒಡಲಾಳದ ನೋವು ನೆನೆದು...

ಹಾಲ್ಕುರಿಕೆ ಥಿಯೇಟರ್ ಕಾನ್ಸೆಪ್ಟ್ ಕನ್ನಡ ರಂಗಭೂಮಿಯಲ್ಲಿ ಹೊಸದೊಂದು ಸಂಚಲನವನ್ನುಂಟು ಮಾಡುತ್ತಿದೆ. ಒಟ್ಟಾರೆ ಭಾರತೀಯ ರಂಗಭೂಮಿ ಕಾಣುತ್ತಿರುವ ಹೊಸತನಕ್ಕೆ ಇದು ಮುಖ್ಯವಾದ ಸಾಕ್ಷಿ. ಅತ್ಯಂತ ಕ್ರಿಯಾಶೀಲ ತುಡಿತದ ರಂಗಕರ್ಮಿ ಹಾಲ್ಕುರಿಕೆ ಶಿವಶಂಕರ (ನಿರ್ದೇಶಕ/ನಾಟಕಕಾರ) ಇತ್ತೀಚೆಗೆ "ಮಣೆಗಾರ" (ತುಂಬಾಡಿ ರಾಮಯ್ಯನವರ ಆತ್ಮಕಥೆ) ಎನ್ನುವ ದಲಿತ ಕಥಾನಕವೊಂದನ್ನು ರಂಗದ ಮೇಲೆ ಅನಾವರಣಗೊಳಿಸಿದರು. ಪ್ರಯೋಗದ ದೃಷ್ಟಿಯಿಂದ ಕೆಲವು ಕೊರತೆಗಳು, ದೋಷಗಳು ಇವೆ. ಅದು ಯಾವುದೇ ಪ್ರಯೋಗಕ್ಕೆ ಇರುವಂಥವೇ. ಆದರೆ ಸಮುದಾಯವೊಂದರ ಒಡಲಾಳದ ನೋವನ್ನು ರಂಗದ ಮೇಲೆ ಬಸಿದಿಟ್ಟಾಗ  ಬೆಚ್ಚಿ ಬೀಳುವಂತಾಯಿತು. ವಿಶೇಷವಾಗಿ ದಲಿತೇತರಲ್ಲಿ ಸಾಮಾಜಿಕ ಪ್ರಜ್ಞೆ, ಜವಾಬ್ದಾರಿಯನ್ನು ಬಡಿದೆಬ್ಬಿಸುವಂಥ ಕಥಾನಕವದು. "ಮಣೆಗಾರ" ಪ್ರೊಸಿನಿಯಂಗಿಂತ ಆಪ್ತರಂಗಭೂಮಿಗೆ ಸೂಕ್ತವಾದ ವಸ್ತು. ಪ್ರಯೋಗ ಒಟ್ಟಾರೆ ಮನುಷ್ಯ ಬದುಕಿನ ನಡುವಿರುವ ಗ್ರೇ ಏರಿಯಾವೊಂದರ ದರುಶನ ಮಾಡಿಸಿತು. ಮೇಲ್ವರ್ಗ ಸಹಮಾನವರನ್ನು ಅದು ಹೇಗೆ ಅಸ್ಪೃಶ್ಯರು ಎಂದು ದೂರಕ್ಕಿಟ್ಟಿತ್ತು, ಶಿಕ್ಷಣದಿಂದ ವಂಚಿತರನ್ನಾಗಿಸುತ್ತಿತ್ತು ಎನ್ನುವುದು ಇದರ ಮೂಲ ಸಂಕಟ. ಇಡೀ ನಾಟಕದಲ್ಲಿ ಬದುಕಿಗಾಗೇ ಸಂಘರ್ಷವಿದೆ. ಆಹಾರಕ್ಕಾಗಿ ಹಾಹಾಕಾರವಿದೆ. socio-cultural  ನೆಲೆಯಲ್ಲಿ ದೊಡ್ಡ ಸಂಘರ್ಷವಿದೆ. ಇದು ರಾಜಕೀಯ ಆಯಾಮದಲ್ಲೂ ಬಹುಮುಖ್ಯವಾದ ಸಂಘರ್ಷವೇ. ಶಿಕ್ಷಣ ಮತ್ತು ಅದರ ಆಧಾರದಲ್ಲಿ ಹುಟ

"ಬದುಕು-ಬಯಲು" ನಾಟಕ ಮತ್ತು ಮಾನವೀಯ ನೆಲೆಯ ಹುಡುಕಾಟ

ಫ್ರಾನ್ಸ್ ನ ಬರಹಗಾರ ಅಲ್ಫ್ರೆಡ್ ಜೆರಿ ಬರೆದ 'ದಿ ಸೂಪರ್ ಮೇಲ್' ಎನ್ನುವ ಕಾದಂಬರಿಯ ಪ್ರೊಟಗಾನಿಸ್ಟ್ ಆ್ಯಂಡ್ರಿ ಮಾರ್ಕೆಲ್ ಒಬ್ಬ ಜಂಟಲ್ ಮನ್, ವಿಜ್ಞಾನಿ ಕೂಡ. ಅವನಿಗೆ ಮಾನವ ಸಾಮರ್ಥ್ಯಕ್ಕೆ ಮಿತಿ ಎಂಬುದೇ ಇಲ್ಲ ಎನ್ನುವುದರಲ್ಲಿ ಬಲವಾದ ನಂಬಿಕೆ. ಆತ ಉಗಿಬಂಡಿ ಜತೆಗೂ ಯಾವುದೇ ವಿಶ್ರಾಂತಿ ಮತ್ತು ತ್ರಾಸಿಲ್ಲದೇ ಕ್ರಮಿಸಿ  ರೇಸ್ ಗೆಲ್ಲಬಲ್ಲ (ಕಾದಂಬರಿಯಲ್ಲಿ ರೈಲು ಮತ್ತು ಸೈಕ್ಲಿಸ್ಟ್ ನಡುವೆ ಒಂದು ರೇಸ್ ನಡೆಯುತ್ತದೆ). ಒಂದೇ ಹೆಂಗಸಿನ ಜತೆ 24 ಗಂಟೆಗಳಲ್ಲಿ 82 ಬಾರಿ ಸಂಭೋಗ ನಡೆಸಬಲ್ಲ 'ಕಾಮಪಟುತ್ವ'ದ ಸಾಹಸಗಳನ್ನೂ ಮಾಡಬಲ್ಲ. ಇದನ್ನು ಪುರುಷಪರಾಕ್ರಮದ ನೆಲೆಯಲ್ಲಿ ನೋಡೋದಾ? ಇಲ್ಲಾ ನಿಸರ್ಗ ಸಹಜ ಸಾಧ್ಯತೆಯ ನೆಲೆಯಲ್ಲಿ ನೋಡುವುದಾ?... - ಇದು ಒಂದು ರೀತಿಯ ವಿಕ್ಷಿಪ್ತ ಮನೋಧರ್ಮದ, ಸೈನ್ಸ್ ಫಿಕ್ಷನ್ ಕಾದಂಬರಿಯ ಸಂಕ್ಷಿಪ್ತ ನೋಟ. ಅಲ್ಫ್ರೆಡ್ ಜೆರಿ ಉತ್ತಮ ನಾಟಕಕಾರನೂ ಹೌದು. ಆತನ 'ಉಬು ರೊಯ್' ಹೆಸರಾಂತ ನಾಟಕಗಳಲ್ಲೊಂದು.    * * * ಜೆರಿ ಬಗ್ಗೆ ಓದುತ್ತಿದ್ದ ಹೊತ್ತಲ್ಲಿ ಹಿಜಡಾವೊಬ್ಬರ ಆತ್ಮಕಥನ ಆಧರಿಸಿದ "ಬದುಕು-ಬಯಲು" ಎನ್ನುವ ನಾಟಕ ವೀಕ್ಷಣೆಗೆ ತಿಪಟೂರಿನ ರಂಗ ಗೆಳೆಯ ನೀನಾಸಂ ಚಂದ್ರು ಆಹ್ವಾನ ನೀಡಿದರು.  ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ನೋಡಿದೆ. ಅದಕ್ಕೂ ಮುಂಚೆ ನಾಟಕದ ವಿಷಯಕ್ಕೆ ಸಂಬಂಧಿಸಿದಂತೆ ನಡೆದ ಸಿ.ಎಸ್. ದ್ವಾರಕಾನಾಥ್, ಗೌರಿ ಲಂಕೇಶ್ ಮತ್ತಿತರ ಚಿಂತಕರ ವಿ